BBK 10: ಬಿಗ್‌ಬಾಸ್‌ ಮನೆಯಿಂದ ಹೊರನಡೆದ ತನಿಷಾ: ಏನಾಗಿತ್ತು ದೊಡ್ಮನೆಯ ಬೆಂಕಿಗೆ?

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಹನಿ ಹನಿ ಕಹಾನಿ ಟಾಸ್ಕ್‌ ವೇಳೆ ತನಿಷಾ ಕುಪ್ಪಂಡ ಮನೆಯಿಂದ  ಹೊರಗಡೆ ಬಂದಿದ್ದಾರೆ. ಹಾಗಾದ್ರೆ ಈಕೆಗೆ ಏನಾಯಿತು? ಮನೆಯಿಂದ ಹೊರಬಂದಿದಕ್ಕೆ ಅಸಲಿ ಕಾರಣ ಏನು? ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ. 

Written by - Zee Kannada News Desk | Last Updated : Nov 29, 2023, 10:02 AM IST
  • ತನಿಷಾ ವರ್ತೂರು ಸಂತೋಷ್‌ರನ್ನು ತಡೆಯಲು ಪ್ರಯತ್ನಪಡುತ್ತಿದ್ದಾಗ, ಈಕೆ ಬಿದ್ದು ಪೆಟ್ಟಾಗಿ ನೋವಿನಿಂದ ಕಣ್ಣೀರು ಹಾಕಿದರು.
  • ತನಿಷಾ 'ಮಣ್ಣಿನ ಮಕ್ಕಳು' ಟೀಂನಿಂದ ಆಡುತ್ತಿದ್ದು, ಈ ಆಟದಲ್ಲಿ ಒಂದು ತಂಡದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರನ್ನು ತಗೊಂಡು, ದೂರದಲ್ಲಿ ಇಟ್ಟಿರುವ ಕೊಳವೆಯೊಂದರಲ್ಲಿ ನೀರು ಹಾಕಬೇಕಿತ್ತು.
  • ತನಿಷಾ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಸ್ಪರ್ಧಿಯಾಗಿದ್ದು, ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.
BBK 10: ಬಿಗ್‌ಬಾಸ್‌ ಮನೆಯಿಂದ ಹೊರನಡೆದ ತನಿಷಾ: ಏನಾಗಿತ್ತು ದೊಡ್ಮನೆಯ ಬೆಂಕಿಗೆ? title=

Tanisha Kuppanda Out From BBK: ಬಿಗ್‌ಬಾಸ್‌ ಮನೆಯ ಆಟವೊಂದರಲ್ಲಿ ತನಿಷಾ ವರ್ತೂರು ಸಂತೋಷ್‌ರನ್ನು ತಡೆಯಲು ಪ್ರಯತ್ನಪಡುತ್ತಿದ್ದಾಗ, ಈಕೆ ಬಿದ್ದು ಪೆಟ್ಟಾಗಿ ನೋವಿನಿಂದ ಕಣ್ಣೀರು ಹಾಕಿದರು. ಆಗ ಈಕೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಈಕೆಯನ್ನು ಮನೆಯಿಂದ ಹೊರಗಡೆ ಕಳಿಸಲಾಗಿದ್ದು, ಆದಷ್ಟು ಬೇಗ ಬಿಗ್‌ಬಾಸ್‌ ಮನೆಗೆ ಮರಳಲಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಿದ್ದ ತನಿಷಾ ಸದ್ಯ ಮನೆಯಲ್ಲಿ ಇಲ್ಲದಿರೋದು ವೀಕ್ಷಕರಿಗೆ ಬೇಸರ ತಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಕೆ ಬಗ್ಗೆ ಸಾಕಷ್ಟು ಪೋಸ್ಟ್‌ಗಳು ಕಾಣುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ತನಿಷಾ 'ಮಣ್ಣಿನ ಮಕ್ಕಳು' ಟೀಂನಿಂದ ಆಡುತ್ತಿದ್ದು, ಈ ಆಟದಲ್ಲಿ ಒಂದು ತಂಡದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರನ್ನು ತಗೊಂಡು, ದೂರದಲ್ಲಿ ಇಟ್ಟಿರುವ ಕೊಳವೆಯೊಂದರಲ್ಲಿ ನೀರು ಹಾಕಬೇಕಿತ್ತು. ಕೊಳವೆಯೊಳಗೆ ಹೋದ ನೀರು ಗಾಜಿನ ಬಾಕ್ಸ್‌ನಲ್ಲಿ ಶೇಖರ ಆಗುತ್ತಿದ್ದು, ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್ ಆಗುತ್ತಾರೆ. ಪ್ರತಿ ಬಾರಿ ಆಟದಲ್ಲಿ ಒಳ್ಳೆಯ ಪ್ರದರ್ಶನ ನೀಡುವ ತನಿಷಾ ಈ ಬಾರಿ ಕೂಡ ಚೆನ್ನಾಗಿ ಆಟ ಆಡುತ್ತಿರುವಾಗ ಈ ವೇಳೆ ಈ ತರ ಆಗಿದೆ.

ಇದನ್ನೂ ಓದಿ: ಈ ಪೋಟೋದಲ್ಲಿರುವ ಬಾಲಕ ಯಾರು ಗೊತ್ತಾ? ಸದ್ಯ ಕನ್ನಡ ಬಿಗ್‌ಬಾಸ್‌ನ Innocent ಸ್ಪರ್ಧಿ ಈತ

ತನಿಷಾ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಸ್ಪರ್ಧಿಯಾಗಿದ್ದು, ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆಟವೊಂದರಲ್ಲಿ 20 ಮೆಣಸಿನಕಾಯಿಯನ್ನು ತಿಂದಿದ್ದ ತನಿಷಾ ಅವರು ಎಲ್ಲರ ಮೆಚ್ಚುಗೆ ಪಡೆದಿದ್ದು, ಈಕೆಗೆ ಬೆಂಕಿ ಎಂದು ಹೆಸರಿಡಲಾಗಿದೆ. ಕಾರ್ತಿಕ್, ವರ್ತೂರು ಸಂತೋಷ್ ಜೊತೆ ತನಿಷಾ ಉತ್ತಮ ಸ್ನೇಹವನ್ನು ಕಾಪಾಡಿಕೊಂಡಿದ್ದಾರೆ. ತನಿಷಾ ಆಟದಲ್ಲಿ ಇಲ್ಲದಿರೋದು ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿವೆ.

ತನಿಷಾ ಈ ಬಾರಿ ನಾಮಿನೇಟ್ ಆಗಿದ್ದು, ಈಕೆಯನ್ನು ಸೇವ್ ಮಾಡಿ ಅಂತ ಕಾರ್ತಿಕ್ ತನಿಷಾ ಪರವಾಗಿ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಅಂದಹಾಗೆ ಅವಿನಾಶ್ ಶೆಟ್ಟಿಗೆ ತನಿಷಾ ಫೇವರಿಟ್ ಸ್ಪರ್ಧಿಯಂತೆ.ತನಿಷಾ ಹಾಗೂ ಸಂಗೀತಾ ಮಧ್ಯೆ ಕೂಡ ಮನಸ್ತಾಪ ಬಂದಿದ್ದಾಗ, ಕಾರ್ತಿಕ್, ಸಂಗೀತಾ ಜಗಳ ಆಡಿಕೊಂಡಾಗೆಲ್ಲ ತನಿಷಾ ನೀವಿಬ್ಬರೂ ಸರಿ ಹೋಗಿ ಎಂದು ಸಲಹೆ ನೀಡುತ್ತಲೇ ಬಂದಿದ್ದಾರೆ. ಇದು ಮೆಚ್ಚುವ ಗುಣ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News