ಮೈ ಕೊರೆಯುವ ಚಳಿಗೆ ತತ್ತರಿಸುತ್ತಿದೆ ಉತ್ತರ : ಈ ಪ್ರದೇಶಗಳಲ್ಲಿ ಕೋಲ್ಡ್ ಡೇ ಅಲರ್ಟ್ ಜಾರಿ

Weather Update 3 January 2024 : ದಟ್ಟವಾದ ಮಂಜಿನಿಂದಾಗಿ ರೈಲುಗಳ ಕಾರ್ಯಾಚರಣೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಕೆಲವು ವಿಮಾನ ಕಾರ್ಯಾಚರಣೆಗಳು ಕೂಡಾ ವಿಳಂಬವಾಗಿವೆ.  

Written by - Ranjitha R K | Last Updated : Jan 3, 2024, 08:33 AM IST
  • ಮೈ ಕೊರೆಯುವ ಚಳಿಯಿಂದಾಗಿ ಜನರು ನಡುಗುವ ಪರಿಸ್ಥಿತಿ ಎದುರಾಗಿದೆ.
  • ಬುಧವಾರ ಬೆಳಗ್ಗೆ ಉತ್ತರ ಭಾರತದಲ್ಲಿ ತೀವ್ರ ಚಳಿ ಕಾಣಿಸಿಕೊಂಡಿದೆ.
  • ದಟ್ಟವಾದ ಮಂಜಿನಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ
ಮೈ ಕೊರೆಯುವ ಚಳಿಗೆ ತತ್ತರಿಸುತ್ತಿದೆ ಉತ್ತರ  : ಈ ಪ್ರದೇಶಗಳಲ್ಲಿ ಕೋಲ್ಡ್ ಡೇ ಅಲರ್ಟ್ ಜಾರಿ  title=

Weather Update 3 January 2024 :  ದೆಹಲಿಯಲ್ಲಿ ದಿನೇ ದಿನೇ ತಾಪಮಾನ ಕಡಿಮೆಯಾಗುತ್ತಿದೆ.   ಜಮ್ಮು-ಕಾಶ್ಮೀರ, ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಹಿಮಪಾತದ ನಂತರ, ದೆಹಲಿ-ಎನ್‌ಸಿಆರ್ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಶೀತ ಅಲೆ ಏಳುತ್ತಿದೆ. ಹಾಗಾಗಿ ಮೈ ಕೊರೆಯುವ ಚಳಿಯಿಂದಾಗಿ ಜನರು ನಡುಗುವ ಪರಿಸ್ಥಿತಿ ಎದುರಾಗಿದೆ. ಬುಧವಾರ ಬೆಳಗ್ಗೆ ಉತ್ತರ ಭಾರತದಲ್ಲಿ ತೀವ್ರ ಚಳಿ ಕಾಣಿಸಿಕೊಂಡಿದೆ.ದಟ್ಟವಾದ ಮಂಜಿನಿಂದಾಗಿ ರೈಲುಗಳ ಕಾರ್ಯಾಚರಣೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.ದೆಹಲಿ-ಎನ್‌ಸಿಆರ್‌ನಲ್ಲಿ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಕೆಲವು ವಿಮಾನ ಕಾರ್ಯಾಚರಣೆಗಳು ಕೂಡಾ ವಿಳಂಬವಾಗಿವೆ.  

 ದೆಹಲಿಯಲ್ಲಿ ಮಿತಿ ಮೀರಿದ ಚಳಿ : 
ಬುಧವಾರ ಬೆಳಗ್ಗೆ 5 ಗಂಟೆಗೆ ದೆಹಲಿಯ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.ಇದು ಈ ಋತುವಿನ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಇಂದು ದೆಹಲಿಯ ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. 

ಇದನ್ನೂ ಓದಿ : CAA Implement: ಚುನಾವಣೆಗೂ ಮುನ್ನ ಬಿಜೆಪಿ ಎರಡನೇ ಮಾಸ್ಟರ್ ಸ್ಟ್ರೋಕ್, ರಾಮಮಂದಿರ ನಂತರ CAA ಜಾರಿಗೆ ಸಿದ್ಧತೆ!

ಈ ರಾಜ್ಯಗಳಲ್ಲಿ ಇಂದು ಕೋಲ್ಡ್ ಡೇ ಅಲರ್ಟ್ :  
ಪಂಜಾಬ್, ಹರಿಯಾಣ, ಯುಪಿ ಮತ್ತು ರಾಜಸ್ಥಾನದಲ್ಲಿ  ಕೋಲ್ಡ್ ಡೇ ಅಲರ್ಟ್ ನೀಡಲಾಗಿದೆ.    ಕಾಶ್ಮೀರ ಕಣಿವೆಯಲ್ಲಿ ಶೀತ ಅಲೆಯ ಉಲ್ಬಣದೊಂದಿಗೆ ಕನಿಷ್ಠ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕೆಳಗಿರುತ್ತದೆ.

ಪಶ್ಚಿಮ ಯುಪಿಯ ನೋಯ್ಡಾ, ಘಾಜಿಯಾಬಾದ್, ಹಾಪುರ್ ನಲ್ಲಿ ಗರಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಕನಿಷ್ಠ ತಾಪಮಾನವು 7 ರಿಂದ 9 ಡಿಗ್ರಿ ಸೆಲ್ಸಿಯಸ್ ಆಗಿರಬಹುದು.

ದೆಹಲಿಯಿಂದ ಬಂಗಾಳದವರೆಗೆ ಮಂಜಿನ ಹೊದಿಕೆ : 
ಉತ್ತರ ಭಾರತದ ದೆಹಲಿ-ಎನ್‌ಸಿಆರ್‌ನಿಂದ ಪೂರ್ವ ಭಾರತದ ಬಂಗಾಳದವರೆಗೆ ಇಂದು ದಟ್ಟವಾದ ಮಂಜು ಆವರಿಸಿದೆ. ಈ ಬಗ್ಗೆಯೂ ಹವಾಮಾನ ಇಲಾಖೆ ಅಲರ್ಟ್ ಜಾರಿ ಮಾಡಿದೆ.ಹಲವೆಡೆ ಮಂಜು ಮುಸುಕಿದ ವಾತಾವರಣ ಕಂಡುಬಂದಿದೆ.ಇಂದು ಮಧ್ಯಪ್ರದೇಶ, ಜಾರ್ಖಂಡ್, ಬಿಹಾರ, ಬಂಗಾಳದಲ್ಲಿ ದಟ್ಟವಾದ ಮಂಜು ಆವರಿಸುವ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗ್ಗೆ ಈ ರಾಜ್ಯಗಳ ಪ್ರಮುಖ ನಗರಗಳಲ್ಲಿ ಮಂಜಿನ ಹೊದಿಕೆ ಕಾಣಿಸಿಕೊಂಡಿದ್ದು, ಮುಂದಿನ 3 ದಿನಗಳ ಕಾಲ ದಟ್ಟವಾದ ಮಂಜು ಕವಿದಿರುವ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ : INDIA Alliance: 9 ರಾಜ್ಯಗಳಲ್ಲಿ ಮೈತ್ರಿ, 290 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧಾರ!?

ದೆಹಲಿ-ಎನ್‌ಸಿಆರ್‌ನಲ್ಲಿ  ಮತ್ತಷ್ಟು ಹೆಚ್ಚಾಗಲಿದೆ ಚಳಿ : 
ಜನವರಿ 6 ಮತ್ತು 7 ರ ಸುಮಾರಿಗೆ ಪಂಜಾಬ್, ಹರಿಯಾಣ, ದೆಹಲಿ-ಎನ್‌ಸಿಆರ್‌ನಲ್ಲಿ ಮಳೆಯಾಗಬಹುದು.ಈ ಅವಧಿಯಲ್ಲಿ ಪರ್ವತಗಳಲ್ಲಿ ಹಿಮಪಾತವಾದರೆ ದೆಹಲಿ ಚಳಿ ಇನ್ನಷ್ಟು ಏರಬಹುದು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ಚಳಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News