"ರಶ್ಮಿಕಾ ವಿಜಯ್ ಮದುವೆ ಆಗ್ತಾರೆ, ಆದರೆ ಬಳಿಕ ಇಬ್ಬರೂ ದೂರವಾಗ್ತಾರೆ" : ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ

Rashmika Vijay Marriage : ಇತ್ತೀಚೆಗೆ ರಶ್ಮಿಕಾ ಮಂದಣ್ಣ ಬಗ್ಗೆ ಸೆನ್ಸೆಷನಲ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ರಶ್ಮಿಕಾ ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ವೇಣುಸ್ವಾಮಿ ಬಹಿರಂಗಪಡಿಸಿದ್ದಾರೆ.  

Written by - Chetana Devarmani | Last Updated : Dec 29, 2023, 05:00 PM IST
  • ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಸಂಬಂಧ
  • ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಸೆನ್ಸೇಷನಲ್‌ ಹೇಳಿಕೆ
  • ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
"ರಶ್ಮಿಕಾ ವಿಜಯ್ ಮದುವೆ ಆಗ್ತಾರೆ, ಆದರೆ ಬಳಿಕ ಇಬ್ಬರೂ ದೂರವಾಗ್ತಾರೆ" : ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ   title=
Rashmika Mandanna Vijay Devarakonda

Rashmika Vijay Marriage : ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರ ಬಗ್ಗೆ ವಿಶೇಷವಾದ ಪರಿಚಯ ಬೇಕಾಗಿಲ್ಲ. ವೇಣುಸ್ವಾಮಿ ಖ್ಯಾತನಾಮರ ಜಾತಕ ಹೇಳಿ ಫೇಮಸ್ ಆದವರು. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಬಗ್ಗೆ ಸೆನ್ಸೆಷನಲ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ರಶ್ಮಿಕಾ ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ವೇಣುಸ್ವಾಮಿ ಬಹಿರಂಗಪಡಿಸಿದ್ದಾರೆ.  

ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರ ಕಾಮೆಂಟ್‌ಗಳು ಇತ್ತೀಚೆಗೆ ವೈರಲ್ ಆಗುತ್ತಿವೆ. ನಾಗಚೈತನ್ಯ ಮತ್ತು ಸಮಂತಾ ಮದುವೆಯಾದಾಗ ಬೇರೆಯಾಗುತ್ತಾರೆ ಎಂದು ವೇಣುಸ್ವಾಮಿ ಹೇಳಿದ್ದರು. ಕೆಲವು ವರ್ಷಗಳ ಹಿಂದೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದಾಗ ಇವರ ವಿಡಿಯೋ ಹೊರಬಿದ್ದಿತ್ತು. 

ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ವೇಣುಸ್ವಾಮಿ ಸೆನ್ಸೇಷನಲ್ ಕಾಮೆಂಟ್‌ಗಳನ್ನು ನೀಡುವುದು ಹೊಸದೇನಲ್ಲ. ಇಲ್ಲಿಯವರೆಗೆ ವೇಣುಸ್ವಾಮಿ ಅನೇಕ ಸೆಲೆಬ್ರಿಟಿಗಳ ಬಗ್ಗೆ ನುಡಿದ ಭವಿಷ್ಯ ನಿಜವಾಗಿದೆ. ವೇಣು ಸ್ವಾಮಿ ಅವರ ಕಾಮೆಂಟ್‌ಗಳು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ : ಅರ್ಜುನ್‌ ಕಪೂರ್‌ ಜೊತೆ ಮಲೈಕಾ ಅರೋರಾ ಮದುವೆ.. 2024 ರಲ್ಲಿ ಎರಡನೇ ವಿವಾಹಕ್ಕೆ ಸಿದ್ಧತೆ.! 

ಬಾಹುಬಲಿ ನಂತರ ಪ್ರಭಾಸ್‌ಗೆ ವೃತ್ತಿಜೀವನವಿಲ್ಲ ಎಂದು ವೇಣು ಸ್ವಾಮಿ ಈ ಹಿಂದೆ ಮಾಡಿದ ಕಾಮೆಂಟ್‌ಗಳು ಇತ್ತೀಚೆಗೆ ಮತ್ತೆ ವೈರಲ್ ಆಗಿದ್ದು ಗೊತ್ತೇ ಇದೆ. ಸಲಾರ್ ಚಿತ್ರದ ಮೂಲಕ ಪ್ರಭಾಸ್ ಬ್ಲಾಕ್ ಬಸ್ಟರ್ ಹಿಟ್ ಆದ ನಂತರ... ಪ್ರಭಾಸ್ ಅಭಿಮಾನಿಗಳು ವೇಣು ಸ್ವಾಮಿ ಅವರನ್ನು ಟ್ರೋಲ್‌ ಮಾಡಿದ್ದಾರೆ.  

ಇತ್ತೀಚೆಗೆ ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ಕಾಮೆಂಟ್‌ ಮಾಡಿದ್ದರು ಎನ್ನಲಾಗಿದೆ. ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಅವರು ವಿಜಯ್ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಮದುವೆಯಾಗಲು ಬಯಸಿದ್ದು ನಿಜ ಎಂದು ವೇಣು ಸ್ವಾಮಿ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. 

ನಾನು ಇದನ್ನು ನೇರವಾಗಿ ರಶ್ಮಿಕಾ ಮಂದಣ್ಣಗೆ ಹೇಳಿದೆ... ಅವಳಿಗೆ ಇಷ್ಟವಾಗಲಿಲ್ಲ... ವಿಜಯ್ ದೇವರಕೊಂಡನನ್ನು ಮದುವೆಯಾಗದಂತೆ ನಾನು ಅವಳಿಗೆ ಸಲಹೆ ನೀಡಿದ್ದೆ. ಆ ವಿಚಾರದಲ್ಲಿ ನನಗೂ ರಶ್ಮಿಕಾಗೂ ಭಿನ್ನಾಭಿಪ್ರಾಯವಿದೆ ಎಂದು ವೇಣುಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ. "ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟಲ್ಲ. ಅವರಿಬ್ಬರು ಮದುವೆ ಆಗಲಿದ್ದಾರೆ. ಆದರೆ ಮದುವೆ ಬಳಿಕ ಇಬ್ಬರೂ ದೂರಾಗಲಿದ್ದಾರೆ. ಇದು ಖಚಿತ" ಎಂದು ವೇಣು ಸ್ವಾಮಿ ಹೇಳಿದ್ದಾರೆ. 

ಇದನ್ನೂ ಓದಿ : ಬಿಗ್‌ ಬಾಸ್‌ನಲ್ಲಿ ಪ್ರತಾಪ್ ಮದುವೆ ಮಾತುಕತೆ, ಯಾರು ಆ ಬೆಡಗಿ!? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News