Rain Update: ಶನಿವಾರದಿಂದ ಉತ್ತರ ಭಾರತದ ಹಲವೆಡೆ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಹೊಸ ದಾಖಲೆ ನಿರ್ಮಿಸಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹವಾಮಾನ ಹೇಗಿದೆ ತಿಳಿದುಕೊಳ್ಳೋಣ ಬನ್ನಿ
Weather Update- ದೆಹಲಿಯಲ್ಲಿ ಗುರುವಾರ ಸುರಿದ ಭಾರಿ ಮಳೆಯ ಬಳಿಕ ಹಲವು ಭಾಗಗಳಲ್ಲಿ ನೀರು ಜಮಾವಣೆಯ ಸಮಸ್ಯೆ ಎದುರಾಗಿದೆ. ದಿನವಿಡೀ ದೆಹಲಿಯಲ್ಲಿನ ಜಲಪ್ರಳಯದ ದೂರುಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಂಚಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀರಿನಿಂದಾಗುವ ಸಮಸ್ಯೆಯ ಕುರಿತು ಗಮನ ಹರಿಸುವಂತೆ ಕೇಳಿದೆ.
ಇಂದಿನಿಂದ ಮುಂದಿನ ನಾಲ್ಕು ದಿನಗಳವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
Today Weather Update 03-07-2023: ಜುಲೈ 8 ರಂದು ಮುಂಗಾರು ಇಡೀ ದೇಶವನ್ನು ತಲುಪಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿದೆ. ಕೆಲವೆಡೆ ಬಿಸಿಲಿನ ತಾಪದಿಂದ ಜನರಿಗೆ ಪರಿಹಾರ ಸಿಕ್ಕಿದೆ.
Today Weather Update 01-07-2023: ಪಂಜಾಬ್, ಜಮ್ಮು - ಕಾಶ್ಮೀರ ಮತ್ತು ಅಸ್ಸಾಂ ಅನ್ನು ಒಳಗೊಂಡಿರುವ ಕೆಲವು ಪ್ರದೇಶಗಳಲ್ಲಿ ಉತ್ತಮ, ಪೂರ್ವ ಕರಾವಳಿ ಹಾಗೂ ಮಧ್ಯ ಮತ್ತು ಪಶ್ಚಿಮ ಭಾರತದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ, ಇದರ ಪರಿಣಾಮವಾಗಿ ಸಾಮಾನ್ಯ ಮಾನ್ಸೂನ್ ಆಗುತ್ತದೆ ಎಂದು ಹವಾಮಾನ ಬ್ಯೂರೋ ಹೇಳಿದೆ.
Karnataka Rain: ಕೇಂದ್ರವು ಅಧಿಕೃತ ಹೇಳಿಕೆಯಲ್ಲಿ, ಕರಾವಳಿ ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ (64.5 ಮಿಮೀ ನಿಂದ 115 ಮಿಮೀ), ಪ್ರತ್ಯೇಕ ಸ್ಥಳಗಳಲ್ಲಿ ಈ ಅವಧಿಯಲ್ಲಿ ಅತಿ ಹೆಚ್ಚು (244.4 ಮಿಮೀ ವರೆಗೆ) ಮಳೆ ಬೀಳುತ್ತದೆ
Weather Update Today of 29 June 2023: ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಇಂದು ದೆಹಲಿ NCR, ರಾಯಲಸೀಮಾ, ತಮಿಳುನಾಡು ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
IMD Rain Alert! ಜೂನ್ 28 ರವರೆಗೆ ರಾಜಸ್ಥಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯು ಮಧ್ಯಪ್ರದೇಶದ ಮೂರು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಇಂದು ಬೆಳಗ್ಗಿನಿಂದಲೇ ಮುಂಗಾರು ಚುರುಕುಗೊಂಡಿದೆ. ಬೆಂಗಳೂರಿನ ಹಲವೆಡೆ ಬಾರಿ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಹಾಗೆ ಮಳೆಯ ಕಾರಣ ಇಂದು ಬಿಬಿಎಂಪಿ ಜೆಸಿಬಿ ಘರ್ಜನೆಯನ್ನ ನಿಲ್ಲಿಸಿದೆ.
Karnataka Rain Alert 19-06-2023: ಜೂನ್ 19 ಮತ್ತು ಜೂನ್ 20 ರ ನಡುವೆ ಪೂರ್ವ ರಾಜಸ್ಥಾನವು ಬಿಪಾರ್ಜೋಯ್ ಚಂಡಮಾರುತದ ಪರಿಣಾಮವಾಗಿ ಭಾರೀ ಮತ್ತು ಅತ್ಯಂತ ಭಾರೀ ಮಳೆಯ ಸಾಧ್ಯತೆ ಇದೆ.
Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಬಿಸಿಲಿನ ತಾಪದಿಂದ ಜನರು ಕಂಗಾಲಾಗಿದ್ದಾರೆ. ಬಿಪರ್ಜೋಯ್ ಚಂಡಮಾರುತದೊಂದಿಗೆ ಹಲವು ಪ್ರದೇಶಗಳಲ್ಲಿ ಮಾನ್ಸೂನ್ ಶೀಘ್ರದಲ್ಲೇ ಅಪ್ಪಳಿಸಲಿದೆ. ಇದರಿಂದ ಪೂರ್ವ ಭಾರತಕ್ಕೆ ಸುಡುವ ಬಿಸಿಲಿನ ತಾಪದಿಂದ ಮುಕ್ತಿ ಸಿಗುವ ಭರವಸೆ ಇದೆ.
Cyclone Biparjoy Update: ಗುಜರಾತ್ ಕಡಲು ತೀರದಲ್ಲಿ ಬಿಪರ್ ಜಾಯ್ ತಾಂಡವ ನೋಡಲು ಸಿಗುತ್ತಿದೆ. ಈ ಭಾರಿ ಅಪಾಯಕಾರಿ ಚಂಡಮಾರುತದ ಪ್ರಭಾವ ಇದೀಗ ಪಾಕಿಸ್ತಾನದಲ್ಲಿಯೂ ಕಂಡು ಬರಲಾರಂಭಿಸಿದ್ದು, ಚಂಡಮಾರುತದ ಕಾರಣ ಕರಾಚಿಯಲ್ಲಿ ಸಾವಿರಾರು ಜನರು ಮನೆ ತೊರೆಯುವ ಪರಿಸ್ಥಿತಿ ಎದುರಾಗಿದೆ.
Byparjoy Cyclone: ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಂಡಿರುವ ಬೈಪರ್ಜೋಯ್ ಚಂಡಮಾರುತ ನಾಳೆ ವೇಳೆಗೆ ಗುಜರಾತ್ ಕರಾವಳಿಯನ್ನು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. ಇದರ ಪರಿಣಾಮವಾಗಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಭಾರತೀಯ ರೈಲ್ವೆ ಪರಿಸ್ಥಿತಿಯನ್ನು ನಿಭಾಯಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
Karnataka Weather Update 09-06-2023: ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಇದೀಗ ಚಂಡಮಾರುತವಾಗಿ ಮಾರ್ಪಟ್ಟಿದೆ. ‘ಬಿಪರ್ಜೋಯ್’ ಹೆಸರಿನ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸಲು ಆರಂಭಿಸಿದ್ದು, ಕರ್ನಾಟಕದ ಕರಾವಳಿ ಭಾಗಕ್ಕೆ ಭಾರೀ ಸಂಕಷ್ಟ ಎದುರಾಗಿದೆ.
IMD Rainfall Alert: ಕರಾವಳಿಯಲ್ಲಿ ಬೀಪೋರ್ಜೊಯ್ ಎಂಬ ಹೆಸರಿನ ಚಂಡಮಾರುತದ ಅಬ್ಬರ ಜೋರಾಗಿದ್ದು ಮುಂದಿನ ಮೂರು ದಿನಗಳವರೆಗೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಜೂನ್ 3 ರಿಂದ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗಿದ್ದು, ಜೂನ್ 7 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಕರ್ನಾಟಕದಲ್ಲಿ, ಎಲ್ಲಾ ಐದು ದಿನಗಳಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ
All India Weather Update: ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ದಕ್ಷಿಣ ಭಾರತದಲ್ಲಿ ಮಾನ್ಸೂನ್ ನಿಧಾನವಾಗಿ ಕೇರಳದ ಕಡೆಗೆ ಚಲಿಸುತ್ತಿದೆ. ಮತ್ತೊಂದೆಡೆ, ಮತ್ತೊಂದು ಪಾಶ್ಚಿಮಾತ್ಯ ಅಡಚಣೆ ಶೀಘ್ರದಲ್ಲೇ ಪಶ್ಚಿಮ ಹಿಮಾಲಯವನ್ನು ಪ್ರವೇಶಿಸಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಾತಾವರಣ ಮತ್ತಷ್ಟು ಹಿತಕರವಾಗಬಹುದು.
Today Weather Update 31-05-2023: ಸದ್ಯ ಮಳೆಯ ಕಾರಣದಿಂದ ಮಕ್ಕಳಿಗೆ ಬೇಸಿಗೆ ರಜೆಯನ್ನು ಎಂಜಾಯ್ ಮಾಡಲು ಆಗುತ್ತಿಲ್ಲ. ಹೀಗಾಗಿ ಮನೆಯಲ್ಲಿಯೇ ಕುಳಿತುಕೊಂಡು ರಜಾದಿನಗಳನ್ನು ಆನಂದಿಸುತ್ತಿದ್ದಾರೆ. ಇನ್ನೊಂದೆಡೆ ಹವಾಮಾನ ಇಲಾಖೆಯು ಮುಂದಿನ 5 ದಿನಗಳ ಹವಾಮಾನವನ್ನು ಬಿಡುಗಡೆ ಮಾಡಿದೆ.
Karnataka Rain Alert 28-05-2023: ರಾಜ್ಯ ರಾಜಧಾನಿ ಬೆಂಗಳೂರಿನ ವಿಷಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆ ಇದೆ. ಮೇ 28 ಮತ್ತು 29 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಿತಿಯ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ರಾತ್ರಿಯಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.