ಸೈಬರ್ ವಂಚನೆ: ಬ್ಯಾಂಕ್‌ ಖಾತೆ ಹೊಂದಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಆರ್‌ಬಿಐ!

KYC ವಂಚನೆಗಳು: ಭಾರತೀಯ ರಿಸರ್ವ್ ಬ್ಯಾಂಕ್ (RBI) KYC ನವೀಕರಣದ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಎಚ್ಚರಿಕೆ ನೀಡಿದೆ. ಯಾವುದೇ ವ್ಯಕ್ತಿ ಇಂತಹ ವಂಚನೆಗೆ ಬಲಿಯಾದರೆ ತಕ್ಷಣವೇ ಸೈಬರ್ ಕ್ರೈಮ್ ಹೆಲ್ಪ್ ಲೈನ್ (1930) ಅಥವಾ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (www.cybercrime.gov.in)ನಲ್ಲಿ ದೂರು ದಾಖಲಿಸಬೇಕು ಎಂದು ಆರ್‌ಬಿಐ ಹೇಳಿದೆ. 

Written by - Puttaraj K Alur | Last Updated : Feb 3, 2024, 04:10 PM IST
  • ಇತ್ತೀಚಿನ ದಿನಗಳಲ್ಲಿ ಅನೇಕ ಸೈಬರ್ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ
  • KYC ಅಪ್‌ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಎಚ್ಚರವಿರುವಂತೆ RBI ಎಚ್ಚರಿಕೆ
  • ಯಾವುದೇ ಕಾರಣಕ್ಕೂ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳದಂತೆ RBIನಿಂದ ಖಡಕ್‌ ಸೂಚನೆ
ಸೈಬರ್ ವಂಚನೆ: ಬ್ಯಾಂಕ್‌ ಖಾತೆ ಹೊಂದಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಆರ್‌ಬಿಐ! title=
KYC ವಂಚನೆಗಳು

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಸೈಬರ್ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. KYC ಅಪ್‌ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಎಚ್ಚರವಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಯಾವುದೇ ವ್ಯಕ್ತಿ ಇಂತಹ ವಂಚನೆಗೆ ಬಲಿಯಾದರೆ, ತಕ್ಷಣವೇ ಸೈಬರ್ ಕ್ರೈಮ್ ಸಹಾಯವಾಣಿ (1930) ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ( www.cybercrime.gov.in ) ನಲ್ಲಿ ದೂರು ದಾಖಲಿಸಬೇಕೆಂದು ಆರ್‌ಬಿಐ ಹೇಳಿದೆ. ಇದರೊಂದಿಗೆ ಆರ್‌ಬಿಐ ಕೂಡ ಕೆಲವು ಮುನ್ನೆಚ್ಚರಿಕೆಗಳನ್ನು ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಆರ್‌ಬಿಐ ಇಂತಹ ಎಚ್ಚರಿಕೆ ನೀಡಿರುವುದು ಇದು ೨ನೇ ಬಾರಿ. 2021ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ KYC ವಂಚನೆ ಪ್ರಕರಣಗಳು ಹೆಚ್ಚಾದ ನಂತರ RBI ಒಂದು ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಆ ಸಮಯದಲ್ಲಿ ಆರ್‌ಬಿಐ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಿತ್ತು.  KYC ವಂಚನೆಯ ಪ್ರಕರಣಗಳಲ್ಲಿ ವಂಚಕರು ಸಾಮಾನ್ಯವಾಗಿ ವೈಯಕ್ತಿಕ ವಿವರಗಳು, ಖಾತೆ/ಲಾಗಿನ್ ಮಾಹಿತಿ, ಕಾರ್ಡ್ ವಿವರಗಳು, PIN ಅಥವಾ OTPಯನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲು ಕರೆಗಳು, texts ಅಥವಾ ಇಮೇಲ್‌ಗಳನ್ನು ಬಳಸುತ್ತಾರೆ ಎಂದು RBI ಹೇಳಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೂ Voter ID Card Correction ಮಾಡಿಸಬೇಕೆ ? ಇಲ್ಲಿದೆ ಆನ್‌ಲೈನ್ ಪ್ರಕ್ರಿಯೆಯ ಹಂತ ಹಂತದ ವಿವರ

ಸಂದೇಶಗಳ ಮೂಲಕ ಕಳುಹಿಸಲಾದ ಲಿಂಕ್‌ಗಳನ್ನು ಬಳಸಿಕೊಂಡು KYC ನವೀಕರಣಕ್ಕಾಗಿ ಅನಧಿಕೃತ/ಪರಿಶೀಲಿಸದ ಅಪ್ಲಿಕೇಶನ್‌ಗಳನ್ನು install ಮಾಡುವಂತೆ ವಂಚಕರು ಗ್ರಾಹಕರನ್ನು ಕೇಳುತ್ತಾರೆ. ವಂಚಕರು ಖಾತೆಯನ್ನು ಫ್ರೀಜ್ ಮಾಡಲು, ನಿರ್ಬಂಧಿಸಲು ಅಥವಾ ಕ್ಲೋಸ್‌ ಮಾಡುವ ಬೆದರಿಕೆ ಹಾಕಬಹುದು. ಗ್ರಾಹಕರು ಇಂತಹ ಮಾಹಿತಿಯನ್ನು ಹಂಚಿಕೊಂಡರೆ ವಂಚಕರು ನಿಮ್ಮ ಖಾತೆಯನ್ನು ಹ್ಯಾಕ್‌ ಮಾಡಬಹುದು. "ಇಂತಹ ಸಂವಹನಗಳನ್ನು ಸಾಮಾನ್ಯವಾಗಿ ತಪ್ಪು ತುರ್ತು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರು ಅನುಸರಿಸದಿದ್ದರೆ ಖಾತೆಯನ್ನು ಫ್ರೀಜ್ / ನಿರ್ಬಂಧಿಸಲು / ಮುಚ್ಚಲು ಬೆದರಿಕೆ ಹಾಕುತ್ತಾರೆ" ಎಂದು RBI ಹೇಳಿದೆ. "ಗ್ರಾಹಕರು ವೈಯಕ್ತಿಕ ಅಥವಾ ಲಾಗಿನ್ ವಿವರಗಳನ್ನು ಹಂಚಿಕೊಂಡಾಗ, ವಂಚಕರು ನಿಮ್ಮ ಖಾತೆಗಳನ್ನು ಹ್ಯಾಕ್‌ ಮಾಡಿ ಮೋಸದ ಚಟುವಟಿಕೆಗಳನ್ನು ನಡೆಸಬಹುದು". 

ಮುನ್ನಚ್ಚರಿಕೆಗಳು

1. ಫೋನ್, ಇಮೇಲ್ ಅಥವಾ SMS ಮೂಲಕ KYC ಅಪ್‌ಡೇಟ್‌ಗಾಗಿ ವೈಯಕ್ತಿಕ ಮಾಹಿತಿ ಕೇಳಲು ಬ್ಯಾಂಕ್ ಎಂದಿಗೂ ನೇರವಾಗಿ ಸಂಪರ್ಕಿಸುವುದಿಲ್ಲ. 
2. KYC ನವೀಕರಣಕ್ಕಾಗಿ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ.
3. ನಿಮ್ಮ ಪಿನ್, ಒಟಿಪಿ, ಯುಪಿಐ ಪಿನ್ ಅಥವಾ ಇತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
4. ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ನೇರವಾಗಿ ನಿಮ್ಮ ಬ್ಯಾಂಕ್‌ಗೆ ವರದಿ ಮಾಡಿ.

ಹೇಗೆ ದೂರು ನೀಡಬೇಕು?

1. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ( www.cybercrime.gov.in )ಗೆ ಭೇಟಿ ನೀಡಿ.
2. ಸೈಬರ್ ಅಪರಾಧ ಸಹಾಯವಾಣಿ(1930)ಗೆ ಕರೆ ಮಾಡಿ.

ಇದನ್ನೂ ಓದಿ: ಕೆ.ಜಿ ಅಕ್ಕಿಗೆ ಕೇವಲ 29 ರೂಪಾಯಿ ! ಈ ದಿನದಿಂದ Bharat Rice ಮಾರಾಟ ಆರಂಭ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News