ಇತ್ತೀಚೆಗೆ ಕೋಲ್ಕತ್ತಾ ತಂಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಸೆಲ್ ನ ನೆಟ್ಸ್ ಸೆಷನ್ನ ವೀಡಿಯೊವನ್ನು ಹಂಚಿಕೊಂಡಿದೆ, ಈ ವೀಡಿಯೊದಲ್ಲಿ ರಸೆಲ್ ಹೊಡೆದ ಹೊಡೆತಕ್ಕೆ ಕುರ್ಚಿ ಮುರಿದು ಹೋಗಿದೆ. ಈ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಐಪಿಎಲ್ ಇತಿಹಾಸಲ್ಲಿಯೇ ಆರಂಭಿಕ ಪಂದ್ಯಗಳಲ್ಲಿ ಸತತ 8 ಸೋಲು ಕಂಡ ಮೊದಲ ತಂಡವೆಂಬ ಅಪಖ್ಯಾತಿಗೆ ಮುಂಬೈ ಗುರಿಯಾಗಿದೆ. ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಮುಖ್ಯ ಕಾರಣವೆಂದು ರೋಹಿತ್ ಶರ್ಮಾ ಹೇಳಿದ್ದರು.
ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ವಿರುದ್ಧ ಸೋಲನ್ನು ಅನುಭವಿಸಿದೆ.ಆ ಮೂಲಕ ಈ ಆವೃತ್ತಿಯಲ್ಲಿ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿದೆ.ಇನ್ನೊಂದು ವಿಚಿತ್ರ ಸಂಗತಿ ಏನೆಂದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಸತತ ಎಂಟು ಪಂದ್ಯಗಳನ್ನು ಸೋತಿರುವ ಕುಖ್ಯಾತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.
ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿ ಯುವ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾಗೆ ಮೊದಲ ಭಾರಿ ಅವಕಾಶ ನೀಡಲಾಯಿತು. ಇದನ್ನು ಸಂಪೂರ್ಣ ಬಳಸಿಕೊಂಡು ಅಭಿಷೇಕ್, ನಾನು ಯಾವಾಗಲೂ ಈ ಸ್ಥಾನದಲ್ಲಿ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಈ ತಂಡವನ್ನು ಚಾಂಪಿಯನ್ ಮಾಡಿದ ಕೆಲವು ಆಟಗಾರರನ್ನು ಮೆಗಾ ಹರಾಜಿನಲ್ಲಿ ಮುಂಬೈ ತನ್ನ ತಂಡದಿಂದ ಮೂವರು ಆಟಗಾರರನ್ನು ಕೈಬಿಟ್ಟಿತು. ಹೀಗಾಗಿ ಮುಂಬೈ ತಂಡ ಸೀಸನ್ 15 ರಿಂದ ಹೊರಗುಳಿಯಲು ಮೊದಲ ಕಾರಣ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಈ ಮೂರು ಆಟಗಾರರು ಯಾರು? ಹರಾಜಿನಲ್ಲಿ ಕೈಬಿಡಲು ಕಾರಣವೇನು ಇಲ್ಲಿದೆ ನೋಡಿ..
ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 9 ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹೈದರಾಬಾದ್ ತಂಡವು ತನ್ನ ನಿರ್ಧಾರ ಸರಿ ಎನ್ನುವಂತೆ ಮಾರಕ ಬೌಲಿಂಗ್ ದಾಳಿಯನ್ನು ನಡೆಸಿತು.ಇದರ ಪರಿಣಾಮವಾಗಿ ಆರ್ಸಿಬಿ ತಂಡವು ತಂಡದ ಮೊತ್ತ 20 ರನ್ ಆಗುವಷ್ಟರಲ್ಲಿ ನಾಲ್ಕು ಮಹತ್ವದ ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಆಘಾತವನ್ನು ಎದುರಿಸಿತು.
ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಕುರಿತಾಗಿ ಮೆಚ್ಚುಗೆಯ ಸುರಿಮಳೆಗಳೇ ಹರಿದು ಬರುತ್ತಿವೆ.ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಗೆ ಉಳಿದಿದ್ದ ಹಾರ್ದಿಕ್ ಪಾಂಡ್ಯ ಅವರು ಈಗ ಐಪಿಎಲ್ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ ತಂಡದ ನೇತೃತ್ವವನ್ನು ವಹಿಸಿಕೊಂಡಿರುವ ಅವರು ಈಗ ನಾಯಕತ್ವದ ಜೊತೆಗೆ ತಮ್ಮ ಆಟದ ಮೂಲಕವೂ ಮಿಂಚುತ್ತಿದ್ದಾರೆ.
ಈ ಪಂದ್ಯದಲ್ಲಿ, ಗಿಲ್ ದುರಾದೃಷ್ಟಕ್ಕೆ ಬಲಿಯಾಗಿರುವುದು ಭಾರಿ ಸುದ್ದಿಯಾಗಿದೆ. ಲೆಗ್-ಸ್ಟಂಪ್ನ ಹೊರಗೆ ಹೋದ ಬಾಲ್ ಗೆ ಗಿಲ್ ವಿಕೆಟ್ ಒಪ್ಪಿಸಬೇಕಾಯಿತು. ಆದ್ರೆ, ಗಿಲ್ ಔಟಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅದು ನೋ ಬಾಲ್ ಅಂತಾ ಪಂತ್ ಹೇಳುತ್ತಿದ್ದರೆ, ಅಂಪೈರ್ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಕ್ರೀಸ್ನಲ್ಲಿದ್ದ ಪೊವೆಲ್ ಸಹ ಅಂಪೈರ್ ಜೊತೆ ಮಾತನಾಡಿದ್ರೂ ಪ್ರಯೋಜನವಾಗಲಿಲ್ಲ.
ಇಲ್ಲಿನ ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 15 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದೆಹಲಿ ತಂಡವು ಆರಂಭದಿಂದಲೇ ವಿಕೆಟ್ ಗಳನ್ನು ಪಡೆಯಲು ಸಾಕಷ್ಟು ಶ್ರಮವಹಿಸಬೇಕಾಯಿತು.
ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಈಗ ತಮ್ಮ ಅದ್ಬುತ ಪ್ರದರ್ಶನದಿಂದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ, ಈಗ ಅವರು ಏಕಮೇವ ವ್ಯಕ್ತಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯಕ್ಕೆ ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಆದರೆ ಇಂತಹ ಆಟಗಾರ ಟೀಮ್ ಇಂಡಿಯಾ ತಂಡದಲ್ಲಿ ಇದ್ದಾಗ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು.ಅದರಲ್ಲೂ ಧೋನಿ ತಂಡಕ್ಕೆ ಬಂದ ನಂತರ ಅವರ ಸ್ಥಾನಕ್ಕೆ ಒಂದು ರೀತಿ ಆಪತ್ತು ಎದುರಾಯಿತು ಎಂದು ಹೇಳಬಹುದು.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ ಗಳ ಗೆಲುವು ಸಾಧಿಸಿದೆ.
ಎ.ಬಿ.ಡಿವಿಲಿಯರ್ಸ್ ಎಂದರೆ ಸಾಕು ಎದುರಾಳಿ ತಂಡದ ಬೌಲರ್ ಗಳಲ್ಲಿ ನಿಜಕ್ಕೂ ನಡುಕ ಹುಟ್ಟುತ್ತದೆ, ಅದರಲ್ಲೂ ಅವರು ತಮ್ಮ ಎಂದಿನ 360 ಡಿಗ್ರಿ ಬ್ಯಾಟಿಂಗ್ ಮೂಲಕ ಎಂತಹ ಬೌಲರ್ ನ್ನು ಕೂಡ ಒಂದು ಕ್ಷಣ ದಂಗುಬಡಿಸುತ್ತಾರೆ. ಈಗ ಇಂತಹ ಆಟಗಾರ ಈಗ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈಗ ತಮ್ಮ ನೆಚ್ಚಿನ ಆರ್ಸಿಬಿ ತಂಡದ ಆಟಗಾರನ ಕುರಿತಾಗಿ ಅಚ್ಚರಿ ವ್ಯಕ್ತಪಡಿಸುವುದರ ಜೊತೆ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.