ಸಿಪ್ಪೆ ಸಮೇತ ಈ ಹಳದಿ ಹಣ್ಣು ಸೇವಿಸಿದರೆ ನಿಯಂತ್ರಣಕ್ಕೆ ಬರುವುದು ಶುಗರ್ ! ವಾರಕ್ಕೆ ಇಷ್ಟೇ ಹಣ್ಣು ತಿಂದರೆ ಸಾಕು !

fruit to control Diabetes :ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ.  ಈ ಹಣ್ಣನ್ನು ವಾರಕ್ಕೆ ಮೂರು ಬಾರಿ ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು ಎನ್ನಲಾಗಿದೆ.   

Written by - Ranjitha R K | Last Updated : Dec 19, 2023, 10:13 AM IST
  • ಮಧುಮೇಹವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗವಾಗಿದೆ.
  • ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು
  • ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ.
ಸಿಪ್ಪೆ ಸಮೇತ ಈ ಹಳದಿ ಹಣ್ಣು ಸೇವಿಸಿದರೆ ನಿಯಂತ್ರಣಕ್ಕೆ ಬರುವುದು ಶುಗರ್ !  ವಾರಕ್ಕೆ ಇಷ್ಟೇ ಹಣ್ಣು ತಿಂದರೆ ಸಾಕು !  title=

fruit to control Diabetes : ಮಧುಮೇಹ ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆ. ಇತ್ತೀಚಿನ ದಿನಗಳಲ್ಲಿ ಮಧುಮೇಹವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗವೂ ಹೌದು.  ಇದು ಜೀವನಶೈಲಿ ಸಂಬಂಧಿತ ಕಾಯಿಲೆಯಾಗಿದೆ. ಯಾರಿಗೇ ಆದರೂ ಈ ರೋಗ ಒಮ್ಮೆ ಪ್ರಾರಂಭವಾಯಿತು ಎಂದಾದರೆ ಮತ್ತೆ ಇದು ಜೀವನ ಪರ್ಯಂತ ಕಾಡುತ್ತದೆ. ಇದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಕೆಲವೊಂದು ಮನೆ ಮದ್ದನ್ನು ಅನುಸರಿಸುವ ಮೂಲಕ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. 

ಇತ್ತೀಚಿನ ದಿನಗಳಲ್ಲಿ ಮಧುಮೇಹ ಅತಿ ವೇಗವಾಗಿ ಪಸರಿಸುತ್ತಿರುವ ಕಾಯಿಲೆಯಾಗಿ ಮಾರ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೂಡಾ ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಾವು ಅನುಸರಿಸುತ್ತಿರುವ ಜೀವನ ಶೈಲಿಯ ಬಗ್ಗೆ ಜಾಗರೂಕರಾಗಿರಬೇಕು. ನಮ್ಮ ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಏರುಪೇರು ಮಾಡಿಬಿಡಬಹುದು. ಹೀಗಿರುವಾಗ ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ. 

ಇದನ್ನೂ ಓದಿ : Curd with Banana: ಮೊಸರಿನ ಜೊತೆ ಬಾಳೆಹಣ್ಣು ತಿಂದರೆ ದೇಹಕ್ಕೆ ಸಿಗುವುದು ಈ ಎಲ್ಲ ಪ್ರಯೋಜನ

ಈ ಹಳದಿ ಹಣ್ಣನ್ನು ಕೃಷ್ಣ ಫಲ ಎಂದು ಕರೆಯುತ್ತಾರೆ.  ಕೃಷ್ಣ ಫಲವನ್ನು ಫ್ಯಾಷನ್ ಫ್ರುಟ್ ಎಂದು ಕೂಡಾ ಕರೆಯುತ್ತಾರೆ. ಈ ಹಣ್ಣನ್ನು ವಾರಕ್ಕೆ ಮೂರು ಬಾರಿ ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು ಎನ್ನಲಾಗಿದೆ. ಈ ಹಣ್ಣಿನ ತಿರುಳು ಮಾತ್ರವಲ್ಲ ಇದರ ಸಿಪ್ಪೆ ಕೂಡಾ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. 

ಮಧುಮೇಹವನ್ನು ನಿಯಂತ್ರಿಸಲು ಹಣ್ಣಿನ ಸಿಪ್ಪೆ : 
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಈ ಅದ್ಭುತ ಹಣ್ಣಿನ ಹೆಸರು ಕೃಷ್ಣ ಫಲ. ಈ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿ ಮಿಶ್ರಿತವಾಗಿದೆ. ಇದು ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಹಳದಿ ಬಣ್ಣದ ಈ ಹಣ್ಣಿನ ಮೂಲ ಬ್ರೆಜಿಲ್. 

ಇದನ್ನೂ ಓದಿ : ಎಳನೀರಿನ ಜೊತೆ ತುಳಸಿ ಬೀಜ ಬೆರೆಸಿ ಕುಡಿದರೆ ಶಾಶ್ವತವಾಗಿ ದೂರವಾಗುವುದು ಈ ಆರೋಗ್ಯ ಸಮಸ್ಯೆಗಳು

ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ : 
ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ಸಂಜೀವಿನಿ.  ಈ ಹಣ್ಣಿನಲ್ಲಿ (ಪ್ಯಾಶನ್ ಫ್ರೂಟ್) ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಈ ಹಣ್ಣಿನ ತಿರುಳು  ಮಾತ್ರವಲ್ಲ ಇದರ ಸಿಪ್ಪೆ ಕೂಡಾ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಕೃಷ್ಣ ಫಲದ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ. ಇದರಿಂದಾಗಿ ಈ ಹಣ್ಣನ್ನು  ಸೇವಿಸಿದರೂ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದಿಲ್ಲ. 

ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ :
ಕೃಷ್ಣ ಫಲದ ಸಿಪ್ಪೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳಿಗೆ ವೈದ್ಯರು ಈ ಹಣ್ಣನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ಮಧುಮೇಹ ಸಮಸ್ಯೆ ಇದ್ದರೆ ನೀವೂ ಈ ಹಣ್ಣನ್ನು ಟ್ರೈ ಮಾಡಬಹುದು. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News