ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಕ್ಯಾಪ್ಟನ್ ಈ ಆಟಗಾರ… ಅಚ್ಚರಿಯಂತೇ ಈತನೂ ಆರಂಭಿಕನೇ!!

Suresh Raina Statement on Future Captain: ಸ್ಟಾರ್ ಆಲ್‌’ರೌಂಡರ್ ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್‌’ನಲ್ಲಿ ಭಾರತೀಯ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ವಿಫಲವಾದ ಕಾರಣ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡೋದು ಅನುಮಾನ.

Written by - Bhavishya Shetty | Last Updated : Apr 21, 2024, 06:40 PM IST
    • ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ತೊರೆದರೆ, ಮುಂದಿನ ನಾಯಕ ಯಾರು?
    • ರೋಹಿತ್ ನಂತರ ಗಿಲ್ ಭಾರತದ ನಾಯಕನಾಗಲಿದ್ದಾರೆ ಎಂದ ಸುರೇಶ್ ರೈನಾ
    • ಹಾರ್ದಿಕ್ ಟಿ20ಐ ಕ್ರಿಕೆಟ್‌’ನಲ್ಲಿ ಭಾರತದ ಹಂಗಾಮಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಕ್ಯಾಪ್ಟನ್ ಈ ಆಟಗಾರ… ಅಚ್ಚರಿಯಂತೇ ಈತನೂ ಆರಂಭಿಕನೇ!! title=
Rohit Sharma

Suresh Raina Statement on Future Captain: ಐಸಿಸಿ ಟಿ20 ವಿಶ್ವಕಪ್ 2024ರ ನಂತರ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ತೊರೆದರೆ, ಮುಂದಿನ ನಾಯಕ ಯಾರು ಎಂಬ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!

ಸ್ಟಾರ್ ಆಲ್‌’ರೌಂಡರ್ ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್‌’ನಲ್ಲಿ ಭಾರತೀಯ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ವಿಫಲವಾದ ಕಾರಣ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡೋದು ಅನುಮಾನ.

ಇನ್ನು ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್’ಗಳಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಎಲ್ಲಾ ಮೂರು ಸ್ವರೂಪಗಳಲ್ಲಿ ಸಂಭಾವ್ಯ ನಾಯಕರಾಗಿ ಪರಿಗಣಿಸಲ್ಪಟ್ಟ ಇತರ ಆಟಗಾರರು.

ಆದರೆ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ, ರೋಹಿತ್ ನಂತರ ಶುಭ್ಮನ್ ಗಿಲ್ ಭಾರತದ ನಾಯಕನಾಗಲಿ ಎಂದು ಇಚ್ಛಿಸಿದ್ದಾರೆ. ಐಪಿಎಲ್‌’ನಲ್ಲಿ ಮೊದಲ ಬಾರಿಗೆ ನಾಯಕನಾದ ಗಿಲ್ ಏಳು ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಸಾಧಿಸಲು ಸಾಧ್ಯವಾಗಿದೆ. ಆದರೆ ರೋಹಿತ್ ನಂತರ ಗಿಲ್ ಭಾರತದ ನಾಯಕನಾಗಲಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: ಈ ಎಣ್ಣೆಯಲ್ಲಿ ಕರ್ಪೂರ ಬೆರಸಿ ಹಚ್ಚಿ: ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡುಕಪ್ಪಾಗಿ ದಷ್ಟ-ಪುಷ್ಟವಾಗಿ ಬೆಳೆಯುತ್ತೆ!

ಕೆಲವು ಸಮಯದಿಂದ ಹಾರ್ದಿಕ್ ಟಿ20ಐ ಕ್ರಿಕೆಟ್‌’ನಲ್ಲಿ ಭಾರತದ ಹಂಗಾಮಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರಲ್ಲದೆ, ಈ ಹಿಂದೆ ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್, ಬುಮ್ರಾ ಮತ್ತು ಪಂತ್ ಭಾರತವನ್ನು ಮುನ್ನಡೆಸಿದ್ದಾರೆ, ಆದರೆ ರೈನಾ ಅವರ ಮಾತುಗಳು T20 ವಿಶ್ವಕಪ್ ನಂತರ ಗಿಲ್‌’ಗೆ ಹೊಸ ಜವಾಬ್ದಾರಿಗಳನ್ನು ನೀಡಲು ಸಿದ್ಧವಾಗಲಿದೆ ಎಂದು ಸೂಚಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News