ಮುನಿಯಪ್ಪ ಜಪದಲ್ಲಿ ಕೈ ಅಭ್ಯರ್ಥಿ ಗೌತಮ್ : ಗೊಂದಲದ ಗೂಡಾದ ಕೋಲಾರ ಲೋಕಸಭಾ ಕ್ಷೇತ್ರ

ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಅಸಮಾಧಾನ ಗೊಂಡಿರುವ ಮುನಿಯಪ್ಪ ಪ್ರಚಾರಕ್ಕೆ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ. 

Written by - Prashobh Devanahalli | Last Updated : Apr 10, 2024, 02:22 PM IST
  • ಲೋಕಸಭಾ ಚುನಾವಣಾ ಕಣ ಕಳೆ ಕಟ್ಟಿದೆ.
  • ಭರ್ಜರಿ ಮತ ಪ್ರಚಾರ ನಡೆಯುತ್ತಿದೆ
  • ಅಂತರ ಕಾಯ್ದುಕೊಂಡಿರುವ ಮುನಿಯಪ್ಪ
ಮುನಿಯಪ್ಪ ಜಪದಲ್ಲಿ ಕೈ ಅಭ್ಯರ್ಥಿ ಗೌತಮ್ : ಗೊಂದಲದ ಗೂಡಾದ ಕೋಲಾರ ಲೋಕಸಭಾ  ಕ್ಷೇತ್ರ  title=

ಬೆಂಗಳೂರು :ಲೋಕಸಭಾ ಚುನಾವಣಾ ಕಣ ಕಳೆ ಕಟ್ಟಿದೆ. ಎಲ್ಲೆಡೆ ಭರ್ಜರಿ ಮತ ಪ್ರಚಾರ ನಡೆಯುತ್ತಿದೆ.ಈ ಮಧ್ಯೆ, ಕೋಲಾರ ರಾಜ್ಯ ನಾಯಕರ ವಿರುದ್ಧ ಸಚಿವ‌ ಮುನಿಯಪ್ಪ ಅಂತರ ಕಾಯ್ದುಕೊಂಡಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ಗೌತಮ್  ತಲೆನೋವಿಗೆ ಕಾರಣವಾಗಿದೆ. 

ಇತ್ತೀಚಿಗೆ ಕುರುಡುಮಲೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ಕೆ ಸಚಿವ ಮುನಿಯಪ್ಪ ಗೈರಾಗಿದ್ದರು. ಇದಕ್ಕೆ ಪಕ್ಷದ ಮೇಲೆ ಮುನಿಯಪ್ಪ ಅವರಿಗೆ  ಇರುವ ಅಸಮಾಧಾನವೇ ಕಾರಣ ಎನ್ನಲಾಗಿದೆ. ಅಷ್ಟಕ್ಕೂ ತಮ್ಮ ಕುಟುಂಬ ಸದಸ್ಯರಿಗೇ ಟಿಕೆಟ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು ಮುನಿಯಪ್ಪ.ಆದರೆ ಹಾಗಾಗಲಿಲ್ಲ. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿತು.ಇದರಿಂದ ಅಸಮಾಧಾನ ಗೊಂಡಿರುವ ಮುನಿಯಪ್ಪ ಪ್ರಚಾರಕ್ಕೆ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : ಒಕ್ಕಲಿಗ ಚೀಫ್ ಮಿನಿಸ್ಟರ್ ಇಳಿಸಿದ್ರಲ್ಲ ಅದನ್ನ ಕೇಳುವ ಶಕ್ತಿ ಸ್ವಾಮೀಜಿಗೆ ಇದ್ಯೋ ಇಲ್ವೋ ಗೊತ್ತಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಸದ್ಯ ಮುನಿಯಪ್ಪ ನಡೆಯ ಬಗ್ಗೆ ಅಭ್ಯರ್ಥಿ ಗೌತಮ್ ಗೆ  ಚಿಂತೆ ಶುರುವಾಗಿದೆ.ತಮ್ಮ ಪರ ಪ್ರಚಾರಕ್ಕೆ ಬರುವಂತೆ ಸಚಿವ ಮುನಿಯಪ್ಪಗೆ ಗೌತಮ್ ಮನವಿ ಮಾಡಿದ್ದಾರೆ.ನಾಯಕರ ವಿರುದ್ಧ ಅಂತರ ಕಾಯ್ದುಕೊಂಡಿರುವ ಮುನಿಯಪ್ಪಗೆ ಕೋಲಾರದಲ್ಲಿ ತಮ್ಮದೇ ಆದ ವರ್ಚಸ್ಸು ಇದೆ. ಹಿಂದೆ ಸತತ 7 ಬಾರಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಮುನಿಯಪ್ಪ ಪ್ರತಿನಿಧಿಸಿದ್ದಾರೆ. 

ಹಿರಿಯರಾದ ಮುನಿಯಪ್ಪ ಅವರನ್ನ ಮನವೊಲಿಸುವ ಪ್ರಯತ್ನದಲ್ಲಿ ಅಭ್ಯರ್ಥಿ ಗೌತಮ್ ತೊಡಗಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಚಾರಕ್ಕೆ ಬರುವುದಾಗಿ ‌ಮುನಿಯಪ್ಪ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮುನಿಯಪ್ಪ ಬೆಂಬಲಿಗರು ಗೌತಮ್ ಅವರಿಗೆ ಸಾಥ್ ನೀಡುತ್ತಿಲ್ಲ ಎನ್ನುವ ಮಾತು ಕೂಡಾ ಇದೆ.ಗೌತಮ್ ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಕಾರ್ಯಕರ್ತರು, ಮತದಾರರು, ಮುನಿಯಪ್ಪ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಮುಜುಗರ ಪಡುವ ಸ್ಥಿತಿ ಗೌತಮ್ ಅವರದ್ದು. 

ಇದನ್ನೂ ಓದಿ : Loksabha Elections: ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ: ಬಸವರಾಜ ಬೊಮ್ಮಾಯಿ

ಒಟ್ಟಿನಲ್ಲಿ ರಾಜ್ಯ ನಾಯಕರ ತಿಕ್ಕಾಟದ ನಡುವೆ ಕೋಲಾರ ಕೈ ಅಭ್ಯರ್ಥಿ ಹೈರಾಣಾಗಿದ್ದಾರೆ. ಇದೀಗ ಈ ಕಿತ್ತಾಟದ ಎಫೆಕ್ಟ್ ಚುನಾವಣೆ ಮೇಲೆ ಬೀರತ್ತಾ ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News