ಜರ್ಮನಿಯ ಎನ್ಆರ್ಐ ದಂಪತಿ ಇತ್ತೀಚೆಗೆ ಜೈಪುರಕ್ಕೆ ಆಗಮಿಸಿದ್ದು, ಕೆಲ ದಿನಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಇವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಈ ಹಿನ್ನೆಲೆಯಲ್ಲಿ ಎರಡು ನಾಯಿಗಳನ್ನು ತಂದು ಸಾಕಿದ್ದಾರೆ. ಅವುಗಳನ್ನು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ಗೆಂದು ಹೊರಗಡೆ ಕರೆದುಕೊಂಡು ಹೋಗಿದ್ದಾರೆ.
44 ವರ್ಷದ ಮಹಿಳೆ ಕಳೆದ ಕೆಲವು ವರ್ಷಗಳಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಸಾಂಪ್ರದಾಯಿಕ ವಿಧಾನಗಳ ಮೂಲಕ ತೂಕವನ್ನು ಕಳೆದುಕೊಳ್ಳುವ ಆಕೆಯ ಎಲ್ಲಾ ಪ್ರಯತ್ನಗಳು ವಿಫಲವಾದವು. ಸಮಸ್ಯೆಯನ್ನು ಹೋಗಲಾಡಿಸಲು ಆಹಾರ ಮತ್ತು ವ್ಯಾಯಾಮ ಪದ್ಧತಿ ಬದಲಾಯಿಸಲು ನಿರ್ಧರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಎಸ್ಬಿಎನ್ಆರ್ಐ ಅನೇಕ ಟಚ್ಪಾಯಿಂಟ್ಗಳನ್ನು ಒಟ್ಟುಗೂಡಿಸುವಲ್ಲಿ ಮತ್ತು ಎನ್ಆರ್ಐಗೆ ಸಹಾಯಕರಾಗಿ ಕೆಲಸ ಮಾಡುವಲ್ಲಿ ಬಲವಾದ ತಳಹದಿಯನ್ನು ರಚಿಸಿದೆ ಎಂದು ಹೇಳಿದರು. ಇದನ್ನು ಸಕ್ರಿಯಗೊಳಿಸಲು ಇದು ಬ್ಯಾಂಕ್ಗಳು, ಹೂಡಿಕೆ ವೇದಿಕೆಗಳು ಮತ್ತು ಎನ್ಆರ್ಐಗಳ ಮೇಲೆ ಪರಿಣತಿ ಹೊಂದಿರುವ ಸೇವಾ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಏಕೆಂದರೆ ಪ್ರಕರಣ ದಾಖಲಿಸಿಕೊಳ್ಳದೆ ಸ್ಥಳೀಯ ಪೊಲೀಸರು ಎರಡೂವರೆ ತಿಂಗಳ ಕಾಲ ಮಾತುಕತೆ ನಡೆಸುತ್ತೇವೆ ಎಂದು ಸಮಯ ಮುಂದೂಡಿದ್ದಾರೆ. ಇದರಿಂದ ನೊಂದ ಜಸ್ವಂತ್ ಅಂತಿಮವಾಗಿ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವರ ಗಮನಕ್ಕೆ ತಂದರು. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎನ್ಆರ್ಒ ಖಾತೆಯಿಂದ ಸ್ಥಿರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. NRO ಖಾತೆಯಲ್ಲಿನ ಠೇವಣಿಗಳು ಭಾರತದಲ್ಲಿ ಪಡೆದ ಬಾಡಿಗೆ, ಲಾಭಾಂಶಗಳು, ಪಿಂಚಣಿ, ಬಡ್ಡಿ ಇತ್ಯಾದಿ ಆದಾಯವನ್ನು ಒಳಗೊಂಡಿರಬಹುದು. ಅವರು ಗಳಿಸಿದ ಬಡ್ಡಿಯು 30% ದಲ್ಲಿ ಟಿಡಿಎಸ್ಗೆ ಒಳಪಟ್ಟಿರುತ್ತದೆ.
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 6 ರ ಪ್ರಕಾರ, "ಆದಾಯ ತೆರಿಗೆಯ ದರಗಳು ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳಿಗೆ ಮತ್ತು ಎನ್ಆರ್ಐಗಳಿಗೆ ವಿಭಿನ್ನವಾಗಿವೆ. ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 182 ದಿನಗಳು ಅಥವಾ ಸತತ ನಾಲ್ಕು ವರ್ಷಗಳಲ್ಲಿ 365 ದಿನಗಳು ಭಾರತದಲ್ಲಿ ನೆಲೆಸಿರಬೇಕು. ಭಾರತದ ನಿವಾಸಿ ಎಂಬ ಮಾನದಂಡವನ್ನು ಪೂರೈಸದ ಯಾವುದೇ ಭಾರತೀಯ ಪ್ರಜೆಯು ಭಾರತದ ಅನಿವಾಸಿ ಮತ್ತು ಆದಾಯ ತೆರಿಗೆಯನ್ನು ಪಾವತಿಸಲು ಎನ್ಆರ್ಐಗಳು ಎಂದು ಪರಿಗಣಿಸಲಾಗುತ್ತದೆ.
ಕತಾರ್ನಲ್ಲಿ ಸ್ನೇಹಿತರು ಅಥವಾ ಕುಟುಂಬವನ್ನು ಹೊಂದಿರುವ ಮತ್ತು ಅವರೊಂದಿಗೆ ಇರಲು ಬಯಸುವ ಜನರಿಗೆ ಇದು ಅನ್ವಯಿಸುತ್ತದೆ. ಹೊಸ ನಿಯಮವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಫಿಲಿಪೈನ್ಸ್ನ ನಾಗರಿಕರಿಗೆ ಅನ್ವಯಿಸುತ್ತದೆ.
ಪ್ರಸ್ತುತ, ಎಕ್ಸ್ಪ್ರೆಸ್ ಎಂಟ್ರಿ ವ್ಯವಸ್ಥೆಯು ವಯಸ್ಸು, ಶಿಕ್ಷಣ, ಕೆಲಸದ ಅನುಭವ, ಉದ್ಯೋಗಾವಕಾಶ, ಭಾಷಾ ಕೌಶಲ್ಯ (ಫ್ರೆಂಚ್ ಸೇರಿದಂತೆ) ಮುಂತಾದ ಅಂಶಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಜನರಲ್ ಪೂಲ್ನಿಂದ ಶ್ರೇಣೀಕರಿಸುತ್ತದೆ.
ಇನ್ನು ಎನ್ಆರ್ಐಗಳಿಗಾಗಿಯೇ ಕರ್ನಾಟಕದಲ್ಲಿ ಕೆಲವೊಂದು ನೀತಿಗಳನ್ನು ಜಾರಿಗೊಳಿಸಲಾಗಿತ್ತು. ಈ ನೀತಿಗಳಿಂದ ಅನಿವಾಸಿ ಕನ್ನಡಿಗರು ಮತ್ತು ರಾಜ್ಯದ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎಂದು ನಂಬಲಾಗಿತ್ತು. ಆದರೆ ಕರ್ನಾಟಕದ ಎನ್ಆರ್ಐ ಕಮಿಟಿಯು ಸದ್ಯ ಕಾರ್ಯ ನಿರ್ವಹಿಸುತ್ತಿಲ್ಲ.
ಸ್ಯಾನ್ ಫ್ರಾನ್ಸಿಸ್ಕೊನ ಕಣಿವೆ ಪ್ರದೇಶದಲ್ಲಿರುವ ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ ಸಮುದಾಯದ ಜನರನ್ನುದ್ದೇಶಿಸಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ನಾವಿನ್ಯತೆ ಹಾಗೂ ಸಂಶೋಧನೆಗೆ ಭಾರತೀಯರು ನೀಡಿದ ಕೊಡುಗೆಯನ್ನು ಎತ್ತಿಹಿಡಿದಿದ್ದಾರೆ.
ವಿದ್ಯಾ ಅಯ್ಯರ್ ಸೆಪ್ಟೆಂಬರ್ 26, 1990ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ವಲಸೆ ಬಂದರು.
ಮಾದಕ ಪದಾರ್ಥ ಸಾಗಣೆ ಆರೋಪದ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿರುವ ಮತ್ತು ಮಲೇಷ್ಯಾನಲ್ಲಿ ವಾಸಿಸುವ ಭಾರತೀಯ ಮೂಲದ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನಿಗೆ ಗಲ್ಲುಶಿಕ್ಷೆ ಕಾಯಂಗೊಳಿಸಿ ಸಿಂಗಾಪುರ್ ನ್ಯಾಯಾಲಯ ಆದೇಶ ಹೊರಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.