Pawan Kalyan wife : ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸುತ್ತ ಮತ್ತೊಂದು ವಿವಾದ ಭುಗಿಲೆದ್ದಿದೆ. ಮೂರು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಟಾಲಿವುಡ್ ನಟ ಇದೀಗ ಮೂರನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯ ಏನೆಂದು ತಿಳಿಯೋಣ ಬನ್ನಿ..
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೇಸರಿ ರಣತಂತ್ರ. ಗಡಿಜಿಲ್ಲೆಯ ಅಖಾಡಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ. ಇಂದು ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಪವನ್ ಮತಶಿಕಾರಿ. ಪವನ್ ಕಲ್ಯಾಣ್, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ತೆಲುಗು ಸ್ಟಾರ್ ನಟ. ರಾಯಚೂರು ಗ್ರಾಮೀಣ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಪರ ಪ್ರಚಾರ. ರಾಯಚೂರಿನ ಯಾಪಲದಿನ್ನಿ ಗ್ರಾಮದಲ್ಲಿ ಕೇಸರಿ ಪಡೆ ಬೃಹತ್ ಸಮಾವೇಶ.
Niharika conidela-Chaitanya: ಚಿರಂಜೀವಿ ಅವರ ತಮ್ಮನ ಮಗಳು ನಿಹಾರಿಕಾ ಕೊನಿಡೇಲಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯು ಹರಿದಾಡುತ್ತಿದೆ. ಈ ಜೋಡಿಗಳು 2020 ಡಿಸೆಂಬರ್ ರಲ್ಲಿ ಅದ್ದೂರಿ ಮದುವೆಯಾಗಿದ್ದರು.
Unstoppable With NBK 2: ಬಾಲಕೃಷ್ಣ ಅವರ ಅನ್ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಸಂಚಿಕೆ ಹೊರಬಂದಿದೆ. ಪವನ್ ಕಲ್ಯಾಣ್ ಮೊದಲ ಬಾರಿಗೆ ಚಾಟ್ ಶೋನಲ್ಲಿ ಭಾಗವಹಿಸಿದರು ಮತ್ತು ಅವರ ವೈಯಕ್ತಿಕ ಜೀವನ, ನಟನೆ, ಖಿನ್ನತೆ ಮತ್ತು ಹೆಚ್ಚಿನವುಗಳ ಬಗ್ಗೆ ಸ್ಪಷ್ಟತೆಯನ್ನು ನೀಡಿದರು.
ನಟ-ರಾಜಕಾರಣಿ, ಅಭಿಮಾನಿಗಳಿಂದ ಪವರ್ ಸ್ಟಾರ್ ಎಂದು ಕರೆಯಿಸಿಕೊಳ್ಳುವ ಪವನ್ ಕಲ್ಯಾಣ್ ಓಟಿಟಿ ಟಾಕ್ ಶೋನ ಎಪಿಸೋಡ್ ಒಂದು ರಿಲೀಸ್ ಆಗಿದ್ದು, ಇಂಟರ್ನೆಟ್ನಲ್ಲಿ ಅಬ್ಬರಿಸುತ್ತಿದೆ. ಬಿಗ್ ಬಜೆಟ್ ಸಿನಿಮಾ ಬಿಡುಗಡೆ ಮಾಡಿದಾಗ್ಲೂ ಇಷ್ಟು ಹೈಪ್ ಇರುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ, ಆಹಾ ಓಟಿಟಿಯ ಅನ್ಸ್ಟಾಪೆಬಲ್ 2 ವಿಥ್ ಎನ್ಬಿಕೆ ಕಾರ್ಯಕ್ರಮ ಪವನ್ ಕಲ್ಯಾಣ್ ಭಾಗವಹಿಸಿದ್ದ ಸಂಚಿಕೆಯ ಮೊದಲ ಭಾಗ ಸಖತ್ ಟ್ರೇಂಡ್ ಕ್ರಿಯೇಟ್ ಮಾಡುತ್ತಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಖುಷಿ ಸುದ್ದಿ. ಇತಿಹಾಸ ಹಾಗೂ ದಾಖಲೆಗಲೆಗಳ ಸರಮಾಲೆ ಸೃಷ್ಟಿಸಿದ್ದ ಖುಷಿ ಸಿನಿಮಾ ರೀ ರೀಲಿಸ್ ಆಗುತ್ತಿದೆ. ಅದು ನ್ಯೂ ಇಯರ್ಗೆ ಅನ್ನೋದು ತುಂಬಾ ಸ್ಪೇಷಲ್. ಇದರಿಂದ ಖುಷ್ ಖುಷಿಯಾಗಿ ಹೊಸ ವರ್ಷವನ್ನು ರೋಮ್ಯಾಂಟಿಕ್ ಸಿನಿಮಾ ನೋಡುವ ಮೂಲಕ ಬರಮಾಡಿಕೊಳ್ಳಬಹುದಾಗಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್. ಸಾಲು ಸಾಲು ಸಿನಿಮಾಗಳ ಜೊತೆ ರಾಜಕೀಯದಲ್ಲಿ ಬ್ಯುಸಿಯಾಗಿರುವ ಜನಸೇನಾ ನಾಯಕ ಇದೀಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಗಬ್ಬರ ಸಿಂಗ್ ಖ್ಯಾತಿಯ ನಿರ್ದೇಶ ಹರೀಶ್ ಶಂಕರ್ ಪವನ್ ಕಲ್ಯಾಣ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೆರಲು ಸಿದ್ಧವಾಗುತ್ತಿದೆ.
ನಟ, ಜನಸೇನಾ ನಾಯಕ ಪವನ್ ಕಲ್ಯಾಣ್ ಹೆಸರು ಕೇಳಿದ್ರೆ ಸಾಕು ಕೋಟ್ಯಾಂತರ ಅಭಿಮಾನಿಗಳ ಹೃದಯದ ಕಂಪಿಸುತ್ತದೆ. ಪವನ್ ಒಂದು ಶಕ್ತಿ ಅಂತ ಅವರ ಅಭಿಮಾನಿಗಳು ಕರೆಯುತ್ತಿದ್ದಾರೆ. ಪವರ್ಸ್ಟಾರ್ ಸಿನಿಮಾಗಳು ಥಿಯೇಟರ್ಗೆ ಬರುವ ತಿಂಗಳ ಮುಂಚೆಯೇ ಸಖತ್ ಹೈಪ್ ಕ್ರಿಯೆಟ್ ಮಾಡುತ್ತವೆ. ತೆರೆ ಮೇಲೆ ಪವರ್ ಸ್ಟಾರ್ ಎಂಟ್ರಿ ಕೊಟ್ರೆ ಸಾಕು, ಚಿತ್ರಮಂದಿರದ ಟಾಪ್ ಕಿತ್ತೋಗುವಂತೆ ಪ್ಯಾನ್ಸ್ ಅಬ್ಬರಿಸುತ್ತಾರೆ.
ಮೆಗಾಸ್ಟಾರ್ ಚಿರಂಜೀವಿ ಪ್ರಸ್ತುತ ʼವಾಲ್ಟರ್ ವೀರಯ್ಯʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಾಲ್ಟರ್ ವೀರಯ್ಯ ಸಂಕ್ರಾಂತಿ ಹಬ್ಬದಂದು ತೆರೆ ಮೇಲೆ ಅಬ್ಬರಿಸಲು ಸಜ್ಜಾಗುತ್ತಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಚಾರ ಕಾರ್ಯಕ್ರಮಗಳೂ ಆರಂಭವಾಗುತ್ತಿವೆ. ಬಾಬಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ವಾಲ್ಟರ್ ವೀರಯ್ಯ ಸಿನಿಮಾದಲ್ಲಿ ಶ್ರುತಿ ಹಾಸನ್ ಚಿರುಗೆ ಜೊತೆಯಾಗಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ. ಅಜ್ಞಾತವಾಸಿ ಸಿನಿಮಾದ ನಂತರ ಸಿನಿ ವೃತ್ತಿಗೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದರು. 2019ರ ಚುನಾವಣೆಯಲ್ಲಿ ಜನಸೇನಾ ಪಕ್ಷದೊಂದಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ 2019 ರ ಚುನಾವಣೆಯಲ್ಲಿ ಪವನ್ ಸೋಲು ಅನುಭವಿಸಬೇಕಾಯಿತು.
ಜನಸೇನಾ ನಾಯಕ ಪವನ್ ಕಲ್ಯಾಣ್ ವಿರುದ್ಧ ಪ್ರಕರಣ ದಾಖಲಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪವನ್ ಕಲ್ಯಾಣ್ ಮತ್ತು ಅವರ ಹಿಂಬಾಲಿಕರ ಕಾರಿನ ಮೇಲೆ ರ್ಯಾಶ್ ಡ್ರೈವಿಂಗ್ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಮಂಗಳಗಿರಿ ಕ್ಷೇತ್ರದ ವ್ಯಾಪ್ತಿಯ ಇಪ್ಪತಂ ಎಂಬ ಗ್ರಾಮದಲ್ಲಿ ಕೆಲ ಮನೆಗಳನ್ನು ಧ್ವಂಸಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಬೇಕು ಎಂದು ಪ್ರಚಾರ ಮಾಡುತ್ತಿದೆ. ಪವನ್ ಕಲ್ಯಾಣ್ ಜನಸೇನಾ ಹುಟ್ಟು ಹಬ್ಬವನ್ನು ಆಚರಿಸಲು ಗ್ರಾಮಸ್ಥರು ತಮ್ಮ ಹೊಲವನ್ನು ಪವನ್ ಕಲ್ಯಾಣ್ ಅವರಿಗೆ ಹಸ್ತಾಂತರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿಶಾಖಪಟ್ಟಣಂ ಭೇಟಿ ಆಂಧ್ರಪ್ರದೇಶ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ಮೋದಿ ಅವರನ್ನು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಬಿಸಿ ಹೆಚ್ಚುತ್ತಿದೆ. ಪವನ್ ಕಲ್ಯಾಣ್ ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಆಹ್ವಾನ ಬಂದಿದೆ. ಶುಕ್ರವಾರ ಸಂಜೆಯಿಂದ ವಿಶಾಖಪಟ್ಟಣದಲ್ಲಿ ಲಭ್ಯವಾಗಲಿದೆ ಎಂದು ಸೂಚಿಸಲಾಗಿದೆ.
ಆಂಧ್ರ ಪ್ರದೇಶದಲ್ಲಿ ರಾಜಕೀಯ ವಾರ್ ಜೋರಾಗಿದೆ. ಅದರಲ್ಲೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಡುವಿನ ಪೊಲಿಟಿಕಲ್ ವಾರ್ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಪಿಸಿ ಪಕ್ಷದ ನಾಯಕರ ವಿರುದ್ಧ ಪವನ್ ಕಲ್ಯಾಣ್ ಗುಡುಗಿದ್ದಾರೆ.
ಜನಸೇನಾ ಮುಖ್ಯಸ್ಥ, ನಟ, ಪವನ್ ಕಲ್ಯಾಣ್ ವಿಶಾಖಪಟ್ಟಣ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಇನ್ನು ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಅನೇಕ ಜನಸೇನಾ ಕಾರ್ಯಕರ್ತರು ಮತ್ತು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಪವನ್ ಕಲ್ಯಾಣ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾದ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಸಿನಿಮಾ ಶೂಟಿಂಗ್ಗಾಗಿ ಚಿತ್ರತಂಡ ಸನ್ನದ್ಧವಾಗಿದ್ದು, ತಯಾರಿಯಲ್ಲಿರುವ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದೆ. ಪವನ್ ಕಲ್ಯಾಣ್ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ, ಹೊಸ ಲುಕ್ನ್ನೇ ಫೈನಲ್ ಮಾಡಿ ಎಂದು ಹರೀಶ್ ಶಂಕರ್ಗೆ ಪವರ್ ಸ್ಟಾರ್ ಫ್ಯಾನ್ಸ್ ಟ್ವೀಟ್, ಟ್ಯಾಗ್ಗಳನ್ನು ಮಾಡಿ ಒತ್ತಾಯಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.