ಪಿತ್ರಾರ್ಜಿತ ಆಸ್ತಿ ಹಂಚಿಕೆ, ಕಾಂಗ್ರೆಸ್’ನವರಿಗೆ ಭಯ ಶುರುವಾಗಿದೆ: ಬಸವರಾಜ ಬೊಮ್ಮಾಯಿ

ಹಾವೇರಿ: ಹಾನಗಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿರ್ತೋಡಾ  ಹೇಳಿಕೆ ನಮಗೆ ಸಂಬಂಧ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು.

Written by - Prashobh Devanahalli | Last Updated : Apr 26, 2024, 06:18 PM IST
    • ಹಾನಗಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ
    • ಸಿಎಂ ಸಿದ್ದರಾಮಯ್ಯ ಮೊದಲು ಅದಕ್ಕೆ ಉತ್ತರ ಕೊಡಲಿ‌
    • ತೆರಿಗೆ ಕಟ್ಟಬೇಕು ಎಂಬ ವಿಚಾರದಿಂದ ಮೊದಲು ಭಯ ಹುಟ್ಟಿದ್ದು ಡಿಸಿಎಂಗೆ
ಪಿತ್ರಾರ್ಜಿತ ಆಸ್ತಿ ಹಂಚಿಕೆ, ಕಾಂಗ್ರೆಸ್’ನವರಿಗೆ ಭಯ ಶುರುವಾಗಿದೆ: ಬಸವರಾಜ ಬೊಮ್ಮಾಯಿ title=
File Photo

ಹಾವೇರಿ: ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ಸರ್ಕಾರಕ್ಕೆ ಶೇ 55% ರಷ್ಟು ತೆರಿಗೆ ಕಟ್ಟಬೇಕು ಎಂಬ ವಿಚಾರದಿಂದ ಮೊದಲು ಭಯ ಹುಟ್ಟಿದ್ದು ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್ ನೋಡಿ ಲವ್ವಲ್ಲಿ ಬಿದ್ದ! ಮೊದಲ ನೋಟದಲ್ಲೇ ಕರ್ನಾಟಕದ ಈ ಬೆಡಗಿಗೆ ಮನಸೋತು ನಿಂತಲ್ಲೇ ಪ್ರಪೋಸ್ ಮಾಡಿದ ಟೀಂ ಇಂಡಿಯಾದ ಕ್ರಿಕೆಟಿಗನೀತ

ಹಾನಗಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿರ್ತೋಡಾ  ಹೇಳಿಕೆ ನಮಗೆ ಸಂಬಂಧ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು. ಯಾರಾರೂ ಬೇನಾಮಿ ಆಸ್ತಿ ಮಾಡಿದ್ದಾರೆ. ರಾಹುಲ್ ಗಾಂಧಿ ಹಿಡಿದು ಕಾಂಗ್ರೆಸ್ಸಿನವರೆ ಹೆಚ್ಚು ಬೇನಾಮಿ ಆಸ್ತಿ ಮಾಡಿದ್ದು, ಅವರಿಗೆ ನಡುಕ ಹುಟ್ಟಿದೆ. ಅವರ ಪಕ್ಷದಲ್ಲಿಯೇ ಎರಡು ಬಿನ್ನಮತ ಬಂದಿದೆ. ಶ್ಯಾಮ್ ಪಿತ್ರೋಡಾ ಹೇಳಿಕೆಗೂ ನಮಗೂ ಸಂಬಂಧ ಇಲ್ಲ ಅಂತಿದ್ದಾರೆ. ಸಿಎಂ ಸಿದ್ದರಾಮಯ್ಯ ಮೊದಲು ಅದಕ್ಕೆ ಉತ್ತರ ಕೊಡಲಿ‌ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿದರು.

ಪಿತ್ರಾರ್ಜಿತ ಆಸ್ತಿ ಕಾಯ್ದೆ ತಂದರೆ ಅದಾನಿ ಅಂಬಾನಿ ಆಸ್ತಿ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದಾನಿ, ಅಂಬಾನಿ ಆಸ್ತಿಯನ್ನು  ದಯವಿಟ್ಟು ಹಂಚಿಕೆ ಮಾಡಲಿ, ಕೇಂದ್ರದಲ್ಲಿ ಕಾಂಗ್ರೆಸ್ ನವರದ್ದು 10 ವರ್ಷ ಅಧಿಕಾರ ಇತ್ತು. ಅಗ ಯಾಕೆ ಮಾಡಿಲ್ಲ. ಯಾರದು ಬೇಕಾದರೂ ಮಾಡಲಿ ನಮಗೆನೂ ಆಗಬೇಕಿದೆ. ಕಾಂಗ್ರೇಸ್  ಭ್ರಮೆಯಲ್ಲಿ ಇರಲಿ. ಅವರ ಗ್ಯಾರಂಟಿ ಅಲೆ ಅವರನ್ನ ಏಲ್ಲಿಗೆ ತೆಗೆದುಕೊಂಡು ಹೋಗುತ್ತದೆ.  ನೋಡಿ. ರಾಜ್ಯದಲ್ಲಿ 28 ಕ್ಕೆ 28. ಸೀಟು ನಾವು ಗೆಲ್ಲುತ್ತೇವೆ. ಗೆದ್ದಮೇಲೆ ಡಿಕೆಶಿವಕುಮಾರ್,  ಸಿಎಂ ಸಿದ್ದರಾಮಯ್ಯ ಅವರಿಬ್ಬರ ಪೈಪೋಟಿ ಏನಾಗುತ್ತದೆ ನೋಡಿ.  ನಿನ್ನೆ ಮತ್ತೆ ಡಿ. ಕೆ ಶಿವಕುಮಾರ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಅವರ ಕುರ್ಚಿ ಅಲೆಗಾಡುವುದು ಗ್ಯಾರಂಟಿ ಎಂದರು.

ಇದನ್ನೂ ಓದಿ: ಒಂದೇ ತಿಂಗಳಲ್ಲಿ 5 ಕೆಜಿ ತೂಕ ಇಳಿಸುತ್ತೆ ಸೌತೆಕಾಯಿ: ಆದ್ರೆ ತಿನ್ನುವ ಸಮಯ-ವಿಧಾನ ಇದೇ ಆಗಿರಬೇಕು

ಪ್ರಹ್ಲಾದ್ ಜೋಶಿ ಮತ್ತು ಬಸವರಾಜ್ ಬೊಮ್ಮಾಯಿಗೆ ಓಟ್ ಕೇಳುವ ನೈತಿಕತೆ ಇಲ್ಲಾ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಳೆದ ಹತ್ತು ವರ್ಷದಲ್ಲಿ  ಎನ್‌ಡಿಎ  ಸರ್ಕಾರ ಮೂರು ಪಟ್ಟು ಹೆಚ್ಚು ಬರಪರಿಹಾರ ನೀಡಿದೆ. ಆ ನೈತಿಕತೆ ಮೇಲೆ ಮತ ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಬರಪರಿಹಾರ ವರದಿ ಕಳಿಸಿಲ್ಲ. ಅವರಿಗೆ ನೈತಿಕತೆ ಇಲ್ಲ. ಉಗರಿನಲ್ಲಿ ತೆಗೆಯುದಕ್ಕೆ, ಕೊಡಲಿ ತೆಗೆದುಕೊಂಡು ನಿಂತಿದ್ದಾರೆ.  ನಮ್ಮ ಕಾಲದಲ್ಲಿ ಪ್ರವಾಹ ಬಂದಾಗ ನಾವು  ಕೇಂದ್ರವನ್ನು ನೋಡದೇ  ಪರಿಹಾರ ನೀಡಿದ್ದೇವೆ. ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಎರಡುಪಟ್ಟು ಪರಿಹಾರ ನೀಡಿದ್ದೇವೆ. 17 ಲಕ್ಷ ಜನ ರೈತರಿಗೆ  ಒಂದೇ ಒಂದು ತಿಂಗಳಲ್ಲಿ ಪರಿಹಾರ ನೀಡಿದವ್ಯಕ್ತಿ ಬಸವರಾಜ್ ಬೊಮ್ಮಾಯಿ. ಆ  ನೈತಿಕತೆ‌ ನಮಗೆ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ‌.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News