ಫ್ಲೈಟ್‌ನಲ್ಲಿ ಯುವಕನ ಹುಚ್ಚಾಟ : ಟೆರರಿಸ್ಟ್ ಎಂದು ಏರ್ ಇಂಡಿಯಾ ಸಿಬ್ಬಂದಿಗೆ ಬೆದರಿಕೆ..!

ಆತ ಕಳೆದ ಫೆಬ್ರವರಿ 17 ರಂದು ತನ್ನ ಹುಟ್ಟೂರಿಗೆ ತೆರಳಲು ಏರ್ ಇಂಡಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. ಅದರಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ತೆರಳಲು ಫ್ಲೈಟ್ ಕೂಡ ಅಂತಿದ್ದ... ಮುಂದೆನಾಯ್ತು..? ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ ನೋಡಿ..

Written by - VISHWANATH HARIHARA | Edited by - Krishna N K | Last Updated : Feb 21, 2024, 10:44 PM IST
  • ಬೆಂಗಳೂರಿಂದ ಲಕ್ನೋಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್
  • ಫ್ಲೈಟ್ ಹತ್ತಿ ಕೂತಿದ್ದ ಅವನೊಬ್ಬ ನಾನು ವಾಪಸ್ ಹೋಗ್ಬೇಕ್ ಅಂದಿದ್ದ
  • ನಾನೊಬ್ಬ ಟೆರರಿಸ್ಟ್. ಮಾತಾಡಿದ್ರೆ ಬಾಂಬ್ ಹಾಕ್ಬಿಡ್ತಿನಿ ಅಂದಿದ್ದ ಅಷ್ಟೇ..!
ಫ್ಲೈಟ್‌ನಲ್ಲಿ ಯುವಕನ ಹುಚ್ಚಾಟ : ಟೆರರಿಸ್ಟ್ ಎಂದು ಏರ್ ಇಂಡಿಯಾ ಸಿಬ್ಬಂದಿಗೆ ಬೆದರಿಕೆ..! title=

ಬೆಂಗಳೂರು : ಅದು ಬೆಂಗಳೂರಿಂದ ಲಕ್ನೋಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್. ಮುನ್ನೂರಕ್ಕೂ ಹೆಚ್ಚು ಜನ ಪ್ಯಾಸೆಂಜರ್ಸ್ ಫ್ಲೈಟ್ ಹತ್ತಿ ಕೂತಿದ್ರೆ. ಟಿಕೆಟ್ ಪಡೆದು ಫ್ಲೈಟ್ ಹತ್ತಿ ಕೂತಿದ್ದ ಅವನೊಬ್ಬ ನಾನು ವಾಪಸ್ ಹೋಗ್ಬೇಕ್ ಅಂದಿದ್ದ. ಏರ್ ಇಂಡಿಯಾ ಫ್ಲೈಟ್ ಸಿಬ್ಬಂದಿ ಯಾಕಪ್ಪ ಏನಾಯ್ತು ಅಂದಿದ್ದೇ ತಡ. ನಾನೊಬ್ಬ ಟೆರರಿಸ್ಟ್. ಮಾತಾಡಿದ್ರೆ ಬಾಂಬ್ ಹಾಕ್ಬಿಡ್ತಿನಿ ಅಂದಿದ್ದ ಅಷ್ಟೇ..! ಮುಂದೇನಾಯ್ತು ಅನ್ನೊ ಇಂಟ್ರೆಸ್ಟಿಂಗ್ ಸ್ಟೋರಿ ನಾವ್ ಹೇಳ್ತಿವ್ ನೋಡಿ.

ಜೇಬಲ್ಲಿ ಕೈಯ್ಯಿಟ್ಟು ತಲೆಮೇಲೆ ಟೋಪಿ ರೀತಿಯ ಫುಲ್ ಓವರ್ ಧರಿಸಿ ಬೆಪ್ಪು ಮೋರೆ ಹಾಕಿ ಕೂತಿರೋ ಈ ಯುವಕನ ಹೆಸ್ರು ಆದರ್ಶ್ ಕುಮಾರ್ ಸಿಂಗ್. ಮೂಲತದ ಉತ್ತರಪ್ರದೇಶದ ಲಕ್ನೋ ನಗರದವನು. ಬೆಂಗಳೂರಿನ ಖಾಸಗಿ ವಿಶ್ಯವಿದ್ಯಾಲಯದಲ್ಲಿ ವ್ಯಾಸಾಂಗ ಮಾಡ್ತಿದ್ದ. ಕಳೆದ ಫೆಬ್ರವರಿ 17 ರಂದು ತನ್ನ ಹುಟ್ಟೂರಿಗೆ ತೆರಳಲು ಏರ್ ಇಂಡಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. ಅದರಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ತೆರಳಲು ಫ್ಲೈಟ್ ಕೂಡ ಅಂತಿದ್ದ. 

ಇದನ್ನೂ ಓದಿ:ನುಗ್ಗಿ ಹೊಡೆಯುತ್ತಿದ್ದೇವೆ ಉಗ್ರಗಾಮಿ ಪಾಕ್’ಗೆ, ಚೀನಾಕ್ಕೂ ಇಟ್ಟಿದ್ದೇವೆ ಚೆಕ್ ಮೇಟ್: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಇನ್ನೇನು ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ಫ್ಲೈಟ್ ಬೆಂಗಳೂರಿನಿಂದ ಲಕ್ನೋಗೆ ಟೇಕ್ ಆಫ್ ಆಗುವ ಮುನ್ನಾ ನಾನು ಲಕ್ನೋಗೆ ಬರಲ್ಲ. ನಾನು ವಾಪಸ್ ಇಳಿದು ಹೋಗ್ತಿನಿ ಎಂದು ಕ್ಯಾತೆ ತೆಗೆದಿದ್ದ. ಏರ್ ಇಂಡಿಯಾ ಸಿಬ್ಬಂದಿ ಯಾಕ್ ಸರ್ ಏನಾಯ್ತು ಅಂದಿದ್ದೆ ತಡ ನಾನೊಬ್ಬ ಟೆರರಿಸ್ಟ್. ಬಾಂಬ್ ಹಾಕ್ತಿನಿ ಎಂದಿದ್ದ. ಯಾವಾಗ ಆದರ್ಶ್ ಕುಮಾರ್ ಸಿಂಗ್ ತಾನೊಬ್ಬ ಟೆರರಿಸ್ಟ್. ಬಾಂಬ್ ಹಾಕ್ತೀನಿ ಅಂದಿದ್ದೆ ತಡ ಫ್ಲೈಟ್ ನಲ್ಲಿದ್ದ ನೂರಾರು ಪ್ರಯಾಣಿಕರು ಭಯಭೀತರಾಗಿದ್ರು. ಕೂಡಲೇ ಅಲರ್ಟ್ ಆದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯನ್ನ ವಶಕ್ಕೆ ಪಡೆದು ಏರ್ಫೊರ್ಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ರು. 

ಆರೋಪಿಯನ್ನ ಕೂಡಲೇ ವಶಕ್ಕೆ ಪಡೆದ ಪೊಲೀಸರು ಆತನ ಪೂರ್ವಾಪರವನ್ನ ಕೆದಕಿದ್ದಾರೆ. ಆದರ್ಶ್ ಕುಮಾರ್ ಸಿಂಗ್ ನಿಜವಾಗಿಯೂ ಟೆರರಿಸ್ಟಾ ಅಥವಾ ಕೋಪದಲ್ಲಿ ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ  ಬೆದರಿಕೆ ಹಾಕಿದ್ದಾನ..? ಅಲ್ಲದೇ ಆತನ ಬಳಿ ಯಾವುದಾದ್ರು ಸ್ಪೋಟಕ ವಸ್ತುಗಳು ಇದ್ಯಾ ಅನ್ನೊದನ್ನ ತಪಾಸಣೆ ನಡೆಸಿದ್ದಾರೆ. ಆದರ್ಶ್ ಸಿಂಗ್ ತಪಾಸಣೆ ವೇಳೆ ಯಾವುದೇ ಸ್ಪೋಟ ಪತ್ತೆಯಾಗಿಲ್ಲ. ಆತನಿಗೆ ಯಾವುದೇ ಭಯೋತ್ಪಾದಕ ಸಂಘಟನೆಯ ಪರಿಚಯವಿಲ್ಲ. ಆತ  ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಡಿಪ್ರೆಷನ್ ನಿಂದ ಹೀಗೆ ಮಾಡಿರೋದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ:ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ್ದ ದಂಪತಿ ಬಂಧನ..!

ಸದ್ಯ ಪ್ರಕರಣ ಸಂಬಂಧ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಆದರ್ಶ್ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಆದರ್ಶ್ ನನ್ನು ಬಂಧಿಸಿರೋ ಏರ್ಪೊರ್ಟ್ ಠಾಣೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News