IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!

IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 206 ರನ್ ಗಳಿಸಿತು.ಇನ್ನೊಂದೆಡೆಗೆ ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಅವರ ಓವರ್ ನಲ್ಲಿ ಧೋನಿ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತಂಡವು ಸುಸ್ಥಿತಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

Written by - Manjunath N | Last Updated : Apr 15, 2024, 02:11 AM IST
  • ಏನೇ ಹೇಳಿ ನೀವು ಧೋನಿ ಎಂದರೆ ಕೇವಲ ಬರಿ ಆಟಗಾರನಾಗಿ ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದವರಲ್ಲ,
  • ಅವರ ವ್ಯಕ್ತಿತ್ವದಿಂದಲೂ ಕೂಡ ಧೋನಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ,
  • ಅದಕ್ಕೆ ಹೇಳೋದು ತಾಲಾ ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶಿ ಕಾವ್ಯ... ಅಂತಾ...!
 IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...! title=

ನವದೆಹಲಿ:  ಭಾನುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕೇವಲ 4 ಎಸೆತಗಳಲ್ಲಿ ಅಜೇಯ 20 ರನ್ ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66*) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 206 ರನ್ ಗಳಿಸಿತು.ಇನ್ನೊಂದೆಡೆಗೆ ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಅವರ ಓವರ್ ನಲ್ಲಿ ಧೋನಿ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತಂಡವು ಸುಸ್ಥಿತಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

ಧೋನಿ ತಮ್ಮ 42 ವಯಸ್ಸಿನಲ್ಲಿಯೂ ಸಹ ಕೇವಲ ನಾಲ್ಕು ಎಸೆತಗಳಲ್ಲಿ 20 ರನ್ ಗಳಿಸಿದ್ದು ನಿರ್ಣಾಯಕವಾಗಿತ್ತು, ಹೌದು, ಕೊನೆಯ ನಾಲ್ಕು ಎಸೆತಗಳಲ್ಲಿ ಗಳಿಸಿದ ಈ ರನ್ ಗಳು ತಂಡವು ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು ಎಂದು ಹೇಳಬಹುದು.Image

ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ಮುಗಿಸಿದ ಸಂದರ್ಭದಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದ ಧೋನಿ ಮೆಟ್ಟಿಲುಗಳ ಮೇಲಿದ್ದ ಚೆಂಡನ್ನು ಎತ್ತಿಕೊಂಡು ಯುವ ಅಭಿಮಾನಿಯೋಬ್ಬರಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಕುರಿತಾಗಿ ನೆಟ್ಟಿಗರು ಧೋನಿ ಅವರ ಆಟವಷ್ಟೇ ಅಲ್ಲದೆ ಅವರ ನಡೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಏನೇ ಹೇಳಿ ನೀವು, ಧೋನಿ ಎಂದರೆ ಕೇವಲ ಬರಿ ಆಟಗಾರನಾಗಿ ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದವರಲ್ಲ, ಅವರ ವ್ಯಕ್ತಿತ್ವದಿಂದಲೂ ಕೂಡ ಧೋನಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ, ಅದಕ್ಕೆ ಹೇಳೋದು ತಲಾ ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶಿ ಕಾವ್ಯ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

 

 

Trending News