South Actress: ಕಿರಿಕ್‌ ಪಾರ್ಟಿ ಸಿನಿಮಾಗೆ ರಶ್ಮಿಕಾಗಿಂತ ಮುಂಚೆ ಈ ಸೌತ್‌ ಸುಂದರಿ ಆಯ್ಕೆಯಾಗಿದ್ದರು: ಯಾವ ನಟಿ ಗೊತ್ತೇ?

South Actress In Kirik Party: ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರಕ್ಕೆ ಮೊದಲು ರಶ್ಮಿಕಾ ಮಂದಣ್ಣ ಆಯ್ಕೆಯಾಗುವ ಮೊದಲು ಸೌತ್‌ ಚಿತ್ರರಂಗದ ಬೇರೊಬ್ಬ ನಟಿ ಸೆಲೆಕ್ಟ್‌ ಆಗಿದ್ದರಂತೆ. ಹಾಗಿದ್ರೇ ಈ ನಟಿ ಯಾರು? ಇದರ ಮಾಹಿತಿ ಇಲ್ಲಿದೆ.   

Written by - Zee Kannada News Desk | Last Updated : Apr 22, 2024, 02:25 PM IST
  • ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಾನ್ವಿಯಾಗಿ ಅಭಿನಯಿಸಿದ್ದು, ಈ ಪಾತ್ರಕ್ಕೆ ಮೊದಲು ಬೇರೊಬ್ಬ ದಕ್ಷಿಣ ಚಿತ್ರರಂಗದ ನಟಿ ಆಯ್ಕೆಯಾಗಿದ್ದರಂತೆ.
  • ನಟ ರಕ್ಷಿತ್ ಶೆಟ್ಟಿ ಈ ಹಿಂದೆ ಮಾತನಾಡಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
  • ರಕ್ಷಿತ್‌ ಶೆಟ್ಟಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ʻನೀವು ಆಗ ಹಣ ಹೂಡಿಕೆ ಮಾಡಿದಿದ್ದರೆ ಈಗ ಕಷ್ಟಪಡುವ ಅಗತ್ಯ ಇರಲಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ.
South Actress: ಕಿರಿಕ್‌ ಪಾರ್ಟಿ ಸಿನಿಮಾಗೆ ರಶ್ಮಿಕಾಗಿಂತ ಮುಂಚೆ ಈ ಸೌತ್‌ ಸುಂದರಿ ಆಯ್ಕೆಯಾಗಿದ್ದರು: ಯಾವ ನಟಿ ಗೊತ್ತೇ? title=

Sai Pallavi Was Selected For Kirik Party First: ಸಿಂಪಲ್‌ ಸ್ಟಾರ್‌  ರಕ್ಷಿತ್‌ ಶೆಟ್ಟಿ ಹಾಗೂ ಡೈರೆಕ್ಟರ್‌ ರಿಷಬ್‌ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿಬಂದ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ  ಇದೀಗ ಅಭಿಮಾನಿಗಳ ನ್ಯಾಷನಲ್ ಕ್ರಶ್ ಆಗಿಬಿಟ್ಟಿದ್ದಾರೆ. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಾನ್ವಿಯಾಗಿ ಅಭಿನಯಿಸಿದ್ದು, ಈ ಪಾತ್ರಕ್ಕೆ ಮೊದಲು ಬೇರೊಬ್ಬ ದಕ್ಷಿಣ ಚಿತ್ರರಂಗದ ನಟಿ ಆಯ್ಕೆಯಾಗಿದ್ದರಂತೆ. ಅವರು ಬೇರೆಯಾರು ಅಲ್ಲ, ನಟಿ ಸಾಯಿ ಪಲ್ಲವಿ.

ಹೌದು..  ಸಂದರ್ಶನವೊಂದರಲ್ಲಿ ಖುದ್ದು ಈ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ ,'ಪ್ರೇಮಂ' ಸಿನಿಮಾದಲ್ಲಿ ಸಾಯಿ ಪಲ್ಲವಿ ಮಾಡಿದ್ದ ಮಲರ್ ಪಾತ್ರದಿಂದ ಪ್ರೇರಣೆಗೊಂಡು 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಾನ್ವಿ ಪಾತ್ರ ಬರೆದುಕೊಂಡಿದ್ದರಂತೆ. ಆದರೆ ಯಾಕೆ ಸಾಯಿ ಪಲ್ಲವಿ ಜಾಗಕ್ಕೆ ರಶ್ಮಿಕಾ ಮಂದಣ್ಣ ಬರುವಂತಾಯಿತು ಎಂಬುವುದರ ಬಗ್ಗೆ  ವಿವರಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಈ ಹಿಂದೆ ಮಾತನಾಡಿರುವ  ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ನಟಿ ರಮ್ಯಾ ತಂದೆ ಪ್ರಭಾವಿ ರಾಜಕಾರಣಿ.. ಅಮ್ಮ‌ ಕೂಡ ಫೇಮಸ್ ಲೀಡರ್‌ !

ನಟ ರಕ್ಷಿತ್‌ ಶೆಟ್ಟಿ ಸಂದರ್ಶನದಲ್ಲಿ "ಪ್ರೇಮಂ ಸಿನಿಮಾ ನೋಡಿದಾಗ ನಾನು ಸಾಯಿ ಪಲ್ಲವಿ ಅವರ ದೊಡ್ಡ ಅಭಿಮಾನಿ ಆಗಿದ್ದೆ. ನಾವು 'ಕಿರಿಕ್ ಪಾರ್ಟಿ' ಸಿನಿಮಾ ಮಾಡುವಾಗ ಪ್ರೇಕ್ಷಕರು ಸಾನ್ವಿ ಪಾತ್ರ ನೋಡಿ ಪ್ರೀತಿಲಿ ಬೀಳಬೇಕು. ಹಾಗಾಗಿ ಆ ಪಾತ್ರವನ್ನು ಅದೇ ರೀತಿ ಡಿಸೈನ್ ಮಾಡಿದ್ದೆವು. ಯಾರನ್ನು ಪಾತ್ರಕ್ಕೆ ಆಯ್ಕೆ ಮಾಡುವುದು ಎಂದಾಗ ಸಾಯಿ ಪಲ್ಲವಿ ಎಂದಿದ್ದ. ನನ್ನ ಮೇಲೆ ಒಂದೂವರೆ ಕೋಟಿ ಹಾಕೋಕೆ ನಿರ್ಮಾಪಕರು ಸಿದ್ಧರಿಲ್ಲ. ಅಂತಾದ್ರಲ್ಲಿ ನಮ್ಮ ಬಜೆಟ್ 3 ಕೋಟಿ ರೂ. ನೀನು ನೋಡಿದರೆ ಸಾಯಿ ಪಲ್ಲವಿ ಅಂತೀಯಾ? ಎಂದು ನಿರ್ಮಾಪಕರು ಹೇಳಿದ್ದರೆಂದು ತಿಳಿಸಿದ್ದಾರೆ.

ಸಂದರ್ಶನದಲ್ಲಿ ರಕ್ಷಿತ್‌ ಶೆಟ್ಟಿ ಮಾತನಾಡಿರುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಇದನ್ನು ನೋಡಿದ ನೆಟ್ಟಿಗರು ʻನೀವು ಆಗ ಹಣ ಹೂಡಿಕೆ ಮಾಡಿದಿದ್ದರೆ ಈಗ ಕಷ್ಟಪಡುವ ಅಗತ್ಯ ಇರಲಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಛೇ, ಸಾಯಿ ಪಲ್ಲವಿ ಅವರನ್ನು ಸಾನ್ವಿ ಪಾತ್ರಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಸಾಯಿ ಪಲ್ಲವಿ ಆಯ್ಕೆ ಆಗಿದ್ದರೆ ಇವತ್ತು ರಶ್ಮಿಕಾ ಮಂದಣ್ಣ ಇಂಡಸ್ಟ್ರಿಯಲ್ಲೇ ಇರುತ್ತಿರಲಿಲ್ಲ ಕಮೆಂಟ್‌ ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
    

Trending News