ವಿರಾಟ್‌ ಕೊಹ್ಲಿ, ಎಬಿಡಿ ಅಲ್ಲ, ಈ ಸ್ಟಾರ್‌ ಬ್ಯಾಟ್ಸ್‌ಮನ್‌ ಕಂಡ್ರೆ ಗೌತಮ್‌ ಗಂಭೀರ್‌ಗೆ ಭಯ..!

KKR vs MI : ಭಾರತ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಕಂಡ್ರೆ ಕೋಲ್ಕತಾ ನೈಟ್‌ ರೈಡರ್ಸ್ ಮೆಂಟರ್‌ ಗೌತಮ್‌ ಗಂಭೀರ್‌ ಅವರಿಗೆ ಭಯವಂತೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನ್‌ ಗೊತ್ತೆ..? ಇಲ್ಲಿದೆ ನೋಡಿ..

Written by - Krishna N K | Last Updated : May 3, 2024, 07:17 PM IST
    • ಗಂಭೀರ್‌ ಅವರಿಗೆ ವಿರಾಟ್‌ ಅಂದ್ರೆ ಯಾವುದೇ ಭಯವಿಲ್ಲ.
    • ಬದಲಿಗೆ ಈ ಸ್ಟಾರ್‌ ಬ್ಯಾಟ್ಸ್‌ಮ್ಯಾನ್‌ ಕಂಡ್ರೆ ತುಂಬಾ ಭಯವಂತೆ.
    • ಯಾರು ಆ ಬ್ಯಾಟ್ಸ್‌ಮನ್‌, ಏನ್‌ ಕಥೆ..? ಇಲ್ಲಿದೆ ಇಂಟ್ರಸ್ಟಿಂಗ್‌ ವರದಿ..
ವಿರಾಟ್‌ ಕೊಹ್ಲಿ, ಎಬಿಡಿ ಅಲ್ಲ, ಈ ಸ್ಟಾರ್‌ ಬ್ಯಾಟ್ಸ್‌ಮನ್‌ ಕಂಡ್ರೆ ಗೌತಮ್‌ ಗಂಭೀರ್‌ಗೆ ಭಯ..! title=

Gautam Gambhir on Rohit Sharma : ಟೀಂ ಇಂಡಿಯಾ ಮತ್ತು ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಮೈದಾನದಲ್ಲೇ ಒಬ್ಬರ ಮೇಲೋಬ್ಬರು ಕಿಡಿಕಾರಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲದೆ, ಈ ಕುರಿತ ವಿಡಿಯೋ ಸಹ ವೈರಲ್‌ ಆಗಿತ್ತು. 

ಆದ್ರೆ ವಿಚಾರ ಏನಪ್ಪಾ ಅಂದ್ರೆ, ಗಂಭೀರ್‌ ಅವರಿಗೆ ವಿರಾಟ್‌ ಅಂದ್ರೆ ಯಾವುದೇ ಭಯವಿಲ್ಲ. ಬದಲಿಗೆ ಈ ಸ್ಟಾರ್‌ ಬ್ಯಾಟ್ಸ್‌ಮ್ಯಾನ್‌ ಕಂಡ್ರೆ ತುಂಬಾ ಭಯವಂತೆ. ಸ್ವತಃ ಈ ಕುರಿತು ಗಂಭೀರ್‌ ಅವರು ಹೇಳಿಕೊಂಡಿದ್ದಾರೆ. ಹಾಗಿದ್ರೆ, ಯಾರು ಆ ಬ್ಯಾಟ್ಸ್‌ಮನ್‌, ಏನ್‌ ಕಥೆ..? ಇಲ್ಲಿದೆ ಇಂಟ್ರಸ್ಟಿಂಗ್‌ ವರದಿ..

ಇದನ್ನೂ ಓದಿ:IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!

ಭಾರತ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಕಂಡ್ರೆ ಕೋಲ್ಕತಾ ನೈಟ್‌ ರೈಡರ್ಸ್ ಮೆಂಟರ್‌ ಗೌತಮ್‌ ಗಂಭೀರ್‌ ಅವರಿಗೆ ಭಯವಂತೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರೋಹಿತ್‌ ಶರ್ಮಾ ನನಗೆ ಈ ಹಿಂದೆ ಭಯ ಹುಟ್ಟಿಸಿದ್ದರು, ನನಗೆ ನಿದ್ರೆ ಬಾರದಂತೆ ಮಾಡಿದ್ದರು ಅಂತ ಹೇಳಿದ್ದಾರೆ. 

ಹೌದು.. ಇಂದು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್‌ ರೈಡರ್ಸ್ ಮ್ಯಾಚ್‌ ಇದೆ. ಈ ಕುರಿತು ಮಾತನಾಡುವಾಗ ಗೌತಮ್‌ ರೋಹಿತ್‌ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ರೋಹಿತ್‌ ಶರ್ಮಾ ರಾತ್ರಿ ನಿದ್ರೆ ಇಲ್ಲದಂತೆ ಮಾಡಿದ್ದರು, ನನಗೆ ಭಯ ಹುಟ್ಟಿಸಿದ್ದರು ಅಂತ ಹೇಳಿದ್ದಾರೆ. 

ಇದನ್ನೂ ಓದಿ:ಟೆಸ್ಟ್ ರ್ಯಾಂಕಿಂಗ್’ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ! ಅಗ್ರಸ್ಥಾನದಲ್ಲಿರುವ ತಂಡ ಯಾವುದು?

ಸ್ಟಾರ್‌ ಸ್ಪೋರ್ಟ್‌ ಜೊತೆ ಮಾತನಾಡಿದ ಗಂಭೀರ್‌, ಒಬ್ಬೇ ಒಬ್ಬ ಬ್ಯಾಟ್ಸ್‌ಮನ್‌ಗೆ ನಾನು ಭಯ ಪಟ್ಟಿದ್ದೇನೆ ಅಂದ್ರೆ ಅದು ರೋಹಿತ್‌ ಶರ್ಮಾ. ರೋಹಿತ್‌ ನನಗೆ ಎದುರಾಳಿ ಬ್ಯಾಟ್ಸ್‌ಮನ್ ಆದರೆ, ಅವರಿಗೆ ನಾನು ಮೂರು  ಪ್ಲ್ಯಾನ್‌ಗಳನ್ನು ರೂಪಿಸುತ್ತೇನೆ, ಏಕೆಂದರೆ ಅವರು ಒಮ್ಮೆ ಕ್ರೀಸ್‌ನಲ್ಲಿ ಸ್ಟ್ಯಾಂಡ್‌ ಆದ್ರೆ, ಅವರನ್ನು ಕಂಟ್ರೋಲ್‌ ಮಾಡಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಗೌತಮ್‌ ಗಂಭೀರ್‌ ಹಿಟ್ಸ್‌ ಮ್ಯಾನ್‌ ಆಟದ ವೈಖರಿಯನ್ನು ಹೊಗಳಿದ್ದಾರೆ.

ಪಂದ್ಯಕ್ಕೂ ಮುನ್ನ ನಾನು ಪ್ಲ್ಯಾನ್‌ A ಮಾಡಿಕೊಂಡಿರುತೇನೆ, ಆದರೆ, ಪಂದ್ಯಕ್ಕೂ ಒಂದು ದಿನ ಮುನ್ನ ರೋಹಿತ್‌ ಶರ್ಮಾ ಅವರನ್ನು ಔಟ್‌ ಮಾಡುವುದು ಹೇಗೆ ಅಂತ ಯೋಜನೆ ರೂಪಿಸುತ್ತಿದೆ. ನನ್ನ ಫಸ್ಟ್‌ ಪ್ಲ್ಯಾನ್‌ ವರ್ಕ್‌ಔಟ್‌ ಆಗಿಲ್ಲವಂದ್ರೆ, ಬೇರೆ ಪ್ಲ್ಯಾನ್‌ ಬಗ್ಗೆ ಚಿಂತೆ ಮಾಡುತ್ತಿದ್ದೆ ಅಂತ ಎಂದು ಗಂಭೀರ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಕ್ಲಾಸ್ ಟಾಪರ್ ಅನುಷ್ಕಾ ಶರ್ಮಾ.. ಹಾಗಾದ್ರೆ ವಿರಾಟ್ ವಿದ್ಯಾರ್ಹತೆ ಏನು? ಶಿಕ್ಷಣ ಪೂರ್ಣಗೊಳಿಸಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ!

ಇನ್ನು ಇಂದು ಕೋಲ್ಕತಾ ನೈಟ್‌ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಾಗಲಿವೆ. ಶ್ರೇಯಸ್‌ ಅಯ್ಯರ್‌ ನಾಯತ್ವದ ಕೆಕೆಆರ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ 9ನೇ ಸ್ಥಾನದಲ್ಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News