Watermelon Benefits: ನೀರಿನ ಕೊರತೆಯಷ್ಟೇ ಅಲ್ಲ ಈ ಕಾಯಿಲೆಗಳಿಗೂ ಪರಿಹಾರ ನೀಡುತ್ತೆ ಕಲ್ಲಂಗಡಿ

Watermelon Benefits: ಕಲ್ಲಂಗಡಿ ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸುವುದು ಮಾತ್ರವಲ್ಲದೆ, ಅನೇಕ ರೀತಿಯ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಮೂಳೆಗಳೂ ಗಟ್ಟಿಯಾಗುತ್ತವೆ. ಹಾಗಾದರೆ ಇದರ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

Written by - Yashaswini V | Last Updated : May 18, 2022, 11:39 AM IST
  • ವಿಟಮಿನ್-ಸಿ ಕಲ್ಲಂಗಡಿಯಲ್ಲಿ ಸಮೃದ್ಧವಾಗಿದೆ
  • ಇದು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ
  • ಇದರಲ್ಲಿರುವ ಲೈಕೋಪೀನ್ ಮೂಳೆ ಮುರಿತದ ಸಾಧ್ಯತೆಯನ್ನು ತಡೆಯುತ್ತದೆ
Watermelon Benefits: ನೀರಿನ ಕೊರತೆಯಷ್ಟೇ ಅಲ್ಲ ಈ ಕಾಯಿಲೆಗಳಿಗೂ ಪರಿಹಾರ ನೀಡುತ್ತೆ ಕಲ್ಲಂಗಡಿ  title=
Watermelon Benefits

ಕಲ್ಲಂಗಡಿ ಪ್ರಯೋಜನಗಳು: ಬೇಸಿಗೆಯಲ್ಲಿ ದೇಹಕ್ಕೆ ತಾಜಾತನವನ್ನು ನೀಡಲು ಹಣ್ಣುಗಳ ಸೇವನೆ ಅತ್ಯಗತ್ಯ. ಕಲ್ಲಂಗಡಿ  ಹಣ್ಣು ಬೇಸಿಗೆಯಲ್ಲಿ ದೇಹಕ್ಕೆ ತಾಜಾತನವನ್ನು ನೀಡುವ ಹಣ್ಣುಗಳಲ್ಲಿ ಒಂದು. ಮೊದಲೆಲ್ಲಾ, ಕಲ್ಲಂಗಡಿ  ಹಣ್ಣನ್ನು ಈಜಿಪ್ಟ್ ಮತ್ತು ಚೀನಾದಲ್ಲಿ ಬೆಳೆಯಲಾಗುತ್ತಿತ್ತು. ಕಲ್ಲಂಗಡಿ ಕೃಷಿ 10 ನೇ ಶತಮಾನದಲ್ಲಿ ಚೀನಾದಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಈ ಹಣ್ಣಿನಲ್ಲಿ 92 ಪ್ರತಿಶತ ನೀರು ಮತ್ತು 8 ಪ್ರತಿಶತ ಸಕ್ಕರೆ ಇರುತ್ತದೆ. ಈ ಹಣ್ಣು ಬೇಸಿಗೆಯಲ್ಲಿ ಉತ್ತಮ ನೀರಿನ ಮೂಲವಾಗಿದೆ. ಇದು ಉತ್ತಮ ಪ್ರಮಾಣದ ಬೀಟಾ ಕ್ಯಾರೋಟಿನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣವನ್ನು ಹೊಂದಿರುತ್ತದೆ.

ಕಲ್ಲಂಗಡಿಯು ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ಹೊಂದಿದೆ, ಇದರರ್ಥ ಪ್ರಾಯೋಗಿಕವಾಗಿ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದರೊಂದಿಗೆ ಉತ್ತಮ ಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದೀರಿ ಎಂದರ್ಥ. ಇದಲ್ಲದೆ,  ಇದರಿಂದ ಸಿಗುವ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ. 

ನಿರ್ಜಲೀಕರಣ ಸಮಸ್ಯೆಯಿಂದ ಪರಿಹಾರ:
ಈ ಆರೋಗ್ಯಕರ ಹಣ್ಣು 92% ನೀರನ್ನು ಒಳಗೊಂಡಿರುತ್ತದೆ. ಈ ಹಣ್ಣು ನಿಮ್ಮ ನಿರ್ಜಲೀಕರಣವನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಕಲ್ಲಂಗಡಿ ಸೇವನೆಯಿಂದ ದೇಹವು ಹೆಚ್ಚಾಗಿ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಬಾಯಿಯ ಶುಷ್ಕತೆಯಿಂದ ನಿಮ್ಮನ್ನು ತಡೆಯುತ್ತದೆ ಮತ್ತು ಹೃದಯರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇದು ನಿಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.  

ಇದನ್ನೂ ಓದಿ- ಹೃದಯಾಘಾತ ಸಂಭವಿಸುವ ಮೊದಲು ಕಂಡುಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುತ್ತದೆ:
ಕಲ್ಲಂಗಡಿ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಈ ಹಣ್ಣಿನಲ್ಲಿ ಸಾಕಷ್ಟು ನೀರಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ಸೇವಿಸಿದಾಗ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಹ ಬಲವಾಗಿರುತ್ತದೆ. ನಿಮಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಬೇಸಿಗೆಯಲ್ಲಿ ಈ ಹಣ್ಣನ್ನು ಖಂಡಿತವಾಗಿ ಸೇವಿಸಿ. 

ತೂಕ ಕಡಿಮೆ ಮಾಡಲು ಸಹಕಾರಿ:
ಕಲ್ಲಂಗಡಿ ವಿದ್ಯುದ್ವಿಚ್ಛೇದ್ಯಗಳು ಮತ್ತು ಅಮೈನೋ ಆಸಿಡ್ ಸಿಟ್ರುಲಿನ್‌ನಂತಹ ಅಂಶಗಳಿಂದ ಸಮೃದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚುತ್ತಿರುವ ತೂಕದ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಕಲ್ಲಂಗಡಿ ನಿಮಗೆ ತೂಕ ಇಳಿಸಿಕೊಳ್ಳಲು ಸಹಕಾರಿ ಆಗಲಿದೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹ ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಸ್ನಾಯು ನೋವಿಗೆ ಸಹಕಾರಿಯಾಗಿದೆ. 

ಅಸ್ತಮಾದಲ್ಲಿ ಸಹ ಪ್ರಯೋಜನಕಾರಿ:
ಅಸ್ತಮಾ ಇರುವವರಿಗೂ ಕಲ್ಲಂಗಡಿ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಲೈಕೋಪೀನ್ ಅಸ್ತಮಾದಲ್ಲಿ ಪ್ರಯೋಜನಕಾರಿಯಾಗಿದೆ. ಇದು ಪರಿಣಾಮಕಾರಿ ಉತ್ಕರ್ಷಣ ನಿರೋಧಕವಾಗಿದೆ, ಇದು ಅಸ್ತಮಾ ರೋಗಿಗಳಿಗೆ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಲೈಕೋಪೀನ್ ಮತ್ತು ವಿಟಮಿನ್ ಎ ಯ ಸಾಕಷ್ಟು ಸೇವನೆಯು ಆಸ್ತಮಾ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಈ ಎರಡೂ ಅಂಶಗಳು ಕಲ್ಲಂಗಡಿಯಲ್ಲಿ ಕಂಡುಬರುತ್ತವೆ. 

ಇದನ್ನೂ ಓದಿ- Weight Loss Tips: 40ರ ನಂತರ ತೂಕ ಇಳಿಸಲು ಇಲ್ಲಿವೆ ಸುಲಭ ಉಪಾಯ

ಮೂಳೆಗಳು ಬಲವಾಗಿರುತ್ತವೆ:
ವಿಟಮಿನ್-ಸಿ ಕಲ್ಲಂಗಡಿಯಲ್ಲಿ ಸಮೃದ್ಧವಾಗಿದೆ, ಇದು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಲೈಕೋಪೀನ್ ಮೂಳೆ ಮುರಿತದ ಸಾಧ್ಯತೆಯನ್ನು ತಡೆಯುತ್ತದೆ, ಇದರಲ್ಲಿರುವ ವಿಟಮಿನ್-ಎ ಮೂಳೆಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News