ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದಂತೆ ಈಗ ಅವರ ನಂಬರ್ 7 ಜರ್ಸಿಗೂ ನಿವೃತ್ತಿ ಘೋಷಿಸಬೇಕೆಂದು ಹಲವಾರು ಕ್ರಿಕೆಟ್ ಆಟಗಾರರು ಹಾಗೂ ಅಭಿಮಾನಿಗಳು ಈ ಬೇಡಿಕೆಯನ್ನು ಇಟ್ಟಿದ್ದಾರೆ.
ನವದೆಹಲಿ: ಸಚಿನ್ ತೆಂಡೂಲ್ಕರ್ ಅವರ ಪೀಳಿಗೆಯ ಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದರು, ಆದರೆ ಅವರು ಕ್ರಿಕೆಟ್ನ ಅತಿದೊಡ್ಡ ಟ್ರೋಫಿ, ಏಕದಿನ ವಿಶ್ವಕಪ್ ಗೆಲ್ಲದೆ ಅಥವಾ ಭಾರತವನ್ನು ವಿಶ್ವದ ನಂ.1 ಟೆಸ್ಟ್ ತಂಡವಾಗಿ ನೋಡದೆ ನಿವೃತ್ತಿ ಹೊಂದುವ ಸಾಧ್ಯತೆ ಇತ್ತು ಆದರೆ, ಎಂ.ಎಸ್. ಧೋನಿ ಅವರ ನಾಯಕತ್ವದಲ್ಲಿ ಅವರು ಎರಡನ್ನೂ ಪಡೆದರು.
ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಅವರು ಏಕದಿನ ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದಲ್ಲಿ ಇಬ್ಬರು ಸ್ಥಿರರಾಗಿದ್ದರು. ಈ ಅಪ್ರತಿಮ ಜೋಡಿ ಅನೇಕ ಪಂದ್ಯಗಳನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಕ್ರೀಡಾ ಜಗತ್ತಿನ ಮಹತ್ವದ ಬೆಳವಣಿಗೆಯೊಂದರಲ್ಲಿ Dhoni ಹಾಗೂ Raina ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ತಮ್ಮ ಅಭಿಮಾನಿಗಳು ನಿಬ್ಬೇರಗಾಗುವಂತೆ ಮಾಡಿದ್ದಾರೆ. ಉಭಯ ದಿಗ್ಗಜ ಆಟಗಾರರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ನಿವೃತಿ ಬೆನ್ನಲ್ಲೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು. ಧೋನಿ ಹಾಗೆ ರೈನಾ ಕೂಡ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ನಿವೃತ್ತಿಯನ್ನು ಅಧಿಕೃತಗೊಳಿಸಿದ್ದಾರೆ.
ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪ್ರಾರಂಭವಾಗುವ ಐಪಿಎಲ್ 2020 ಕ್ಕೆ ಮರಳಲು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಸಜ್ಜಾಗಿದ್ದಾರೆ.ಧೋನಿಯ ಹೆಲಿಕಾಪ್ಟರ್ಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ ಎಂದು ಸುರೇಶ್ ರೈನಾ ಹೇಳಿದ ಒಂದು ದಿನದ ನಂತರ ಅವರು ರೈನಾ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತೋರುತ್ತದೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಪಾತ್ರವನ್ನು ಕ್ರಾಂತಿಗೊಳಿಸಿದ ಹೆಗ್ಗಳಿಕೆಗೆ ಆಡಮ್ ಗಿಲ್ಕ್ರಿಸ್ಟ್ ಪಾತ್ರರಾಗಿದ್ದಾರೆ. ಸ್ಟಂಪ್ಗಳ ಹಿಂದೆ ಸುರಕ್ಷಿತವಾಗಿದ್ದ ಗಿಲ್ಕ್ರಿಸ್ಟ್ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಓಪನರ್ ಆಗಿ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ನಂ.7ನೇ ಸ್ಥಾನದಲ್ಲಿ ಅದ್ಬುತವಾಗಿ ಆಡಿದರು.
ಸೌತಾಂಪ್ಟನ್ನ ಏಗಾಸ್ ಬೌಲ್ನಲ್ಲಿ ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಮಂಗಳವಾರ ಇಂಗ್ಲೆಂಡ್ ನಾಯಕ ಇಯೊನ್ ಮೋರ್ಗಾನ್ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂ.ಎಸ್. ಧೋನಿ ನಾಯಕನಾಗಿ ಗಳಿಸಿದ ಹೆಚ್ಚಿನ ಸಿಕ್ಸರ್ ಅಂತರರಾಷ್ಟ್ರೀಯ ದಾಖಲೆಯನ್ನು ಮುರಿದರು.
ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಯಾವಾಗಲೂ ಕ್ರಿಕೆಟ್ ಕುರಿತಾದ ವಿಚಾರದಲ್ಲಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಈಗ ಅವರಿಗೆ ಭಾರತದ ಎಂ.ಎಸ್ ಧೋನಿ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ನಡುವೆ ಉತ್ತಮ ನಾಯಕನನ್ನು ಹೆಸರಿಸಲು ಕೇಳಿದಾಗ ಪಾಕಿಸ್ತಾನ ಆಲ್ರೌಂಡರ್ ನೇರ ಮತ್ತು ಸರಳ ಉತ್ತರವನ್ನು ನೀಡಿದ್ದಾರೆ.
ಗೌತಮ್ ಗಂಭೀರ್ ಅವರು ಡಿಸೆಂಬರ್ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ಅವರು ಈಗ ಸಕ್ರಿಯ ರಾಜಕಾರಣಿಯಾಗಿದ್ದರೂ, ಕೂಡ ಅವರು ಕ್ರಿಕೆಟ್ ವಿಚಾರವಾಗಿ ಆಗಾಗ ತಮ್ಮ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುತ್ತಾರೆ.ಇತ್ತೀಚೆಗೆ ಮಾಜಿ ನಾಯಕ ಎಂ.ಎಸ್. ಧೋನಿ ಅವರು 'ಅದೃಷ್ಟದ ನಾಯಕ' ಎಂದು ಹೇಳಿ ಸುದ್ದಿಯಲ್ಲಿದ್ದಾರೆ.
ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ನಲ್ಲಿನ ಅತಿದೊಡ್ಡ ಸೂಪರ್ಸ್ಟಾರ್ ಮತ್ತು ಸುಲಭವಾಗಿ ಸಂವಹನ ನಡೆಸಬಹುದಾದ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು ಎಂದು ವೆಸ್ಟ್ ಇಂಡೀಸ್ನ ಆಲ್ರೌಂಡರ್ ಡ್ವೇನ್ ಬ್ರಾವೋ ಹೇಳಿದ್ದಾರೆ.
ಕ್ರಿಕೆಟಿಂಗ್ ವೃತ್ತಿಜೀವನವನ್ನು ತೊರೆದ ನಂತರ ಧೋನಿ ಏನು ಮಾಡುತ್ತಾರೆ? ಇತರ ಕ್ರಿಕೆಟಿಗರಂತೆ ಕಾಮೆಂಟ್ರಿ ನೀಡುತ್ತಾರಾ? ತರಬೇತುದಾರರಾಗುತ್ತಾರೆಯೇ ಅಥವಾ ಬೇರೆ ಏನಾದರೂ ಕೆಲಸ ಮಾಡುತ್ತಾರೆಯೇ?
ಎಂ.ಎಸ್ ಧೋನಿ ಅವರ ಬಗೆಗೆ ಬಾಂಗ್ಲಾದೇಶದ ಮಹಮೂದುಲ್ಲಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಬಾಂಗ್ಲಾದೇಶದ ಈ ಆಲ್ರೌಂಡರ್ ಅವರು ಧೋನಿಯ ವೀಡಿಯೋ ತುಣುಕುಗಳನ್ನು ವೀಕ್ಷಿಸುವ ಮೂಲಕ ತಮ್ಮ ಸಮಯವನ್ನು ಕಳೆಯುವುದಾಗಿ ಹೇಳಿಕೊಂಡಿದ್ದಾರೆ. ಆ ಮೂಲಕ ಅವರ ಬ್ಯಾಟಿಂಗ್ನ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ಆಶಯದೊಂದಿಗೆ ಬಹಿರಂಗಪಡಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಏತನ್ಮಧ್ಯೆ ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಇಡೀ ವಿಶ್ವ ಕ್ಯಾಪ್ಟನ್ ಕೂಲ್ ಎಂದು ಬಣ್ಣಿಸುತ್ತದೆ. ಅಂದಹಾಗೆ ಧೋನಿ ಯಾವಾಗಲೂ ಮೈದಾನದಲ್ಲಿ ಶಾಂತವಾಗಿರುತ್ತಾರೆ.
ರಿಕಿ ಪಾಂಟಿಂಗ್ ಮತ್ತು ಎಂ.ಎಸ್. ಧೋನಿಯಂತಹ ನಾಯಕತ್ವದಲ್ಲಿ ಆಡಿರುವ ಮೈಕಲ್ ಹಸ್ಸಿ ಈ ಇಬ್ಬರು ನಾಯಕರನ್ನು ತೀರಾ ಹತ್ತಿರದಿಂದ ಬಲ್ಲಂತವರು ಈ ಹಿನ್ನಲೆಯಲ್ಲಿ ಈಗ ಈ ಇಬ್ಬರ ನಡುವೆ ಯಾರು ಶ್ರೇಷ್ಟರು ಎನ್ನುವ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.