ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿಂದರೆ ಏನಾಗುತ್ತದೆ? ತಜ್ಞರು ಈ ಬಗ್ಗೆ ಹೇಳುವುದೇನು ?

ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ತಿನ್ನಬೇಕೋ ಬೇಡವೋ ಎಂಬ ಗೊಂದಲ  ಹಲವರಲ್ಲಿದೆ.ನೀವು ಕೂಡಾ ಮಧುಮೇಹ ರೋಗಿಯಾಗಿದ್ದು, ಈ ಗೊಂದಲ ನಿಮ್ಮನ್ನು ಕೂಡಾ ಕಾಡುತ್ತಿದ್ದರೆ ಈ ಮಾಹಿತಿ ನಿಮಗಾಗಿ.  

Written by - Ranjitha R K | Last Updated : Apr 25, 2024, 12:38 PM IST
  • ಮಧುಮೇಹ ಇದ್ದಾಗ ಸಿಹಿತಿಂಡಿಗಳನ್ನು ತಿನ್ನಬಾರದು
  • ಮಧುಮೇಹದಲ್ಲಿ ಸಿಹಿ ತಿಂಡಿ ಸೇವಿಸಿದರೆ ಬ್ಲಡ್ ಶುಗರ್ ಮತ್ತಷ್ಟು ಹೆಚ್ಚುತ್ತದೆ
  • ಮಧುಮೇಹ ಇದ್ದಾಗ ಅನೇಕ ಹಣ್ಣುಗಳನ್ನು ತಿನ್ನಬಾರದು
ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿಂದರೆ ಏನಾಗುತ್ತದೆ? ತಜ್ಞರು ಈ ಬಗ್ಗೆ ಹೇಳುವುದೇನು ?  title=

Watermelon in Diabetes : ಮಧುಮೇಹ ಇದ್ದಾಗ ಸಿಹಿತಿಂಡಿಗಳನ್ನು ತಿನ್ನಬಾರದು ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ.ಮಧುಮೇಹದಲ್ಲಿ ಸಿಹಿ ತಿಂಡಿ ಸೇವಿಸಿದರೆ ಬ್ಲಡ್ ಶುಗರ್ ಮತ್ತಷ್ಟು ಹೆಚ್ಚುತ್ತದೆ. ಇನ್ನು ಮಧುಮೇಹ ಇದ್ದಾಗ ಅನೇಕ ಹಣ್ಣುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈ ಹಣ್ಣುಗಳು ಸಕ್ಕರೆ ಮಟ್ಟವನ್ನು ಹೆಚ್ಚಿಸುವ ನೈಸರ್ಗಿಕ ಸಕ್ಕರೆ ಫ್ರಕ್ಟೋಸ್ ಅನ್ನು ಹೊಂದಿರುತ್ತದೆ.

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಹೆಸರುವಾಸಿಯಾಗಿರುವ ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ತಿನ್ನಬೇಕೋ ಬೇಡವೋ ಎಂಬ ಗೊಂದಲ  ಹಲವರಲ್ಲಿದೆ. ಏಕೆಂದರೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ ಸಿಹಿಯೂ ಹೌದು. ನೀವು ಕೂಡಾ ಮಧುಮೇಹ ರೋಗಿಯಾಗಿದ್ದು, ಈ ಗೊಂದಲ ನಿಮ್ಮನ್ನು ಕೂಡಾ ಕಾಡುತ್ತಿದ್ದರೆ ಈ ಮಾಹಿತಿ ನಿಮಗಾಗಿ.  

ಇದನ್ನೂ ಓದಿ : ಅಗಸೆ ಬೀಜ ಮಧುಮೇಹಿಗಳಿಗೆ ದಿವೌಷಧಿ.. ಇದರ ಜೊತೆ ಬೆರೆಸಿ ಸೇವಿಸಿದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !

ಕಲ್ಲಂಗಡಿಯಲ್ಲಿ ಎಷ್ಟು ಸಕ್ಕರೆ  ಇರುತ್ತದೆ ? :
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ನ ಮಾಹಿತಿಯ ಪ್ರಕಾರ , ಒಂದು ಕಪ್ ಅಥವಾ 152 ಗ್ರಾಂ ಕತ್ತರಿಸಿದ ಕಲ್ಲಂಗಡಿ 9.42 ಗ್ರಾಂ ನೈಸರ್ಗಿಕ ಸಕ್ಕರೆ ಮತ್ತು 11.5 ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಕಲ್ಲಂಗಡಿ ಸಾಮಾನ್ಯವಾಗಿ 72 ರ GI ಅನ್ನು ಹೊಂದಿರುತ್ತದೆ. ಆದರೆ, 120-ಗ್ರಾಂ ಹಣ್ಣಿನಲ್ಲಿ 5ರ GL ಇರುತ್ತದೆ. ಕಲ್ಲಂಗಡಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಎಲ್ಲಾ ಹಣ್ಣುಗಳಂತೆ ಕಡಿಮೆಯಾಗಿರುತ್ತದೆ. ಹಾಗಾಗಿ ಸಮತೋಲಿತ ಆಹಾರದ ಭಾಗವಾಗಿ  ಸಣ್ಣ ಪ್ರಮಾಣದಲ್ಲಿ ಇದನ್ನು ಸೇವಿಸಬಹುದು.

ಕಲ್ಲಂಗಡಿ ತಿನ್ನುವುದರಿಂದ ಸಕ್ಕರೆ ಹೆಚ್ಚಾಗಬಹುದೇ? : 
ಕಲ್ಲಂಗಡಿ ತಿನ್ನುವುದರಿಂದ ಮಧುಮೇಹಿಗಳ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದೇ ಅಥವಾ ಇಲ್ಲವೇ ಎಂಬುದು ಸೇವಿಸುವ ಹಣ್ಣಿನ ಪ್ರಮಾಣವನ್ನು ಅವಲಂಬಿಸಿರುತ್ತದೆ.ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುತ್ತಿದ್ದರೆ,ಕಲ್ಲಂಗಡಿ ತಿನ್ನುವುದರಿಂದ ಸಕ್ಕರೆಯ ಮಟ್ಟದಲ್ಲಿ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ : ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹೋಗಬೇಕಾದರೆ ಈ ತರಕಾರಿಯ ಜ್ಯೂಸ್ ಕುಡಿಯಿರಿ! ದಿನಕ್ಕೊಂದೇ ಲೋಟ

ಕಲ್ಲಂಗಡಿ ತಿನ್ನುವುದರಿಂದ ಮಧುಮೇಹದಲ್ಲಿ ಪ್ರಯೋಜನ : 
ಮಧುಮೇಹ ರೋಗಿಗಳಲ್ಲಿ ಹೃದಯರಕ್ತನಾಳದ ಕಾಯಿಲೆಯ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಈ ಸ್ಥಿತಿಯಲ್ಲಿ ನಿಯಂತ್ರಿತ ಪ್ರಮಾಣದಲ್ಲಿ ಕಲ್ಲಂಗಡಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ವಾಸ್ತವವಾಗಿ,ಕಲ್ಲಂಗಡಿಗೆ ಕೆಂಪು ಬಣ್ಣವನ್ನು ನೀಡುವ ಅಂಶವಾದ ಲೈಕೋಪೀನ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಲೈಕೋಪೀನ್ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News