ಡಯಾಬಿಟೀಸ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ ಈ ಹಳದಿ ಹಣ್ಣು !

fruit to control Diabetes : ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ.

Written by - Ranjitha R K | Last Updated : Aug 31, 2023, 10:10 AM IST
  • ಮಧುಮೇಹವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗವಾಗಿದೆ.
  • ಇದು ಜೀವನಶೈಲಿ ಸಂಬಂಧಿತ ಕಾಯಿಲೆ
  • ಕೆಲವು ಕ್ರಮಗಳು ಮತ್ತು ಔಷಧಿಗಳ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು
ಡಯಾಬಿಟೀಸ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ ಈ ಹಳದಿ ಹಣ್ಣು ! title=

Fruit to control Diabetes : ಇತ್ತೀಚಿನ ದಿನಗಳಲ್ಲಿ ಮಧುಮೇಹವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗವಾಗಿದೆ. ಇದು ಜೀವನಶೈಲಿ ಸಂಬಂಧಿತ ಕಾಯಿಲೆಯಾಗಿದ್ದು, ಒಮ್ಮೆ ಪ್ರಾರಂಭವಾಯಿತು ಎಂದಾದರೆ ಮತ್ತೆ ಈ ಕಾಯಿಲೆಗೆ ಕೊನೆ ಇಲ್ಲ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಿಲ್ಲ ಆದರೆ ನಿಯಂತ್ರಿಸಬಹುದು. ಕೆಲವು ಕ್ರಮಗಳು ಮತ್ತು ಔಷಧಿಗಳ ಮೂಲಕ  ಮಧುಮೇಹವನ್ನು ನಿಯಂತ್ರಿಸಬಹುದು. ಈ ಕಾರಣದಿಂದಲೇ ಪ್ರತಿಯೊಬ್ಬರೂ ತಾವು ಅನುಸರಿಸುತ್ತಿರುವ ಜೀವನ ಶೈಲಿಯ ಬಗ್ಗೆ ಜಾಗರೂಕರಾಗಿರಬೇಕು. ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂಥದ್ದರಲ್ಲಿ ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ. 

ಮಧುಮೇಹವನ್ನು ನಿಯಂತ್ರಿಸಲು ಹಣ್ಣಿನ ಸಿಪ್ಪೆ : 
ಕೃಷ್ಣ ಫಲ ಅಥವಾ ಫ್ಯಾಷನ್ ಫ್ರುಟ್ : 
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಈ ಅದ್ಭುತ ಹಣ್ಣಿನ ಹೆಸರು ಕೃಷ್ಣ ಫಲ. ಇದನ್ನು ಫ್ಯಾಷನ್ ಫ್ರುಟ್ ಎಂದು ಕೂಡಾ ಕರೆಯುತ್ತಾರೆ. ಕೆಲವೇ ಮಂದಿಗೆ ಈ ಹಣ್ಣಿನ ಅದ್ಭುತ ಪ್ರಯೋಜನದ  ಅರಿವಿದೆ. ಈ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿ ಮಿಶ್ರಿತವಾಗಿದೆ. ಇದು ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಹಳದಿ ಬಣ್ಣದ ಈ ಹಣ್ಣಿನ ಮೂಲ ಬ್ರೆಜಿಲ್. 

ಇದನ್ನೂ ಓದಿ : Health tips: ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಈ 5 ಆಹಾರ ಸೇವಿಸಿರಿ

ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ : 
ಈ ಹಣ್ಣಿನಲ್ಲಿ (ಪ್ಯಾಶನ್ ಫ್ರೂಟ್) ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ವಿಶಿಷ್ಟ ನಿಧಿಯೇ ಸರಿ. ಈ ಹಣ್ಣು ಮಾತ್ರವಲ್ಲ ಇದರ ಸಿಪ್ಪೆ ಕೂಡಾ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಹಳಷ್ಟು ಸಹಾಯ ಮಾಡುತ್ತದೆ. ವಾಸ್ತವವಾಗಿ, ಕೃಷ್ಣ ಫಲದ  ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ. ಇದರಿಂದಾಗಿ ಈ ಹಣ್ಣನ್ನು  ಸೇವಿಸಿದರೂ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದಿಲ್ಲ. 

ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ :
ಕೃಷ್ಣ ಫಲದ ಸಿಪ್ಪೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳಿಗೆ ವೈದ್ಯರು ಈ ಹಣ್ಣನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಮತ್ತು ಸೇವಿಸುವ ಆಹಾರದತ್ತ ಸರಿಯಾದ ಗಮನವನ್ನು ನೀಡುವಂತೆ  ಸೂಚಿಸಲಾಗುತ್ತದೆ. ನಿಮಗೂ ಮಧುಮೇಹ ಸಮಸ್ಯೆ ಇದ್ದರೆ ನೀವೂ ಈ ಹಣ್ಣನ್ನು ಟ್ರೈ ಮಾಡಬಹುದು. 

ಇದನ್ನೂ ಓದಿ :  ಹಸಿರು ಚಹಾ ಅಷ್ಟೇ ಅಲ್ಲ, ಈ ಹಸಿರು ಕಾಫಿ ಕೂಡ ತೂಕ ಇಳಿಕೆಗೆ ಪರಿಣಾಮಕಾರಿ ಮನೆಮದ್ದು!

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News