"ನಾನು ಇಂಡಸ್ಟ್ರೀಗೆ ಕಷ್ಟಪಟ್ಟು ಬರುತ್ತೇನೆ, ನನಗೆ ಯಾರ ಸಪೋರ್ಟ್ ಕೂಡ ಬೇಡ": ರಿಯಲ್‌ ಸ್ಟಾರ್‌ ಪುತ್ರನ ವೈರಲ್‌ ವಿಡಿಯೋ!

Ayush Upendra: ರಿಯಲ್‌ ಸಾರ್‌ ಉಪೇಂದ್ರ ಪುತ್ರ ಆಯಷ್‌, ತಾನನೊಬ್ಬ ಕಾಮನ್‌ ಮ್ಯಾನ್‌. ಎಲ್ಲರಂತೆ ನಾನು ಕಷ್ಟಪಟ್ಟುಕೊಂಡೇ ಕೆಲಸ ಮಾಡುತ್ತೇನೆ. ಯಾರ ಸಪೋರ್ಟ್ ಕೂಡ ಬೇಡ ಎಂದು ಮಾಧ್ಯಮದ ಮುಂದೆ ಹೇಳಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

Written by - Zee Kannada News Desk | Last Updated : Jan 13, 2024, 11:11 AM IST
  • ಮಾಧ್ಯಮಗಳ ಮುಂದೆ ರಿಯಲ್‌ ಸಾರ್‌ ಉಪೇಂದ್ರ ಪುತ್ರ ಆಯುಷ್‌ ಸಾಕಷ್ಟು ಮಾತನಾಡಿದ್ದು, ತಮ್ಮ ಭವಿಷ್ಯದ ಪ್ಲ್ಯಾನ್‌ಗಳ ಬಗ್ಗೆಯೂ ತಿಳಿಸಿದ್ದಾರೆ.
  • ಆಯುಷ್‌ ನಾನೊಬ್ಬ ಕಾಮನ್‌ ಮ್ಯಾನ್‌. ಎಲ್ಲರಂತೆ ನಾನು ಕಷ್ಟಪಟ್ಟುಕೊಂಡೇ ಕೆಲಸ ಮಾಡುತ್ತೇನೆ. ನಾನು ಮಾಡಿದ್ರೆ, ಸೊನ್ನೆಯಿಂದ ಶುರು ಮಾಡುತ್ತೇನೆ ಎಂದಿದ್ದಾರೆ.
  • ಅಪ್ಪನ ಹಾದಿಯಲ್ಲೇ ಸಿನಿಮಾರಂಗಕ್ಕೆ ಎಂಟ್ರಿ ನೀಡಬೇಕು ಎಂಬ ಅಭಿಲಾಷೆಯನ್ನು ಹೊಂದಿದ್ದು, ಸದ್ಯ ಆಯುಷ್‌ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
"ನಾನು ಇಂಡಸ್ಟ್ರೀಗೆ ಕಷ್ಟಪಟ್ಟು ಬರುತ್ತೇನೆ, ನನಗೆ ಯಾರ ಸಪೋರ್ಟ್ ಕೂಡ ಬೇಡ": ರಿಯಲ್‌ ಸ್ಟಾರ್‌ ಪುತ್ರನ ವೈರಲ್‌ ವಿಡಿಯೋ! title=

Ayush Upendra Viral Video: ಇತ್ತೀಚೆಗೆ ಮಾಧ್ಯಮಗಳ ಮುಂದೆ ರಿಯಲ್‌ ಸಾರ್‌ ಉಪೇಂದ್ರ ಪುತ್ರ ಆಯುಷ್‌ ಸಾಕಷ್ಟು ಮಾತನಾಡಿದ್ದು, ತಮ್ಮ ಭವಿಷ್ಯದ ಪ್ಲ್ಯಾನ್‌ಗಳ ಬಗ್ಗೆಯೂ ತಿಳಿಸಿದ್ದಾರೆ. ಅಪ್ಪ-ಅಮ್ಮ ಇಬ್ಬರೂ ಚಿತ್ರರಂಗದಲ್ಲಿ ಇದ್ದರೂ, ಕೂಡ ಕುಟುಂಬದವರ ಸಹಾಯ ಬೇಡ  ಆಯುಷ್‌ ಎಂದಿದ್ದಾರೆ. ಆಯುಷ್‌, "ನನ್ನ ಫಿಲಾಸಫಿ ಒಂದೇ, ಈ ಪ್ರಪಂಚದಲ್ಲಿ ಪ್ರತಿಭೆ ಇರೋರು ತುಂಬ ಜನ ಇದ್ದಾರೆ. ಅವರಿಗೆ ಸರಿಯಾದ ಅವಕಾಶ ಸಿಕ್ತಾ ಇಲ್ಲ. ಹಾಗಾಗಿ, ಅಪ್ಪನ ಹೆಸರು ಬಳಸಿಕೊಂಡು ಸಿನಿಮಾ ಮಾಡೋಕೆ ನನಗೂ ಇಷ್ಟ ಇಲ್ಲ. ನಾನು ಈ ಫ್ಯಾಮಿಲಿಯಲ್ಲಿ ಹುಟ್ಟಿದ್ದೇನೆ. ಹಾಗಂತ, ನನಗೆ ಯಾರ ಪ್ರಭಾವವು ಬೇಕಿಲ್ಲ" ಎಂದು ಮಾತನಾಡಿದ್ದಾರೆ.

ಆಯುಷ್‌ ತಮ್ಮ ಮಾತು ಮುಂದುವರೆಸುತ್ತಾ, "ತುಂಬ ಜನ ಹೇಳುತ್ತಾರೆ, ಅಪ್ಪನ ಸಿನಿಮಾದಲ್ಲಿ ನಟಿಸು ಅಂತ. ಆದರೆ ನಾನು ಇಂಡಸ್ಟ್ರೀಗೆ ಕಷ್ಟಪಟ್ಟು ಬರುತ್ತೇನೆ, ನನಗೆ ಯಾರ ಸಪೋರ್ಟ್ ಕೂಡ ಬೇಡ. ನಾನೊಬ್ಬ ಕಾಮನ್‌ ಮ್ಯಾನ್‌. ಎಲ್ಲರಂತೆ ನಾನು ಕಷ್ಟಪಟ್ಟುಕೊಂಡೇ ಕೆಲಸ ಮಾಡುತ್ತೇನೆ. ನಾನು ಮಾಡಿದ್ರೆ, ಸೊನ್ನೆಯಿಂದ ಶುರು ಮಾಡುತ್ತೇನೆ, ಬೇರುಮಟ್ಟದಿಂದ ಕೆಲಸ ಮಾಡುತ್ತೇನೆ. ನೆಪೋಟಿಸಂ ಅಂತೆಲ್ಲ ಮಾತುಗಳು ಬರಬಹುದು. ಆದರೆ ನನ್ನ ಪ್ರಯತ್ನ ನಾನು ಪಡುತ್ತೇನೆ. ನಟನಾಗಲು ನಾನು ಎಫರ್ಟ್ ಹಾಕುತ್ತೇನೆ. ಯಾರ ಪ್ರಭಾವವು ನನಗೆ ಬೇಕಿಲ್ಲ. ಸದ್ಯಕ್ಕೆ ಕಾಲೇಜ್‌ನಲ್ಲಿ ನಾನು ಶಾರ್ಟ್ಸ್‌ ಫಿಲ್ಮ್ಸ್ ಮಾಡುತ್ತಿದ್ದೇನೆ. ಇವನ್ನೆಲ್ಲಾ ನನ್ನ ಖುಷಿಗೆ ಮಾಡುತ್ತಿದ್ದೇನೆ. ಅವಕಾಶಗಳು ಬಂದರೆ ಸೀರಿಯಸ್ ಆಗಿ ತೆಗೆದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: `ಪುಷ್ಪ 2' ಚಿತ್ರದಲ್ಲಿ ಐಟಂ ಸಾಂಗ್‌ಗೆ ಸೊಂಟ ಬಳುಕಿಸೋದು ಸಮಂತಾ ಅಲ್ಲ.. ಬಾಲಿವುಡ್‌ನ ಈ ಹಾಟ್ ಸುಂದರಿಯರು!

ಆಯುಷ್‌ ಇನ್ನಷ್ಟು ಪ್ಲಾನ್ಸ್‌ ಬಗ್ಗೆ ಹೇಳುತ್ತಾ, "ನಾನು ನಿರ್ದೇಶಕ ಆಗುತ್ತಿನೋ ಇಲ್ವೋ ಗೊತ್ತಿಲ್ಲ. ಆದರೆ ತುಂಬ ಕಥೆಗಳನ್ನು ಬರೆಯುತ್ತಿದ್ದೇನೆ. ಬರವಣಿಗೆ ಮೇಲೆ ನನಗೆ ಆಸಕ್ತಿ ಇದೆ. ಜೊತೆಗೆ ಈಗಾಗಲೇ ಸ್ಕೂಲ್‌, ಕಾಲೇಜ್‌ನಲ್ಲಿ ತುಂಬ ನಾಟಕಗಳನ್ನು ಮಾಡುತ್ತಿದ್ದೇನೆ. ತುಂಬ ಓಡಾಡುತ್ತಿರುತ್ತೇನೆ. ತಂದೆಯವರ ಅಭಿಮಾನಿಗಳು ಸಿಕ್ಕಾಗ ನನಗೆ ಖುಷಿ ಆಗುತ್ತದೆ. ಅವರಿಂದಲೇ ನನಗೆ ಬರವಣಿಗೆಗೆ ಸ್ಪೂರ್ತಿ ಸಿಗುತ್ತದೆ. ಅಭಿಮಾನಿಗಳು ಸಿಕ್ಕಿದಾಗ ಅವರನ್ನು ಪ್ರೀತಿಸು ಅಂತ ಅಪ್ಪ ಹೇಳಿದ್ದಾರೆ. ಅವರಿಗೆ ಬೇಸರ ಮಾಡಬೇಡ ಎಂದು ಕಿವಿಮಾತು ಹೇಳಿದ್ದಾರೆ. ಅಪ್ಪನ ಅಭಿಮಾನಿಗಳು ನನಗೂ ಪ್ರೀತಿ, ಆಶೀರ್ವಾದ ನೀಡುತ್ತಿದ್ದಾರೆ, ಅದು ನನಗೆ ಖುಷಿ ಇದೆ" ಎಂದು  ತಿಳಿಸಿದ್ದಾರೆ.

ಅಪ್ಪನ ಹಾದಿಯಲ್ಲೇ ತಾವು ಕೂಡ ಸಿನಿಮಾರಂಗಕ್ಕೆ ಎಂಟ್ರಿ ನೀಡಬೇಕು ಎಂಬ ಅಭಿಲಾಷೆಯನ್ನು ಹೊಂದಿದ್ದು, ಸದ್ಯ ಜೂನಿಯರ್‌ ಉಪೇಂದ್ರ ಆಯುಷ್‌  ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಕನ್ನಡ ಚಿತ್ರರಂಗದಲ್ಲಿ ತಂದೆ ದೊಡ್ಡ ಸ್ಥಾನದಲ್ಲಿದ್ದರೂ, ಅವರ ಪ್ರಭಾವ, ಸಹಾಯ ನನಗೆ ಬೇಡ ಎನ್ನುತ್ತಿರುವ ಆಯುಷ್ ಮಾತುಗಳಿಗೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸದ್ಯ ಎಲ್ಲರ ಕಣ್ಣು 'ರಿಯಲ್ ಸ್ಟಾರ್' ಉಪೇಂದ್ರ ಅವರ ಮಗ ಆಯುಷ್ ಮೇಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News