ವಿಮೆ ತಿರಸ್ಕರಿಸಿದ ವಿಮಾ ಕಂಪನಿಗೆ 5 ಲಕ್ಷ 60 ಸಾವಿರ ದಂಡ ವಿಧಿಸಿದ ಗ್ರಾಹಕರ ಆಯೋಗ

ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಲಕ್ಷ್ಮವ್ವ ಇಂಗಳಿಹಳ್ಳಿ ಅವರ ಪತಿ ಅಶೋಕ ಎಂಬುವವರು ಚೋರಮಂಡಲಮ್ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಅವರಿಂದ ರೂ.413/-ಗಳನ್ನು ಪ್ರಿಮಿಯಮ್ ನೀಡಿ, ರೂ.5 ಲಕ್ಷಗಳಿಗೆ ದಿ:06/08/2020 ರಂದು ಒಂದು ವರ್ಷದ ಅವಧಿಯ ಅಪಘಾತ ವಿಮೆ ಖರೀದಿಸಿದ್ದರು. ವಿಮೆದಾರ ದಿ:13/12/2020 ರಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಮೃತನ ಪತ್ನಿ ಲಕ್ಷ್ಮವ್ವ ಅಗತ್ಯ ದಾಖಲೆಗಳೊಂದಿಗೆ ವಿಮೆ ಹಣ ಕೊಡುವಂತೆ ವಿಮಾ ಕಂಪನಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು.

Written by - Manjunath Naragund | Last Updated : Sep 28, 2023, 01:31 PM IST
  • ವಿಮಾ ಪಾಲಸಿಯ ನಿಯಮದಂತೆ ನಾಮಿನಿಯಾದ ದೂರುದಾರಳಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.5 ಲಕ್ಷ ವಿಮಾ ಹಣ ನೀಡುವಂತೆ ಆದೇಶಿಸಿದೆ.
  • ಪರಿಹಾರ ಕೊಡಿಸುವಂತೆ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
  • 50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ವಿಮಾ ಕಂಪನಿಯವರಿಗೆ ಆಯೋಗ ತೀರ್ಪಿನಲ್ಲಿ ಹೇಳಿದೆ.
ವಿಮೆ ತಿರಸ್ಕರಿಸಿದ ವಿಮಾ ಕಂಪನಿಗೆ 5 ಲಕ್ಷ 60 ಸಾವಿರ ದಂಡ ವಿಧಿಸಿದ ಗ್ರಾಹಕರ ಆಯೋಗ title=

ಧಾರವಾಡ : ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಲಕ್ಷ್ಮವ್ವ ಇಂಗಳಿಹಳ್ಳಿ ಅವರ ಪತಿ ಅಶೋಕ ಎಂಬುವವರು ಚೋರಮಂಡಲಮ್ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಅವರಿಂದ ರೂ.413/-ಗಳನ್ನು ಪ್ರಿಮಿಯಮ್ ನೀಡಿ, ರೂ.5 ಲಕ್ಷಗಳಿಗೆ ದಿ:06/08/2020 ರಂದು ಒಂದು ವರ್ಷದ ಅವಧಿಯ ಅಪಘಾತ ವಿಮೆ ಖರೀದಿಸಿದ್ದರು. ವಿಮೆದಾರ ದಿ:13/12/2020 ರಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಮೃತನ ಪತ್ನಿ ಲಕ್ಷ್ಮವ್ವ ಅಗತ್ಯ ದಾಖಲೆಗಳೊಂದಿಗೆ ವಿಮೆ ಹಣ ಕೊಡುವಂತೆ ವಿಮಾ ಕಂಪನಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು.

ಮೃತ ಅಶೋಕ ಅಪಘಾತ ಕಾಲಕ್ಕೆ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ ಮತ್ತು ದ್ವಿ ಚಕ್ರ ವಾಹನ ಓಡಿಸುವ ಚಾಲನಾ ಪತ್ರ ಅವನು ಹೊಂದಿಲ್ಲ ಅಂತಾ ಕಾರಣ ಹೇಳಿ ದಿ:12/08/2021 ರಂದು ವಿಮಾ ಕ್ಲೇಮ್‍ನ್ನು ತಿರಸ್ಕರಿಸಿದ್ದರು. ಎದುರುದಾರರ ಈ ತರಹದ ನಡಾವಳಿಕೆಯಿಂದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಅವರ ಮೇಲೆ ಸೂಕ್ತ ಕ್ರಮಕೈಗೊಂಡು ಪರಿಹಾರ ಕೊಡಿಸುವಂತೆ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಕೋರ್ಟ್ ಆದೇಶ ಪಾಲಿಸಿ ತಮಿಳುನಾಡಿಗೆ ನೀರು ಬಿಡುತ್ತೇವೆ: ಸಚಿವ ಡಾ. ಜಿ. ಪರಮೇಶ್ವರ್

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಮೃತ ಖರೀದಿಸಿದ ಅಪಘಾತ ವಿಮೆ ಅವರು ನಿಧನ ಹೊಂದುವ ಕಾಲಕ್ಕೆ ಚಾಲ್ತಿಯಲ್ಲಿತ್ತು.ಈ ಅಪಘಾತ ಇನ್ನೊಂದು ವಾಹನದ ಚಾಲಕನ ತಪ್ಪಿನಿಂದ ಆಗಿದೆ. ಅದಕ್ಕೆ ಮೃತ ಕಾರಣನಲ್ಲವಾದ್ದರಿಂದ ಎದುರುದಾರ ವಿಮಾ ಕಂಪನಿಯವರು ತಮ್ಮ ವಿಮಾ ನಿಯಮಾವಳಿಯಂತೆ ವಿಮಾ ಹಣವನ್ನು ದೂರುದಾರರಿಗೆ ಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ಎದುರುದಾರ ಚೋರಮಂಡಲಮ್ ವಿಮಾ ಕಂಪನಿಯವರು ವಿಫಲರಾಗಿದ್ದಾರೆ, ಅದರಿಂದ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ವಿಮಾ ಪಾಲಸಿಯ ನಿಯಮದಂತೆ ನಾಮಿನಿಯಾದ ದೂರುದಾರಳಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.5 ಲಕ್ಷ ವಿಮಾ ಹಣ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: 3000 ಕ್ಯೂಸೆಕ್ ನೀರು ಹರಿಸಲು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಮೆ ತಿರಸ್ಕರಿಸಿದ್ದರಿಂದ ದೂರುದಾರಳಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ವಿಮಾ ಕಂಪನಿಯವರಿಗೆ ಆಯೋಗ ತೀರ್ಪಿನಲ್ಲಿ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News