ಚಿಕ್ಕಪ್ಪನ ಪರ ಬರ್ಜರಿ ಪ್ರಚಾರ ನಡೆಸಿದ ರಾಮ್‌ ಚರಣ್‌..! ಪಿಠಾಪುರದಲ್ಲಿ ಮೆಗಾ ಪವರ್‌ ಸ್ಟಾರ್‌..

Ram charan Campaign Janasena party : ಜನಸೇನೆಗೆ ಬೆಂಬಲ ಸೂಚಿಸಲು ಹಲವು ಸೆಲೆಬ್ರಿಟಿಗಳು ಪಿಠಾಪುರಕ್ಕೆ ಆಗಮಿಸುತ್ತಿದ್ದಾರೆ. ಪವನ್‌ಗೆ ಬೆಂಬಲ ಸೂಚಿಸಿ ಈಗಾಗಲೇ ಹಲವು ನಾಯಕರು ಹಾಗೂ ಚಿತ್ರ ಕಲಾವಿದರು ಪ್ರಚಾರ ನಡೆಸುತ್ತಿದ್ದಾರೆ. ದೇ ವೇಳೆ ಚಿರು ಪುತ್ರ ತಮ್ಮ ಚಿಕ್ಕಪ್ಪ ಪವನ್‌ ಕಲ್ಯಾಣ್‌ಗೆ ಬೆಂಬಲ ಸೂಚಿಸಿ ಫಿಠಾಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಮತ ಪ್ರಚಾರದಲ್ಲಿ ತೊಡಗಿದ್ದಾರೆ.

Written by - Krishna N K | Last Updated : May 11, 2024, 11:27 AM IST
    • ಆಂಧ್ರಪ್ರದೇಶ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ.
    • ಜನಸೇನಾ, ಬಿಜೆಪಿ, ಟಿಡಿಪಿ ಭರ್ಜರಿ ಪ್ರಚಾರ ನಡೆಸುತ್ತಿವೆ.
    • ವೈಸಿಪಿಯನ್ನು ಹೇಗಾದರೂ ಮಾಡಿ ಸೋಲಿಸಲು ರೆಡಿಯಾಗಿವೆ.
ಚಿಕ್ಕಪ್ಪನ ಪರ ಬರ್ಜರಿ ಪ್ರಚಾರ ನಡೆಸಿದ ರಾಮ್‌ ಚರಣ್‌..! ಪಿಠಾಪುರದಲ್ಲಿ ಮೆಗಾ ಪವರ್‌ ಸ್ಟಾರ್‌.. title=

Ram charan campaign in Pithapuram : ಆಂಧ್ರಪ್ರದೇಶ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ. ವೈಸಿಪಿಯನ್ನು ಹೇಗಾದರೂ ಮಾಡಿ ಸೋಲಿಸಲು ಛಲ ತೊಟ್ಟಿರುವ ಮೈತ್ರಿ ಪಕ್ಷಳಾದ ಜನಸೇನಾ, ಬಿಜೆಪಿ, ಟಿಡಿಪಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಅಲ್ಲದೆ, ಪವನ್‌ ಕಲ್ಯಾಣ್‌ ಅವರ ಪರ ಟಾಲಿವುಡ್‌ ಪೀಲ್ಡ್‌ಗೆ ಇಳಿದು ಪವರ್‌ ಸ್ಟಾರ್‌ ಪರ ಮತಯಾಚನೆ ಮಾಡುತ್ತಿವೆ..

ಪವನ್ ಕಲ್ಯಾಣ್ ಎಪಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಗೊತ್ತೇ ಇದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಎಲ್ಲಾ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪವನ್ ಕಲ್ಯಾಣ್ ತಮ್ಮ ಪ್ರಚಾರದಲ್ಲಿ ಧಾವಿಸುತ್ತಿದ್ದಾರೆ. 

ಇದನ್ನೂ ಓದಿ:ನಟಿಯಾಗಲು ʼದಿ ಕೇರಳ ಸ್ಟೋರಿʼ ಚೆಲುವೆ ಮಾಡಿದ ತ್ಯಾಗ ಎಂತದ್ದು ಗೊತ್ತೆ..!

ಅಲ್ಲದೆ, ಜನಸೇನೆಗೆ ಬೆಂಬಲ ಸೂಚಿಸಲು ಹಲವು ಸೆಲೆಬ್ರಿಟಿಗಳು ಪಿಠಾಪುರಕ್ಕೆ ಆಗಮಿಸುತ್ತಿದ್ದಾರೆ. ಪವನ್‌ಗೆ ಬೆಂಬಲ ಸೂಚಿಸಿ ಈಗಾಗಲೇ ಹಲವು ನಾಯಕರು ಹಾಗೂ ಚಿತ್ರ ಕಲಾವಿದರು ಪ್ರಚಾರ ನಡೆಸುತ್ತಿದ್ದಾರೆ. ಜಬರ್ದಸ್ತ್ ಟೀಮ್ ಸುಧೀರ್, ಹೈಪರ್ ಆದಿ ಮತ್ತು ಗೆಟಪ್ ಶ್ರೀನು ಜೊತೆಗೆ ಮೆಗಾ ಹೀರೋಗಳಾದ ಸಾಯಿ ಧರಂ ತೇಜ್ ಮತ್ತು ವರುಣ್ ತೇಜ್ ಕೂಡ ಜನಸಾನ ಮುಖ್ಯಸ್ಥರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. 

ಅಲ್ಲದೇ ಮೆಗಾಸ್ಟಾರ್ ಚಿರಂಜೀವಿ ಕೂಡ ಪವನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಚಿರು ಪುತ್ರ ತಮ್ಮ ಚಿಕ್ಕಪ್ಪ ಪವನ್‌ ಕಲ್ಯಾಣ್‌ಗೆ ಬೆಂಬಲ ಸೂಚಿಸಿ ಫಿಠಾಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಮತ ಪ್ರಚಾರದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ಬಾಲ್ ಡ್ರೆಸ್.. ಜಾನ್ವಿ ಕಪೂರ್ ಬೋಲ್ಡ್ ಸ್ಟೈಲ್‌ಗೆ ಫಿದಾ ಆದ ಪಡ್ಡೆಹೈಕ್ಳು

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜನಸೇನಾ ಪಕ್ಷಕ್ಕೆ ಬೆಂಬಲ ಸೂಚಿಸಲು ಪಿಠಾಪುರಕ್ಕೆ ಆಗಮಿಸಿದ್ದಾರೆ. ರಾಮ್ ಚರಣ್ ತನ್ನ ತಾಯಿ ಸುರೇಖಾ ಜೊತೆಗೆ ಪಿಠಾಪುರಂ ತಲುಪಿದ್ದಾರೆ. ಕುಕ್ಕುಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪವನ್ ಕಲ್ಯಾಣ್ ಜೊತೆಗೆ ರಾಮ್ ಚರಣ್ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News