ವೈಷ್ಣವಿ ಗೌಡಗೆ ಶಾಕ್‌ ಕೊಟ್ಟ ಅಭಿಮಾನಿ..! ನಟಿ ವಿರುದ್ಧ ದೂರು ನೀಡಿ, ದಂಡ ಕಟ್ಟುವಂತೆ ಮಾಡಿದ ಭೂಪ

Vaishnavi Gowda : ಕನ್ನಡ ಕಿರುತೆರೆ ಜನಪ್ರಿಯ ನಟಿಯರಲ್ಲಿ ವೈಷ್ಣವಿ ಗೌಡ ಅವರು ಕೂಡ ಒಬ್ಬರು. ಇತ್ತೀಚಿಗೆ ನಟಿ ಹೆಲ್ಮೆಟ್‌ ಹಾಕದೇ ಸ್ಕೂಟರ್‌ ರೈಡ್‌ ಮಾಡಿದ್ದಕ್ಕೆ ದಂಡ ತೆತ್ತಿದ್ದಾರೆ. ಆದರೆ ವಿಪರ್ಯಾಸ ಅಂದ್ರೆ, ಧಾರಾವಾಹಿಯ ದೃಶ್ಯವೊಂದರಲ್ಲಿ ಬೈಕ್‌ ರೈಡ್‌ ಮಾಡಿದ್ದಕ್ಕೆ ನಟಿ ದಂಡ ಕಟ್ಟಿದ್ದು.. ಈ ಕುರಿತ ಇಂಟ್ರಸ್ಟಿಂಗ್‌ ಸಂಗತಿ ಇಲ್ಲಿದೆ..

Written by - Krishna N K | Last Updated : May 18, 2024, 03:20 PM IST
    • ಕನ್ನಡ ಕಿರುತೆರೆ ಜನಪ್ರಿಯ ನಟಿಯರಲ್ಲಿ ವೈಷ್ಣವಿ ಗೌಡ ಅವರು ಕೂಡ ಒಬ್ಬರು.
    • ʼಸೀತಾ ರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
    • ಇದೀಗ ಈ ಸಿರೀಯಲ್‌ ದೃಶ್ಯವೊಂದು ವೈಷ್ಣವಿ ಗೌಡ ಅವರಿಗೆ ಫಜೀತಿ ತಂದಿಟ್ಟಿದೆ.
ವೈಷ್ಣವಿ ಗೌಡಗೆ ಶಾಕ್‌ ಕೊಟ್ಟ ಅಭಿಮಾನಿ..! ನಟಿ ವಿರುದ್ಧ ದೂರು ನೀಡಿ, ದಂಡ ಕಟ್ಟುವಂತೆ ಮಾಡಿದ ಭೂಪ title=

Seetha Rama serial Vaishnavi Gowda : ಪ್ರಸ್ತುತ ವೈಷ್ಣವಿಗೌಡ ಅವರು ʼಸೀತಾ ರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿ ಪ್ರಾರಂಭವಾಗಿ ಸುಮಾರು 10 ತಿಂಗಳು ಕಳೆದರೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿರೀಯಲ್‌ ದೃಶ್ಯವೊಂದು ವೈಷ್ಣವಿ ಗೌಡ ಅವರಿಗೆ ಫಜೀತಿ ತಂದಿಟ್ಟಿದೆ.

ಹೌದು.. ಸಂಜೆಯಾದರೆ ಮಹಿಳೆಯರು ಟಿವಿಗೆ ಅಂಟಿಕೊಂಡಿರುತ್ತಾರೆ. ಒಂದೇ ಒಂದು ಸಂಚಿಕೆಯನ್ನು ಮಿಸ್ ಮಾಡದೆ ನೋಡುತ್ತಾರೆ. ಕುತೂಹಲಕಾರಿ ಕಥೆಗಳೊಂದಿಗೆ ಅನೇಕ ಧಾರಾವಾಹಿಗಳು ನಡೆಯುತ್ತಿವೆ. ಇತ್ತೀಚಿಗೆ ಪುರುಷರೂ ಹೆಚ್ಚಾಗಿ ಧಾರಾವಾಹಿಗಳನ್ನು ನೋಡುತ್ತಿದ್ದಾರೆ. ಈ ನಡುವೆ ಪ್ರೇಕ್ಷಕನೊಬ್ಬ ವೈಷ್ಣವಿಗೆ ಶಾಕ್‌ ನೀಡಿದ್ದಾನೆ.. 

ಇದನ್ನೂ ಓದಿ:ಬಾಲಿವುಡ್‌ಗೆ ಕಾಲಿಡುತ್ತಲೇ ಆ ನಟನ ಜೊತೆ ಲಿಪ್‌ ಕಿಸ್‌ ಮಾಡೋಕೆ OK ಎಂದ ಕೀರ್ತಿ ಸುರೇಶ್‌..!

ಧಾರಾವಾಹಿಯ ಒಂದು ಸಂಚಿಕೆಯಲ್ಲಿ ವೈಷ್ಣವಿ ಗೌಡ ಹೆಲ್ಮೆಟ್ ಇಲ್ಲದೆ ಸ್ಕೂಟಿ ಓಡಿಸಿದ್ದಾರೆ. ಟಿವಿಯಲ್ಲಿ ಇದನ್ನು ನೋಡಿದ ಜಯಪ್ರಕಾಶ್ ಎಂಬ ವ್ಯಕ್ತಿ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಸೆಲೆಬ್ರಿಟಿಗಳು ಸಂಚಾರಿ ನಿಯಮ ಪಾಲಿಸದಿದ್ದರೆ ಅವರನ್ನು ನೋಡಿದ ಅಭಿಮಾನಿಗಳೂ ಅದನ್ನೇ ಪಾಲಿಸುತ್ತಾರೆ ಎಂದು ದೂರು ನೀಡಿದ್ದರು. 

ಇದನ್ನು ಪರಿಗಣಿಸಿದ ಪೊಲೀಸರು ಧಾರಾವಾಹಿಯನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ತಿಳಿದು, ಅಲ್ಲಿನ ಕ್ಯಾಮೆರಾಗಳನ್ನು ಪರಿಶೀಲಿಸಿ ನಟಿ ವೈಷ್ಣವಿಗೆ ದಂಡ ವಿಧಿಸಿದ್ದಾರೆ. ಪೊಲೀಸರು ಸ್ಕೂಟಿ ಮಾಲೀಕರಿಗೆ 500 ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ರಸ್ತೆಯಲ್ಲಿ ಓಡಾಡಬಾರದು ಎಂದು ಧಾರಾವಾಹಿ ಘಟಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:'ಮೂರನೇ ಕೃಷ್ಣಪ್ಪ' ಸಿನಿಮಾ ಸೀಕ್ರೆಟ್ ಬಿಚ್ಚಿಟ್ಟ ರಂಗಾಯಣ ರಘು ಹಾಗೂ ಸಂಪತ್ ಮೈತ್ರಿಯಾ!

ʼಸೀತಾ ರಾಮʼ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯದಲ್ಲಿ, ಸೀತಾ (ವೈಷ್ಣವಿ ಗೌಡ) ಹಾಗೂ ಆಕೆಯ ಗೆಳೆತಿ ಪ್ರಿಯಾ (ಶ್ವೇತಾ ಶಂಕರಪ್ಪ) ಸ್ಕೂಟರ್‌ನಲ್ಲಿ ತೆರಳುವ ದೃಶ್ಯವಿದೆ. ಸ್ಕೂಟರ್‌ ಓಡಿಸುತ್ತಿದ್ದ ಶ್ವೇತಾ ಹೆಲ್ಮೆಟ್ ಧರಿಸಿದ್ದರೆ ಹಿಂದಿನ ಸೀಟಿನಲ್ಲಿದ್ದ ವೈಷ್ಣವಿ ಹೆಲ್ಮೆಟ್ ಧರಿಸಿರಲಿಲ್ಲ. ಈ ಕುರಿತು ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎನ್ನುವವರು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News