ವಿಮೆ ತಿರಸ್ಕರಿಸಿದ ವಿಮಾ ಕಂಪನಿಗೆ 15.6 ಲಕ್ಷ ರೂ.ದಂಡ

ಶಿರಸಿಯ ಶ್ರೀಮತಿ ನಾಗರತ್ನ ಫರನಾಂಡಿಸ್ ರವರ ಮಗ ರೋಷನ್ ಮೋಟರ್ ಸೈಕಲ್ ನಂ:ಕೆಎ-31 ಇಡಿ-1835 ಕ್ಕೆ ಮಾಲೀಕನಿದ್ದನು. ಅವನು ಆ ವಾಹನದ ಮೇಲೆ ದಿ:27/03/2021 ರಿಂದ 26/03/2022 ರ ಅವಧಿಯ ವಿಮೆ ಮಾಡಿಸಿದ್ದನು. ಆ ವಿಮೆಯಲ್ಲಿ ಅದರ ಮಾಲೀಕ ಆಥವಾ ಚಾಲಕರ ಅವಘಡದ ಪಿ.ಎ, ಕವರೇಜ್ ಸೇರಿತ್ತು. ದೂರುದಾರರಾದ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು.

Written by - Manjunath Naragund | Last Updated : Sep 5, 2023, 05:16 AM IST
  • ವಿಮಾ ಷರತ್ತಿನ ಉಲ್ಲಂಘನೆಯಾಗಿದೆ ಅಂತಾ ಅಭಿಪ್ರಾಯಪಟ್ಟು ಚೋಳಮಂಡಲ ವಿಮಾ ಕಂಪನಿಯವರು ದೂರುದಾರರ ಕ್ಷೇಮ್ ಅರ್ಜಿಯನ್ನು ತಿರಸ್ಕರಿಸಿದ್ದರು.
  • ದ್ವಿಚಕ್ರ ವಾಹನ ಓಡಿಸಲು ಕಲಿಕೆಯ ಚಾಲನಾ ಪತ್ರ ಇದ್ದರೆ ಸಾಕು ಕಾರಣ ನಿಮಾ ಕಂಪನಿಯವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ
  • ಅವರ ಮೇಲೆ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:06/04/2023 ರಂದು ದೂರನ್ನು ಸಲ್ಲಿಸಿದ್ದರು.
ವಿಮೆ ತಿರಸ್ಕರಿಸಿದ ವಿಮಾ ಕಂಪನಿಗೆ 15.6 ಲಕ್ಷ ರೂ.ದಂಡ title=

ಧಾರವಾಡ: ಶಿರಸಿಯ ಶ್ರೀಮತಿ ನಾಗರತ್ನ ಫರನಾಂಡಿಸ್ ರವರ ಮಗ ರೋಷನ್ ಮೋಟರ್ ಸೈಕಲ್ ನಂ:ಕೆಎ-31 ಇಡಿ-1835 ಕ್ಕೆ ಮಾಲೀಕನಿದ್ದನು. ಅವನು ಆ ವಾಹನದ ಮೇಲೆ ದಿ:27/03/2021 ರಿಂದ 26/03/2022 ರ ಅವಧಿಯ ವಿಮೆ ಮಾಡಿಸಿದ್ದನು. ಆ ವಿಮೆಯಲ್ಲಿ ಅದರ ಮಾಲೀಕ ಆಥವಾ ಚಾಲಕರ ಅವಘಡದ ಪಿ.ಎ, ಕವರೇಜ್ ಸೇರಿತ್ತು. ದೂರುದಾರರಾದ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು.

ದಿ: 20/07/2022 ರಂದು ದೂರುದಾರ ಮಗ ರೋಷನ್ ಆ ಮೋಟರ ಸೈಕಲ್ ಓಡಿಸುವಾಗ ಹಿರೆಕ್ಕೆಗುದ್ದಿ ಹತ್ತಿರ ಲಾರಿಗೆ ಡಿಕ್ಕಿ ಹೊಡಿಸಿ ತೀವ್ರ ಗಾಯಗೊಂಡು ಶಿರಸಿಯ ಟಿ.ಎಸ್,ಎಸ್. ಆಸ್ಪತ್ರೆಯಲ್ಲಿ ಅಸುನೀಗಿದ್ದನು. ಮೃತ ರೋಷನ ಅವಿವಾಹಿತನಾದ್ದರಿಂದ ದೂರುದಾರಳು ಅವನ ತಾಯಿ/ನಾಮಿನಿಯಾಗಿ ವಿಮೆ ಪರಿಹಾರ ಕೋರಿ ರೂ.15 ಲಕ್ಷ ಕೊಡುವಂತೆ ಚೋಳಮಂಡಲ ವಿಮಾ ಕಂಪನಿಗೆ ದಾಖಲೆಗಳ ಸಮೇತ ಕ್ಷೇಮ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಸೌಲಭ್ಯವಂಚಿತ ಮಹಿಳೆಯ ಸಂಕಷ್ಟಕ್ಕೆ ಮೀಡಿದ ಸಿಎಂ ಸಿದ್ದರಾಮಯ್ಯ

ಅಪಘಾತ, ಕಾಲಕ್ಕೆ ಚಾಲಕ ರೋಷನ ಗೆ ಕೇವಲ ಕಲಿಕೆಯ ಚಾಲನಾ ಪತ್ರ ಇದ್ದುದರಿಂದ ಅವನು ಪಕ್ಕಾ ಚಾಲನಾ ಪತ್ರ ಹೊಂದಿಲ್ಲವಾದ್ದರಿಂದ ವಿಮಾ ಷರತ್ತಿನ ಉಲ್ಲಂಘನೆಯಾಗಿದೆ ಅಂತಾ ಅಭಿಪ್ರಾಯಪಟ್ಟು ಚೋಳಮಂಡಲ ವಿಮಾ ಕಂಪನಿಯವರು ದೂರುದಾರರ ಕ್ಷೇಮ್ ಅರ್ಜಿಯನ್ನು ತಿರಸ್ಕರಿಸಿದ್ದರು. ದ್ವಿಚಕ್ರ ವಾಹನ ಓಡಿಸಲು ಕಲಿಕೆಯ ಚಾಲನಾ ಪತ್ರ ಇದ್ದರೆ ಸಾಕು ಕಾರಣ ನಿಮಾ ಕಂಪನಿಯವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ಮೇಲೆ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:06/04/2023 ರಂದು ದೂರನ್ನು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ, ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷ, ಆ. ಬೋಳಕಟ್ಟಿ ಮತ್ತು ಪ್ರಭು, ಸಿ. ಹಿರೇಮಠ ಅವರು ಮೃತ ರೋಷನ ತನ್ನ ಬೈಕ್ ಮೇಲೆ ಪಡೆದ ವಿಮಾ ಪಾಲಸಿ ಅಪಘಾತ ಕಾಲಕ್ಕೆ ಚಾಲ್ತಿಯಿದ್ದು, ಆಗ ಅವನಿಗೆ ಕಲಿಕಾ ಚಾಲನಾ ಪತ್ರ ಇದ್ದುದರಿಂದ ಅಷ್ಟು ಸಾಕು ಅ0ತಾ ಹೇಳಿ ವಿಮಾ ಕಂಪನಿಯ ನಿಯಮಾವಳಿಯಂತೆ ವಿಮಾ ಹಣವನ್ನು ದೂರುದಾರರಿಗೆ ಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ವಿಮಾ ಕಂಪನಿ ವಿಫಲವಾಗಿದೆ. ಅದರಿಂದ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಆಡಿ ಸೇವಾ ನ್ಯೂನತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ಇದನ್ನೂ ಓದಿ: "ರಾಜ್ಯದ ಜನತೆ ಬಿಜೆಪಿಗೆ ಅಧಿಕಾರ ನೀಡಲಿಲ್ಲವೆಂದು ಕೇಂದ್ರದ ಅನುದಾನವನ್ನೇ ಸ್ಥಗಿತಗೊಳಿಸಿದ್ದಾರೆ"

ವಿಮಾ ಪಾಲಿಸಿಯ ನಿಯಮದಂತೆ ನಾಮಿನಿಯಾದ ದೂರುದಾರಳಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ. 15 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ಕ್ಷೇಮು ತಿರಸ್ಕರಿಸಿದ ದಿ:15/12/2022 ರಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೂಡುವಂತೆ ಎದುರುದಾರ ಚೋಳಮಂಡಲ, ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News