Baba Vanga Prediction: ಭಾರತಕ್ಕೆ ಅಪ್ಪಳಿಸಲಿದೆ ದೊಡ್ಡ ಸಮಸ್ಯೆ: ಬಾಬಾ ವಂಗಾ ಭವಿಷ್ಯ ಹೇಳೋದು ಕೇಳಿದ್ರೆ ಭಯವಾಗುತ್ತೆ!

ದಿ ಸನ್ ವರದಿಯ ಪ್ರಕಾರ, ಬಾಬಾ ವೆಂಗಾ ಅವರು ಭಾರತದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ ಮತ್ತು 2022 ರಲ್ಲಿ ಪ್ರಪಂಚದಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದೆ. ಇದು ಮಿಡತೆಗಳ ಏಕಾಏಕಿ ಹೆಚ್ಚಳಕ್ಕೆ ಕಾರಣವಾಗಬಹುದು. ಮಿಡತೆ ಹಿಂಡುಗಳು ಭಾರತದ ಮೇಲೆ ದಾಳಿ ಮಾಡುತ್ತದೆ.

Written by - Bhavishya Shetty | Last Updated : Aug 30, 2022, 10:27 AM IST
    • ಬಾಬಾ ವೆಂಗಾ ಅವರು ಭಾರತದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ
    • 2022 ರಲ್ಲಿ ಭಾರತದಲ್ಲಿ ಬರಗಾಲದಂತಹ ಪರಿಸ್ಥಿತಿ ಉದ್ಭವಿಸಬಹುದು
    • ಬೆಳೆಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ ಮತ್ತು ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ.
Baba Vanga Prediction: ಭಾರತಕ್ಕೆ ಅಪ್ಪಳಿಸಲಿದೆ ದೊಡ್ಡ ಸಮಸ್ಯೆ: ಬಾಬಾ ವಂಗಾ ಭವಿಷ್ಯ ಹೇಳೋದು ಕೇಳಿದ್ರೆ ಭಯವಾಗುತ್ತೆ! title=
Baba Vanga

ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರ ಭವಿಷ್ಯವಾಣಿಗಳನ್ನು ಆಗಾಗ್ಗೆ ಚರ್ಚಿಸಲಾಗುತ್ತದೆ. ಇದೀಗ ಅವರು ತಮ್ಮ ದೇಶದ ಬಗ್ಗೆ ಮಾತ್ರವಲ್ಲದೆ ಭಾರತ ಸೇರಿದಂತೆ ಇಡೀ ಪ್ರಪಂಚದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.  ಭಾರತದ ಬಗ್ಗೆ ಬಾಬಾ ವೆಂಗಾ ಅವರ ಭವಿಷ್ಯವಾಣಿಯು ಜನರಲ್ಲಿ ಭಯವನ್ನು ಸೃಷ್ಟಿಸಿದೆ. ಇದರಲ್ಲಿ ಅವರು 2022 ರಲ್ಲಿ ಭಾರತದಲ್ಲಿ ಬರಗಾಲದಂತಹ ಪರಿಸ್ಥಿತಿ ಉದ್ಭವಿಸಬಹುದು ಎಂದು ಹೇಳಿದ್ದಾರೆ. ಇನ್ನು ಬಾಬಾ ವಂಗಾ ಅವರು 2022 ರ ವರ್ಷಕ್ಕೆ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಅವುಗಳಲ್ಲಿ 2 ಇಲ್ಲಿಯವರೆಗೆ ನಿಜವಾಗಿವೆ. 

ಇದನ್ನೂ ಓದಿ: ಈ ಉತ್ಪನ್ನದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಹೊರಟಿದೆ ಜಿಯೋ. ! ಗ್ರಾಹಕರಿಗೂ ಆಗಲಿದೆ ಲಾಭ

ದಿ ಸನ್ ವರದಿಯ ಪ್ರಕಾರ, ಬಾಬಾ ವೆಂಗಾ ಅವರು ಭಾರತದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ ಮತ್ತು 2022 ರಲ್ಲಿ ಪ್ರಪಂಚದಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದೆ. ಇದು ಮಿಡತೆಗಳ ಏಕಾಏಕಿ ಹೆಚ್ಚಳಕ್ಕೆ ಕಾರಣವಾಗಬಹುದು. ಮಿಡತೆ ಹಿಂಡುಗಳು ಭಾರತದ ಮೇಲೆ ದಾಳಿ ಮಾಡುತ್ತದೆ. ಬೆಳೆಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ ಮತ್ತು ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ. ಭಾರತದಲ್ಲಿ ತೀವ್ರ ಹಸಿವಿನ ಪರಿಸ್ಥಿತಿ ಇರಬಹುದು ಎಂದು ಹೇಳಿದ್ದಾರೆ. ಇದಲ್ಲದೆ, ಈ ಹಿಂದೆ 2020 ರಲ್ಲಿ ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಮಿಡತೆಗಳು ದಾಳಿ ಮಾಡಿ ಬೆಳೆಗಳನ್ನು ಹಾನಿ ಮಾಡಿದ್ದವು.

ಬಾಬಾ ವಂಗಾ ಅವರು 2022 ರ ವರ್ಷಕ್ಕೆ ಸಂಬಂಧಿಸಿದಂತೆ 6 ಭವಿಷ್ಯಗಳನ್ನು ನುಡಿದಿದ್ದಾರೆ. ಅವುಗಳಲ್ಲಿ 2 ಇಲ್ಲಿಯವರೆಗೆ ನಿಜವೆಂದು ಸಾಬೀತಾಗಿದೆ. ಇದರ ನಂತರ ಬಾಬಾ ವೆಂಗಾ ಅವರ ಇತರ 4 ಭವಿಷ್ಯವಾಣಿಗಳು ಸಹ ನಿಜವಾಗಬಹುದು ಎಂಬ ಭಯವಿದೆ.

ಏಷ್ಯಾದ ಕೆಲವು ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರವಾಹದ ಬಗ್ಗೆ ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಭಾರೀ ಮಳೆಯ ನಂತರ ಆಸ್ಟ್ರೇಲಿಯಾದಲ್ಲಿ ಪ್ರವಾಹದಂತಹ ಪರಿಸ್ಥಿತಿ ಇದೆ. ಆದರೆ ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ಇದುವರೆಗೆ 1000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಬಾಬಾ ವೆಂಗಾ ಅವರು ಅನೇಕ ನಗರಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂದು ಭವಿಷ್ಯ ನುಡಿದಿದ್ದರು. ಪ್ರಸ್ತುತ

ಬಾಬಾ ವೆಂಗಾ ಅವರ ಇತರ 4 ಭವಿಷ್ಯವಾಣಿಗಳು ನಿಜವಾಗಲಿವೆಯೇ?

2022 ರ ಬಾಬಾ ವೆಂಗಾ ಭವಿಷ್ಯವಾಣಿಯು, ಸೈಬೀರಿಯಾದಿಂದ ಹೊಸ ಮಾರಣಾಂತಿಕ ವೈರಸ್ ಬರಬಹುದು ಎಂದು ಹೇಳಿದೆ.

ಬಾಬಾ ವಂಗಾ ಯಾರು?

ಬಾಬಾ ವಂಗಾ ಒಬ್ಬ ಅತೀಂದ್ರಿಯ ಮಹಿಳೆ. ಇವರು ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾಳೆ. ಬಾಬಾ ಬೆಂಗಾ ಅವರು 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ್ದು, ಕೇವಲ 12 ನೇ ವಯಸ್ಸಿನಲ್ಲಿ ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡರು. ಆದರೆ ದೇವರು ಅವರಿಗೆ ದೈವಿಕ ದರ್ಶನವನ್ನು ಕೊಟ್ಟಿದ್ದಾನೆ. ಇದರಿಂದಾಗಿ ಅವರು ದೃಷ್ಟಿ ಕಳೆದುಕೊಂಡರೂ ಸಹ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: ಬಾಲಕಿಯರ ಮೇಲೆ ದೌರ್ಜನ್ಯ ಆರೋಪ.. ಮುರುಘಾ ಶ್ರೀಗಳು ಪೊಲೀಸ್‌ ವಶಕ್ಕೆ!?

ವರದಿಗಳ ಪ್ರಕಾರ, ಬಾಬಾ ವಂಗಾ ಸುಂಟರಗಾಳಿಗ ಸಿಲುಕಿ ನಾಪತ್ತೆಯಾಗಿದ್ದರು. ಮತ್ತೆ ಸಿಕ್ಕಾಗ ಆಕೆಯ ಕಣ್ಣುಗಳು ಮರಳು ಮತ್ತು ಧೂಳಿನಿಂದ ಮುಚ್ಚಲ್ಪಟ್ಟಿದ್ದವು. ಅವರ ಕುಟುಂಬ ಕಡು ಬಡತನದಿಂದ ಕೂಡಿದ್ದು, ಚಿಕಿತ್ಸೆಗೆ ಹಣವೂ ಇರಲಿಲ್ಲ. ಇದರಿಂದ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬಾ ವೆಂಗಾ 1996 ರಲ್ಲಿ ನಿಧನರಾಗಿದ್ದಾರೆ. ಅದಕ್ಕೂ ಮೊದಲು ಅವರು ಅನೇಕ ದೊಡ್ಡ ಭವಿಷ್ಯವಾಣಿಗಳನ್ನು ನುಡಿದಿದ್ದರು. ಅವರ ಭವಿಷ್ಯವಾಣಿಗಳನ್ನು ಎಲ್ಲಿಯೂ ಬರೆಯಲಾಗಿಲ್ಲ ಎಂದು ಹೇಳಲಾಗುತ್ತದೆ. ಬದಲಿಗೆ ಅವರು ತಮ್ಮ ಅನುಯಾಯಿಗಳಿಗೆ ಈ ಭವಿಷ್ಯವಾಣಿಗಳನ್ನು ಹೇಳಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News