ಕಾಂಗ್ರೆಸ್ ಅನ್ನು 'All India Confused Party' ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಅವರು ಯಾವಾಗಲೂ ಗೊಂದಲದಲ್ಲಿದ್ದಾರೆ. All India Confused Party ದಿಕ್ಕಿಲ್ಲದಂತಿದೆ ಎಂದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.   

Edited by - Zee Kannada News Desk | Last Updated : Jan 31, 2022, 10:49 AM IST
  • ಅಧಿಕಾರದಲ್ಲಿದ್ದರೂ ರಾಜ್ಯವನ್ನು ಅಭಿವೃದ್ಧಿಪಡಿಸಲು ವಿಫಲವಾದ ಕಾಂಗ್ರೆಸ್
  • ಕಾಂಗ್ರೆಸ್ ಒಂದು ಗೊಂದಲಮಯ ಪಕ್ಷವಾಗಿದೆ.
  • ಕಾಂಗ್ರೆಸ್ ಅನ್ನು All India Confused Party ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕಾಂಗ್ರೆಸ್ ಅನ್ನು 'All India Confused Party' ಎಂದ ಕೇಂದ್ರ ಸಚಿವ  ಪ್ರಹ್ಲಾದ್ ಜೋಶಿ title=
ಪ್ರಹ್ಲಾದ್ ಜೋಶಿ

ಡೆಹ್ರಾಡೂನ್ (ಉತ್ತರಾಖಂಡ): ಅಧಿಕಾರದಲ್ಲಿದ್ದರೂ ರಾಜ್ಯವನ್ನು ಅಭಿವೃದ್ಧಿಪಡಿಸಲು ವಿಫಲವಾದ ಕಾಂಗ್ರೆಸ್ 'ಅಖಿಲ ಭಾರತ ಗೊಂದಲದ ಪಕ್ಷ' (All India Confused Party) ಎಂದು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಉತ್ತರಾಖಂಡ್ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ. 

ಇದನ್ನೂ ಓದಿ: Hyderabad: ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ..!

ಕಾಂಗ್ರೆಸ್ ಉತ್ತರಾಖಂಡ ಮತ್ತು ಕೇಂದ್ರದಲ್ಲಿ ದೀರ್ಘಕಾಲ ಅಧಿಕಾರದಲ್ಲಿತ್ತು, ಅವರು ಉತ್ತರಾಖಂಡಕ್ಕೆ (Uttarakhand) ಆಗ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಅವರು ಜುಮ್ಮಾ (ಶುಕ್ರವಾರ) ವಾರದ ರಜೆಯ ಬಗ್ಗೆ ಮಾತನಾಡುತ್ತಿದ್ದರು ಮತ್ತು ಈಗ ಚಾರ್ ಧಾಮ್ ಬಗ್ಗೆ ಯೋಚಿಸುತ್ತಿದ್ದಾರೆ. ಕಾಂಗ್ರೆಸ್ ಅಖಿಲ ಭಾರತವನ್ನು ಗೊಂದಲಗೊಳಿಸಿದ ಪಾರ್ಟಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ (Congress) ಒಂದು ಗೊಂದಲಮಯ ಪಕ್ಷವಾಗಿದೆ. ಅವರಿಗೆ 370 ನೇ ವಿಧಿ, ಭಾರತೀಯ ಸೈನಿಕರು ಅಥವಾ ಉತ್ತರಾಖಂಡ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವಾಗಲೂ ಗೊಂದಲದಲ್ಲಿದ್ದಾರೆ. All India Confused Party ದಿಕ್ಕಿಲ್ಲದಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಏತನ್ಮಧ್ಯೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಅಲ್ಮೋರಾ ಜಿಲ್ಲೆಯಲ್ಲಿ ಚುನಾವಣಾ (Uttarakhand Assembly ELection) ಪ್ರಚಾರದಲ್ಲಿ ಹಿಂದಿನ ಸರ್ಕಾರವನ್ನು ಟೀಕಿಸಿದರು.

ಇದನ್ನೂ ಓದಿ: 161 ವರ್ಷಗಳ ಇತಿಹಾಸದಲ್ಲಿ ಬಜೆಟ್‌ನಲ್ಲಾದ 5 ಪ್ರಮುಖ ಬದಲಾವಣೆಗಳು

ಫೆಬ್ರವರಿ 1 ರಿಂದ ಉತ್ತರಾಖಂಡದಲ್ಲಿ ಬಿಜೆಪಿ ತನ್ನ "ಮೆಗಾ ಚುನಾವಣಾ ಪ್ರಚಾರ" ವನ್ನು ಪ್ರಾರಂಭಿಸುತ್ತಿದೆ.  ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಚಾರಕ್ಕಾಗಿ ಸಮಯವನ್ನು ಹುಡುಕುತ್ತಿದೆ ಎಂದು ಹೇಳಿದ್ದಾರೆ.

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News