Mars Transit 2023: ಜುಲೈ 15 ರಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಸ್ಥಿತಿಗತಿಯಲ್ಲಿ ಭಾರಿ ಸುಧಾರಣೆ

Mangal Gochar 2023: ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜುಲೈ 15 ರಂದು ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ತನ್ನ ನೀಚ ರಾಶಿಯನ್ನು ತೊರೆಯಲಿರುವ ಮಂಗಳ ಸೂರ್ಯನ ರಾಶಿಗೆ ಪ್ರವೇಶಿಸಲಿದ್ದಾನೆ. ಆಗಸ್ಟ್ 18, 2023 ರವರೆಗೆ ಆತ ಸೂರ್ಯನ ರಾಶಿಯಲ್ಲಿಯೇ ಇರಲಿದ್ದಾನೆ. ಸೂರ್ಯ ಹಾಗೂ ಮಂಗಳನ ಕಾಂಬಿನೇಶನ್ ಅಂದರೆ ಅಗ್ನಿ ಹಾಗೂ ಅಗ್ನಿಯ ಕಾಂಬಿನೇಷನ್ ಎಂದರ್ಥ.  

Written by - Nitin Tabib | Last Updated : Jul 1, 2023, 07:22 PM IST
  • ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸಲು ನೀವು ನೆನೆಗುದಿಗೆ ಬಿದ್ದ ವಿದೇಶ ನಿಮ್ಮ ವಿದೇಶ ಯಾತ್ರೆಗಳನ್ನು ನೀವು ಪೂರ್ಣಗೊಳಿಸಬಹುದು.
  • ಮಂಗಳನ ಉಪಸ್ಥಿತಿಯಲ್ಲಿಯೇ ಅವುಗಳನ್ನು ಪೂರ್ಣಗೊಳಿಸುವುದು ಉತ್ತಮ. ಜುಲೈ 15ರ ಬಳಿಕ ಪರಿಸ್ಥಿತಿಗಳು ಮತ್ತಷ್ಟು ಪ್ರಬಲವಾಗಲಿವೆ.
  • ಏಕೆಂದರೆ ಈ ರಾಶಿಯ ಸೂರ್ಯ ಕೂಡ ನಿಧಾನಗತಿಯಲಿ ನಿಮ್ಮತ್ತ ಚಲಿಸಲಿದ್ದಾನೆ ಮತ್ತು ನಿಮಗೆ ಮತ್ತಷ್ಟು ಬಲವನ್ನು ದಯಪಾಲಿಸಲಿದ್ದಾನೆ.
Mars Transit 2023: ಜುಲೈ 15 ರಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಸ್ಥಿತಿಗತಿಯಲ್ಲಿ ಭಾರಿ ಸುಧಾರಣೆ title=

Mangal Gochar 2023: ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜುಲೈ 15 ರಂದು ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ತನ್ನ ನೀಚ ರಾಶಿಯನ್ನು ತೊರೆಯಲಿರುವ ಮಂಗಳ ಸೂರ್ಯನ ರಾಶಿಗೆ ಪ್ರವೇಶಿಸಲಿದ್ದಾನೆ. ಆಗಸ್ಟ್ 18, 2023 ರವರೆಗೆ ಆತ ಸೂರ್ಯನ ರಾಶಿಯಲ್ಲಿಯೇ ಇರಲಿದ್ದಾನೆ. ಸೂರ್ಯ ಹಾಗೂ ಮಂಗಳನ ಕಾಂಬಿನೇಶನ್ ಅಂದರೆ ಅಗ್ನಿ ಹಾಗೂ ಅಗ್ನಿಯ ಕಾಂಬಿನೇಷನ್ ಎಂದರ್ಥ. ಅಂದರೆ ಶರೀರದಲ್ಲಿ ವ್ಯಾಪಕ ಶಕ್ತಿಯ ಸಂಚಾರ ಎಂಬುದು ಇದರ ತಾತ್ಪರ್ಯ. ಇದು ಮಂಗಳನ ವತಿಯಿಂದ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ವಿಭಿನ್ನ ರೀತಿಯ ಪ್ರಭಾವ ಬೀರುತ್ತದೆ. ಹೀಗಿರುವಾಗ ಕನ್ಯಾ ರಾಶಿಯ ಜನರ ಮೇಲೆ ಈ ಶಕ್ತಿಯ ಪ್ರಭಾವ ವಿದೇಶ ಯಾತ್ರೆ, ಭೂಮಿಯಲ್ಲಿ ಹೂಡಿಕೆ ಹಾಗೂ ಯಾತ್ರೆಗಳ ಮೇಲೆ ಈ ಶಕ್ತಿಯ ಉಪಯೋಗವಾಗಲಿದೆ. 

ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸಲು ನೀವು ನೆನೆಗುದಿಗೆ ಬಿದ್ದ ವಿದೇಶ ನಿಮ್ಮ ವಿದೇಶ ಯಾತ್ರೆಗಳನ್ನು ನೀವು ಪೂರ್ಣಗೊಳಿಸಬಹುದು. ಮಂಗಳನ ಉಪಸ್ಥಿತಿಯಲ್ಲಿಯೇ ಅವುಗಳನ್ನು ಪೂರ್ಣಗೊಳಿಸುವುದು ಉತ್ತಮ. ಜುಲೈ 15ರ ಬಳಿಕ ಪರಿಸ್ಥಿತಿಗಳು ಮತ್ತಷ್ಟು ಪ್ರಬಲವಾಗಲಿವೆ. ಏಕೆಂದರೆ ಈ ರಾಶಿಯ ಸೂರ್ಯ ಕೂಡ ನಿಧಾನಗತಿಯಲಿ ನಿಮ್ಮತ್ತ ಚಲಿಸಲಿದ್ದಾನೆ ಮತ್ತು ನಿಮಗೆ ಮತ್ತಷ್ಟು ಬಲವನ್ನು ದಯಪಾಲಿಸಲಿದ್ದಾನೆ. 

ಭೂಮಿ ಮತ್ತು ಪ್ರಯಾಣಕ್ಕೆ ಸಂಬಂಧಿಸಿದಂತೆ ಸಮಯ ಅತ್ಯಂತ ಸೂಕ್ತವಾಗಿದೆ- ದೀರ್ಘಕಾಲ ಭೂಮಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿರುವವರಿಗೆ ಸಮಯವು ತುಂಬಾ ಅತ್ಯುತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳು ಪಹಲಕಾರಿಯಾಗಲಿವೆ. ಪ್ರಯಾಣವು ಹೆಚ್ಚಾಗಲಿದೆ, ನೀವು ಎಲ್ಲೋ ಹೋಗಬೇಕೆಂದು ಯೋಜಿಸುತ್ತಿದ್ದರೆ, ಅದು ದೇಶದಲ್ಲಾಗಲಿ ಅಥವಾ ಹತ್ತಿರದಲ್ಲಾಗಲಿ ಎಲ್ಲಾದರೂ ಪ್ರವಾಸ ಕೈಗೊಳ್ಳಬಹುದು. 

ಇದನ್ನೂ ಓದಿ-Shani-Mangal Yog: ಶೀಘ್ರದಲ್ಲಿಯೇ ಶನಿ-ಮಂಗಳರ ಮುಖಾ-ಮುಖಿಯಿಂದ ಸಮಸಪ್ತಕ ಯೋಗ ನಿರ್ಮಾಣ, ಯಾರ ಮೇಲೆ ಹೇಗೆ ಪ್ರಭಾವ?

ಅಪಘಾತಗಳಿಂದ ಸುರಕ್ಷಿತವಾಗಿರಿ
ಈ ಸಮಯದಲ್ಲಿ, ಸಂಚಾರ ನಿಯಮಗಳ ಬಗ್ಗೆ ವಿಶೇಷ ಗಮನ ನೀಡಿ. ಏಕೆಂದರೆ ಒಂದೆಡೆ ನಿಮ್ಮ ಶಕ್ತಿ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ವಾಹನದ ವೇಗವೂ ಅನಗತ್ಯವಾಗಿ ಹೆಚ್ಚಾಗಬಹುದು. ಅಂತಹ ಸಂದರ್ಭಗಳಲ್ಲಿ, ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸುವುದು ಉತ್ತಮ ಮತ್ತು ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಗ್ರಹಗಳ ಬಲವಾದ ಶಕ್ತಿಯು ವಾಹನ ಅಪಘಾತಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ-Spiritual: ಈ ಜನರ ಮೇಲೆ ಶನಿ ತನ್ನ ಕೆಟ್ಟ ದೃಷ್ಟಿಯನ್ನು ಎಂದಿಗೂ ಬೀರುವುದಿಲ್ಲ

ಹನುಮನನ್ನು ಪ್ರಸನ್ನಗೊಳಿಸಿ 
ಶನಿವಾರ ಮತ್ತು ಮಂಗಳವಾರದಂದು ಹನುಮಾನ್ ಚಾಲೀಸಾವನ್ನು ಪಠಿಸಬೇಕು, ಸಾಧ್ಯವಾದರೆ, ಅವರಿಗೆ ನೈವೇದ್ಯಗಳು ಇತ್ಯಾದಿಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವಿದೇಶಿ ಪ್ರವಾಸಗಳು ಯಶಸ್ವಿಯಾಗುತ್ತವೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಹನುಮ ಅಪಘಾತ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸುತ್ತಾನೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News