Bhagyalakshmi Serial: ಕೆಲಸಕ್ಕಾಗಿ ಭಾಗ್ಯಾ ಕುಸುಮಾ ಪರದಾಟ: ಅತ್ತೆ ಸೊಸೆ ಒಂದೇ ಕಡೆ ಮುಖಾಮುಖಿಯಾಗುತ್ತಾರ?

Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಕುಸುಮಾ ಮತ್ತು ಭಾಗ್ಯಾ ಇಬ್ಬರು ಕೆಲಸಕ್ಕಾಗಿ ಒಬ್ಬನೇ ಬ್ರೋಕರ್‌ ಅನ್ನು ಕುಡುಕಿಕೊಂಡು ಹೋಗಿದ್ದಾರೆ. ಹಾಗಿದ್ರೇ ಅತ್ತೆ ಸೊಸೆ ಇಬ್ಬರು ಒಂದೇ ಕಡಗೆ ಹೋಗಿದ್ದಾರಾ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : May 8, 2024, 12:23 PM IST
  • ತಾಂಡವ್ ಲವ್ವರ್ ಶ್ರೇಷ್ಠ ಭಾಗ್ಯಗೆ ತನ್ನ ತಂಗಿ ಲಕ್ಷ್ಮೀ ಮದುವೆ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ಹಣ ನೀಡಿದ್ದಳು.
  • ಇನ್ನೊಂದು ಕಡೆ ಕುಸುಮ ಕೂಡ ಸೊಸೆ ಸೋಲಬಾರದು, ಅವಳು ಈ ಮನೆಯಲ್ಲಿ ಇರಬೇಕು, ಅವಳು ತಲೆ ತಗ್ಗಿಸಬಾರದೆಂದು ದುಡಿಯುವ ಪ್ಲ್ಯಾನ್ ಮಾಡಿದ್ದಳು.
  • ಇದೆಲ್ಲವನ್ನೂ ಗಮನಿಸಿದರೆ ಮೊದಲು ಕುಸುಮಾಗೆ ಕೆಲಸ ಸಿಗುವ ತರಹ ಕಾಣುತ್ತಿದ್ದು, ಭಾಗ್ಯಾಗೆ ಸಿಗಬಹುದುದೆಂದು ಅನಿಸುತ್ತದೆ.
Bhagyalakshmi Serial: ಕೆಲಸಕ್ಕಾಗಿ ಭಾಗ್ಯಾ ಕುಸುಮಾ ಪರದಾಟ: ಅತ್ತೆ ಸೊಸೆ ಒಂದೇ ಕಡೆ ಮುಖಾಮುಖಿಯಾಗುತ್ತಾರ? title=

Bhagya And Kusuma Searches For Job: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಅತ್ತೆ-ಸೊಸೆ ಕುಸುಮಾ ಮತ್ತು ಭಾಗ್ಯಾ ಇಬ್ಬರು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾರೆ. ತಾಂಡವ್‌ಗೆ ಭಾಗ್ಯಾಳಿಂದ ವಿಚ್ಛೇದನ ‌ ಪಡೆಯಬೇಕೆಂದು ತನ್ನ ಹೆಂಡತಿಗೆ, ಈ ಮನೆಗೆ ಸಂಬಂಧಿಸಿದ ಸಾಲದಲ್ಲಿ ಅರ್ಧ ಭಾಗ ನೀನು ತುಂಬಬೇಕು, ಈ ಮನೆಯ ಖರ್ಚಿನಲ್ಲಿಯೂ ನಿನ್ನ ಅರ್ಧ ಪಾಲಿದೆ, ಎಲ್ಲಿಂದಾದ್ರೂ ಓಕೆ, ಹಣ ತಂದು ಅದನ್ನೆಲ್ಲ ನಿಭಾಯಿಸು. ಆಗಿಲ್ಲ ಅಂದ್ರೆ ಮನೆ ಬಿಟ್ಟು ಹೋಗಬೇಕೆಂದು ಸವಾಲ್‌ ಹಾಕಿರುತ್ತಾನೆ.

ಮತ್ತೊಂದೆಡೆ ತಾಂಡವ್ ಲವ್ವರ್ ಶ್ರೇಷ್ಠ ಭಾಗ್ಯಗೆ ತನ್ನ ತಂಗಿ ಲಕ್ಷ್ಮೀ ಮದುವೆ ಸಂದರ್ಭದಲ್ಲಿ  2 ಲಕ್ಷ ರೂಪಾಯಿ ಹಣ ನೀಡಿದ್ದಳು. ಭಾಗ್ಯಾ ತನ್ನ ತಂಗಿ ಲಕ್ಷ್ಮೀ ಮದುವೆಗೋಸ್ಕರ  2 ಲಕ್ಷ ರೂಪಾಯಿ ಇಟ್ಟುಕೊಂಡಿದ್ದನ್ನು ಶ್ರೇಷ್ಠ ಕದ್ದು, ಆಕೆಗೆ ಸಾಲದ ರೂಪದಲ್ಲಿ ಕೊಟ್ಟಿದ್ದಳು. ಸದ್ಯಕ್ಕೆ  ಭಾಗ್ಯ ತಾಂಡವ್ ಮತ್ತು ಶ್ರೇಷ್ಠಗೆ ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಇದೀಗ ಭಾಗ್ಯಾ ದಿನನಿತ್ಯ ದುಡಿದು ಹಣ ಸಂಪಾದನೆ ಮಾಡಬೇಕು ಅಂತ ಒದ್ದಾಡುತ್ತಿದ್ದಾಳೆ. ಆದರೆ ಆಕೆಗೆ ಕೆಲಸ ಮಾತ್ರ ಸಿಗುತ್ತಿಲ್ಲ. 

ಇದನ್ನೂ ಓದಿ: Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಶೋಕ: ಸಹನಾ ಸಾವಿನ ಕುರಿತು ಬಿಗ್‌ ಟ್ವಿಸ್ಟ್!

ಇನ್ನೊಂದು ಕಡೆ ಕುಸುಮ ಕೂಡ ಸೊಸೆ ಸೋಲಬಾರದು, ಅವಳು ಈ ಮನೆಯಲ್ಲಿ ಇರಬೇಕು, ಅವಳು ತಲೆ ತಗ್ಗಿಸಬಾರದೆಂದು ದುಡಿಯುವ ಪ್ಲ್ಯಾನ್ ಮಾಡಿದ್ದಳು. ಅತ್ತೆ-ಸೊಸೆ ಇಬ್ಬರು ಪರಸ್ಪರ ಏನು ಹೇಳಿಕೊಳ್ಳದೆ, ಇವರಿಬ್ಬರು ಒಬ್ಬ ಕಾಂಟ್ರ್ಯಾಕ್ಟರ್ ಹತ್ತಿರ ಕೆಲಸ ಕೇಳಿಕೊಂಡು ಹೋಗಿದ್ದಾರೆ. ಸದ್ಯಕ್ಕೆ ಭಾಗ್ಯಾ ಜೀವನ ನರಕವಾಗಿದ್ದು, ಆಕೆಗೆ ಜಾಸ್ತಿ ಸಮಯವಿಲ್ಲದೆ ಆದಷ್ಟು ಬೇಗ ಅವಳು ಹಣ ಗಳಿಸಬೇಕಾಗಿದೆ. ಇನ್ನೂ ಕುಸುಮಾ ಸಹ ತನ್ನ ಸೊಸೆಯನ್ನು ಉಳಿಸಿಕೊಳ್ಳಲು ದುಡಿಯುವ ನಿರ್ಧಾರ ಮಾಡಿದ್ದು ನಿಜಕ್ಕೂ ಖುಷಿಯ ವಿಷಯವಾಗಿದೆ.

ಇದೆಲ್ಲವನ್ನೂ ಗಮನಿಸಿದರೆ ಮೊದಲು  ಕುಸುಮಾಗೆ  ಕೆಲಸ ಸಿಗುವ ತರಹ ಕಾಣುತ್ತಿದ್ದು, ಭಾಗ್ಯಾಗೆ ಸಿಗಬಹುದುದೆಂದು ಅನಿಸುತ್ತದೆ. ಇವರಿಬ್ಬರೂ ಕೂಡ ಒಟ್ಟಿಗೆ ದುಡಿಯಲೂಬಹುದು. ಆದರೆ ಇವರಿಬ್ಬರೂ ಒಬ್ಬನೇ ಕಾಂಟ್ರ್ಯಾಕ್ಟರ್ ಬಳಿ ಕೆಲಸ ಕೇಳಿಕೊಂಡು ಹೋಗಿದ್ದರಿಂದ ಮುಂದೆ ಅತ್ತೆ-ಸೊಸೆ ಮುಖಾಮುಖಿಯಾಗ್ತಾರಾ? ಸತ್ಯ ಹೊರಬೀಳತ್ತಾ ಎಂಬುದನ್ನು ಮುಂದೆ ಬರುವ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News