Astro Tips: ಈ 3 ದೊಡ್ಡ ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಭೂಕಂಪ-ಆರ್ಥಿಕ ಬಿಕ್ಕಟ್ಟು ಸಾಧ್ಯತೆ!

Surya-Guru-Rahu Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2 ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ. ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭವೆಂದು ಸಾಬೀತುಪಡಿಸುತ್ತದೆ.

ಸೂರ್ಯ-ಗುರು-ರಾಹು ಯೋಗ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2 ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ. ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭವೆಂದು ಸಾಬೀತುಪಡಿಸುತ್ತದೆ. ಗ್ರಹಗಳ ಸಮ್ಮಿಲನವು ಎಲ್ಲಾ 12 ರಾಶಿಗಳ ಜನರಿಗೆ ಮಾತ್ರವಲ್ಲದೆ ದೇಶ-ವಿದೇಶದಲ್ಲಿ ಶುಭ ಮತ್ತು ಅಶುಭ ಫಲಿತಾಂಶ ನೀಡುತ್ತದೆ. ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಸೂರ್ಯ, ಗುರು ಮತ್ತು ರಾಹುವಿನ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಜನೆಯ ಮೇಲೆ ಶನಿದೇವನ ಕಣ್ಣಿಟ್ಟಿರುವುದರಿಂದ ದೇಶ ಮತ್ತು ಪ್ರಪಂಚದ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೇಷ ರಾಶಿಯಲ್ಲಿ ಸೂರ್ಯ-ಗುರು-ರಾಹು ಸಂಯೋಗದ ಋಣಾತ್ಮಕ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತವೆ. ಈ 3 ಗ್ರಹಗಳ ಮೈತ್ರಿಯಿಂದಾಗಿ ರಾಜಕೀಯ ಮೇಲಾಟ ಕಾಣಬಹುದು. ಅಷ್ಟೇ ಅಲ್ಲ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರ ಸಾರ್ವಜನಿಕರನ್ನು ಕೆರಳಿಸುವ ಸಾಧ್ಯತೆಯೂ ಇದೆ. ಆ ವೇಳೆ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

2 /6

ಜ್ಯೋತಿಷ್ಯದಲ್ಲಿ ದೇವ ಗುರು ಗುರುವನ್ನು ಆಯಸ್ಸು ಒದಗಿಸುವ ಮತ್ತು ಜೀವನದ ರಕ್ಷಕನೆಂದು ಪರಿಗಣಿಸಲಾಗುತ್ತದೆ. ರಾಹುವಿನೊಡನೆ ಇರುವುದರಿಂದಲೇ ದೇಶ-ಪ್ರಪಂಚದಲ್ಲಿ ಮಾರಕ ರೋಗ ಬರಬಹುದು, ಇದರಿಂದ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ‍್ಯತೆ ಇರುತ್ತದೆ.

3 /6

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಸೂರ್ಯ, ರಾಹು ಮತ್ತು ಗುರುಗಳ ಸಂಯೋಜನೆಯು ದೇಶ ಮತ್ತು ಪ್ರಪಂಚದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಬಹಳಷ್ಟು ನಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಈ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಬಹುದು ಎಂದು ನಂಬಲಾಗಿದೆ. ಯಾವುದೇ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳುವ ಘಟನೆ ಇತ್ಯಾದಿ ಸುದ್ದಿಯಾಗಬಹುದು.

4 /6

ಈ ಗ್ರಹಗಳ ಸಂಯೋಗದ ಸಮಯದಲ್ಲಿ ಅನೇಕ ದೇಶಗಳ ಆರ್ಥಿಕ ಸ್ಥಿತಿಯ ಮೇಲೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಷೇರುಪೇಟೆ ಮತ್ತು ಚಿನ್ನದ ಬೆಲೆಯಲ್ಲಿ ಹಠಾತ್ ದೊಡ್ಡ ಕುಸಿತ ಕಂಡುಬರಲಿದೆ. ಇದು ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟನ್ನು ಆಹ್ವಾನಿಸುತ್ತದೆ.

5 /6

ಮೇಷ ರಾಶಿಯಲ್ಲಿ ಈ 3 ಗ್ರಹಗಳ ಸಂಯೋಜನೆಯು ಭೂಮಿಯ ಯಾವುದೇ ಪ್ರದೇಶದಲ್ಲಿ ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿಯಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

6 /6

ಈ 3 ಗ್ರಹಗಳ ಮೈತ್ರಿಯು ಮೇಷ ರಾಶಿಯಲ್ಲಿ ಏಪ್ರಿಲ್ 22ರಂದು ಸಂಭವಿಸಲಿದೆ. ಈ ಸಮಯದಲ್ಲಿ ಬೇರೆ ದೇಶದಲ್ಲಿ ಯುದ್ಧದ ಸಾಧ್ಯತೆ ಇರುತ್ತದೆ. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಭಾರತದ ಯಾವುದೇ ನೆರೆಯ ರಾಷ್ಟ್ರದೊಂದಿಗೆ ಸಂಘರ್ಷ ನಡೆಯಬಹುದು ಎಂದು ನಂಬಲಾಗಿದೆ. ಪ್ರಮುಖ ಭಯೋತ್ಪಾದಕ ಘಟನೆಯೂ ಸಂಭವಿಸಬಹುದು ಎನ್ನಲಾಗುತ್ತಿದೆ.