ಗುರುವಾರ ಅಫ್ಘಾನಿಸ್ತಾನದಿಂದ ದೆಹಲಿಗೆ ಬರುತ್ತಿದ್ದ ಸುಮಾರು 140 ಸಿಖ್ಖರನ್ನು ವಿಮಾನ ಹತ್ತದಂತೆ ತಾಲಿಬಾನಿಗಳು ತಡೆದಿದ್ದಾರೆ. ಈ ಸಿಖ್ಖರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದರು.
ತಾಲಿಬಾನ್ಗಳಿಗೆ ಹೆದರಿ ಆಫ್ಘನ್ನರು ದೇಶವನ್ನು ತೊರೆಯುವ ಭರವಸೆಯಿಂದ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪುತ್ತಿದ್ದಾರೆ. ಆದರೆ ಇಲ್ಲಿ ಅವರು ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ-ಪಾನೀಯಗಳಿಗೆ ಕೇಳುತ್ತಿರುವ ಬೆಲೆ ಎಷ್ಟೆಂದು ತಿಳಿದರೆ ಆಘಾತವಾಗುತ್ತದೆ.
US Warns Terror Attack threat at Kabul Airport: ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಎಚ್ಚರಿಕೆ ನೀಡಿದೆ ಮತ್ತು ತನ್ನ ನಾಗರಿಕರಿಗೆ ವಿಮಾನ ನಿಲ್ದಾಣದಿಂದ ದೂರವಿರುವಂತೆ ಸೂಚಿಸಿದೆ.
ಕಳೆದ ವಾರ ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ಹಿನ್ನಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರ ನಾಗರಿಕರನ್ನು ಕಾಬೂಲ್ನಿಂದ ಸ್ಥಳಾಂತರಿಸಲು ಆಪರೇಷನ್ ದೇವಿ ಶಕ್ತಿಯನ್ನು ಭಾರತ ಸರ್ಕಾರ ನಡೆಸುತ್ತಿದೆ.
ಅಫ್ಘಾನಿಸ್ತಾನದದಿಂದಾಗಿ ಎದುರಾಗುವ ಪರಿಸ್ಥಿತಿಯನ್ನು ಭಯೋತ್ಪಾದನೆಯನ್ನು ಎದುರಿಸುವ ರೀತಿಯಲ್ಲಿಯೇ ನಿಭಾಯಿಸಲಾಗುವುದು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
Afghanistan Crisis: ಭಾರತ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಕಾಬೂಲ್ನಿಂದ ಸ್ಥಳಾಂತರಿಸಿದೆ ಮತ್ತು ರಷ್ಯಾ ತನ್ನ ರಾಜತಾಂತ್ರಿಕರನ್ನು ಇನ್ನೂ ಕಾಬೂಲ್ನಲ್ಲಿಯೇ ಇರಿಸಿದೆ. ಭಾರತವು ಬಹುಶಃ ತಾಲಿಬಾನ್ನೊಂದಿಗೆ ಮಾತುಕತೆಯ ಮಾರ್ಗ ತೆರೆಯಲು ಬಯಸುತ್ತಿದೆ.
Operation Devi Shakti - ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನಿಗಳು (Taliban) ವಶಕ್ಕೆ ಪಡೆದ ನಂತರ, ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಇದುವರೆಗೆ 750 ಕ್ಕೂ ಹೆಚ್ಚು ಭಾರತೀಯರು (Indians Rescue From Afghanistan), ಇತರ ದೇಶಗಳ ಜನರು ಸೇರಿದಂತೆ, ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡಿದ್ದಾರೆ. ಇದೀಗ ಭಾರತ ಸರ್ಕಾರ ಈ ಕಾರ್ಯಾಚರಣೆಗೆ 'ದೇವಿ ಶಕ್ತಿ' ಎಂದು ಹೆಸರನ್ನಿಟ್ಟಿದೆ.
Afghanistan Taliban Crisis: ಈ ವಿಮಾನವು ತನ್ನ ನಾಗರಿಕರನ್ನು ರಕ್ಷಿಸಲು ಕಾಬೂಲ್ ತಲುಪಿತ್ತು. ಉಕ್ರೇನ್ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆಸೆನಿನ್ ಮಂಗಳವಾರ ಈ ಮಾಹಿತಿಯನ್ನು ನೀಡಿದ್ದಾರೆ. ಅಫ್ಘಾನಿಸ್ತಾನದಿಂದ ಹೊರಹೋಗಲು ಇನ್ನೂ ಕಾಯುತ್ತಿರುವ ಸುಮಾರು 100 ಉಕ್ರೇನಿಯನ್ ಪ್ರಜೆಗಳಿದ್ದಾರೆ ಎಂದು ಉಕ್ರೇನ್ನ ಅಧ್ಯಕ್ಷೀಯ ಕಚೇರಿ ಹೇಳಿದೆ.
ತಾಲಿಬಾನಿ ಆಳ್ವಿಕೆಯಲ್ಲಿ ಮಹಿಳೆಯರ ಜೀವನವು ನರಕಕ್ಕಿಂತ ಕೆಟ್ಟದಾಗಿದೆ. ತಾಲಿಬಾನ್ ಮಹಿಳೆಯರಿಗೆ ನೇಲ್ ಪಾಲಿಶ್ ಬಳಸದಂತೆ ಸೂಚನೆ ನೀಡಿದೆ. ಇದನ್ನು ಉಲ್ಲಂಘಿಸಿದರೆ ಬೆರಳುಗಳನ್ನು ಕತ್ತರಿಸಲಾಗುವುದು ಎಂದೂ ಹೇಳಲಾಗಿದೆ. ಅದೇ ಸಮಯದಲ್ಲಿ, ಯುವಕರು ಜೀನ್ಸ್ ಧರಿಸಿದರೂ ಶಿಕ್ಷೆ ನೀಡಲಾಗುವುದು ಎನ್ನಲಾಗಿದೆ.
ಪಂಜಶೀರ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಮುನ್ನಡೆಯುತ್ತಿರುವ ತಾಲಿಬಾನ್ ದೊಡ್ಡ ಹಿನ್ನಡೆ ಅನುಭವಿಸಿದೆ ಮತ್ತು ಬಂಡುಕೋರರು ಹೆಚ್ಚಿನ ಸಂಖ್ಯೆಯ ತಾಲಿಬಾನ್ಗಳನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ನಿರಂತರ ಹೊಂಚುದಾಳಿಯಿಂದ ತಾಲಿಬಾನ್ ಬೆರಗಾಗಿದೆ.
ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ಎಂಬ ಸುದ್ದಿಯ ನಡುವೆ, ದೇಶಗಳು ತಮ್ಮ ರಾಜತಾಂತ್ರಿಕರು ಮತ್ತು ಇತರ ನಾಗರಿಕರನ್ನು ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಹೊರಹಾಕಲು ಹರಸಾಹಸ ಪಡುತ್ತಿವೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ (ಆಗಸ್ಟ್ 22) ಯುದ್ದ ಪೀಡಿತ ಅಫ್ಘಾನಿಸ್ತಾನದಿಂದ ಕೇರಳೀಯರು ಸೇರಿದಂತೆ ಭಾರತೀಯರನ್ನು ಸ್ಥಳಾಂತರಿಸುವ ಕೇಂದ್ರದ ಪ್ರಯತ್ನಗಳು ಶ್ಲಾಘನೀಯ ಎಂದು ಹೇಳಿದರು.
Why Enactment Of CAA Necessary - ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಆಕ್ರಮಣದ ನಂತರ, ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯದ ಜನರು ಬಹಳ ಭಯದಲ್ಲಿದ್ದಾರೆ. ಅವರು ತಮ್ಮ ಜೀವ ಉಳಿಸಲು ಮತ್ತು ಭಾರತದಲ್ಲಿ ಆಶ್ರಯ ಪಡೆಯಲು ಹತಾಶರಾಗಿದ್ದಾರೆ. ಇವರಲ್ಲಿ ಕೆಲವರು ಕಾಬೂಲ್ನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
First Taliban Fatwa - ಅಫ್ಘಾನಿಸ್ಥಾನದ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಅಧಿಕಾರಿಗಳು ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದೇಶ ಜಾರಿಗೊಳಿಸಿ, ಇನ್ಮುಂದೆ ಹುಡುಗಿಯರನ್ನು ಹುಡುಗರ ಜೊತೆಗೆ ಒಂದೇ ತರಗತಿಯಲ್ಲಿ ಓದಲು ಅವಕಾಶ ನೀಡಲಾಗುವುದಿಲ್ಲ ಎಂದಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.