ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ : ತರಕಾರಿ ಬೆಲೆ ಕೇಳಿ ಬೆಸ್ತು ಬೀಳುವ ಸ್ಥಿತಿ

ರಾಜ್ಯ ರಾಜಾಧಾನಿಯಲ್ಲಿ ದಿನದಿಂದ‌ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಸಾವಿರಾರು ರೂಪಾಯಿ ಕೊಟ್ಟು ನೀರು ಖರೀದಿಸಿದಂತಹ ಸಿಲಿಕಾನ್‌ ಸಿಟಿ ಮಂದಿ ಇನ್ಮುಂದೆ ದುಬಾರಿ ಹಣ ಕೊಟ್ಟು ತರಕಾರಿಗಳನ್ನ ಖರೀದಿಸುವಂತಾಗಿದೆ. 

Written by - Bhavya Sunil Bangera | Last Updated : Apr 6, 2024, 03:55 PM IST
  • ರಾಜ್ಯ ರಾಜಾಧಾನಿಯಲ್ಲಿ ದಿನದಿಂದ‌ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ
  • ಬೆಂಗಳೂರಿನ ಜನ ಮೊದಲೇ ನೀರಿಲ್ಲದೇ ರೋಸಿ ಹೋಗ್ತಾ ಇದ್ದಾರೆ.
  • ಇನ್ಮುಂದೆ ದುಬಾರಿ ಹಣ ಕೊಟ್ಟು ತರಕಾರಿಗಳನ್ನ ಖರೀದಿಸುವಂತಾಗಿದೆ.
ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ : ತರಕಾರಿ ಬೆಲೆ ಕೇಳಿ ಬೆಸ್ತು ಬೀಳುವ ಸ್ಥಿತಿ  title=

ಬೆಂಗಳೂರು :ರಾಜಾಧಾನಿಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿ ಹೋಗಿದೆ.ಹೀಗಾಗಿ ಈ ಬೇಸಿಗೆಯಲ್ಲಿ ಸಿಟಿಗೆ ತರಕಾರಿಗಳು ಬರುವುದೇ ಕಡಿಮೆಯಾಗಿ ಹೋಗಿದ್ದು, ತರಕಾರಿಗಳ‌ ಬೆಲೆ ಸದ್ಯ ಗಗನಕ್ಕೆ ಏರಿದೆ.ಗ್ರಾಹಕರು ಬೆಲೆ ಕೇಳಿ ಸುಸ್ತಾಗುವಂತಾಗಿದೆ.  

ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ  : 
ರಾಜ್ಯ ರಾಜಾಧಾನಿಯಲ್ಲಿ ದಿನದಿಂದ‌ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ.  ಇದರಿಂದ‌ ಬೆಂಗಳೂರಿನ ಜನ ಮೊದಲೇ ನೀರಿಲ್ಲದೇ ರೋಸಿ ಹೋಗ್ತಾ ಇದ್ದಾರೆ. ಹೀಗಾಗಿ ಸಾವಿರಾರು ರೂಪಾಯಿ ಕೊಟ್ಟು ನೀರು ಖರೀದಿಸಿದಂತಹ ಸಿಲಿಕಾನ್‌ ಸಿಟಿ ಮಂದಿ ಇನ್ಮುಂದೆ ದುಬಾರಿ ಹಣ ಕೊಟ್ಟು ತರಕಾರಿಗಳನ್ನ ಖರೀದಿಸುವಂತಾಗಿದೆ.

ಇದನ್ನೂ ಓದಿ : ಜನನ ನೋಂದಣಿ ಮಾಡುವಾಗ ಈ ಮಾಹಿತಿ ನೀಡಲೇ ಬೇಕು! ಆಧಾರ್, ವೋಟರ್ ಐಡಿ, ರೇಶನ್ ಎಲ್ಲದಕ್ಕೂ Birth Registration ಆಧಾರ

ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಬಿಸಿಲಿನ ಪ್ರಮಾಣ:  
ಬಿಸಿಲು ಹೆಚ್ಚಾದಂತೆ ತರಕಾರಿಗಳ ಬೆಲೆ ಕೂಡಾ ಏರಿಕೆಯಾಗಿದೆ. ಬೀನ್ಸ್,ಬದನೆ, ಸೊಪ್ಪು, ಮೆಣಸಿನಕಾಯಿ ಏರಿಕೆ ಬೆಲೆ ಡಬಲ್ ಆಗಿದೆ. ಬಿಸಿಲು ಜಾಸ್ತಿಯಾಗಿರುವುದರಿಂದ ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆಹಣ್ಣುಗಳಿಗೂ ಬೆಲೆಯು ಏರಿಕೆಯಾಗಿದೆ. ಇದಲ್ಲದೇ ಸೊಪ್ಪುಗಳ ಬೆಲೆಯು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ‌ ಬಿಸಿಲು ಹೆಚ್ಚಾದರೆ,ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯಾತೆ ಇದೆ.

ಸದ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ‌ ತರಕಾರಿಗಳು ಬರುತ್ತಿವೆ. ಆದರೆ ಬೇಡಿಕೆಗೆ ತಕ್ಕಷ್ಟು ತರಕಾರಿಗಳು ಬರುತ್ತಿಲ್ಲ. ಬಿಸಿಲಲ್ಲಿ ತರಕಾರಿಗಳನ್ನು ರಕ್ಷಿಸುವುದು ಕೂಡಾ ಕಷ್ಟವಾಗಿ‌ ಹೋಗಿದೆ ಅನ್ನುವುದು ವ್ಯಾಪಾರಸ್ಥರ ತಲೆ ನೋವು. ಸದ್ಯ ತರಕಾರಿಗಳ ಬೆಲೆ  ಎಷ್ಟಿದೆ ನೋಡೋಣ. 

ತರಕಾರಿ‌ ಇಂದಿನ ಬೆಲೆ ಹಿಂದಿನ‌ ಬೆಲೆ 
 
ಬೀನ್ಸ್   60    80 
 
ಮೂಲಂಗಿ  35  25
ಬದನೆಕಾಯಿ 40 35
ಊಟಿ  ಕ್ಯಾರೆಟ್ 100 60
ಹಾಗಲಕಾಯಿ  60 45
ಈರುಳ್ಳಿ 25 20
ಬಿಟ್ರೋಟ್ 45 40
ನವಿಲುಕೋಸು 35 25
ಬೆಂಡೆಕಾಯಿ 40 35
ಬೆಳ್ಳುಳ್ಳಿ  160 300
ಅಲೂಗಡ್ಡೆ 30 25
ಹೀರೆಕಾಯಿ  40 35
ಟೋಮಾಟೋ  25 20
ಮೆಣಸಿನಕಾಯಿ  60 45
ಕೊತ್ತಂಬರಿ 30 20
ಕ್ಯಾಪ್ಸಿಕಮ್ 40 20
ನುಗ್ಗೆಕಾಯಿ 80 60

ಇದನ್ನೂ ಓದಿ RBI MPC: ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯ: ಆರ್‌ಬಿಐ ಗವರ್ನರ್ ಹೇಳಿದ್ದೇನು?

ಎಲ್ಲಾ ವಸ್ತುಗಳ ಬೆಲೆ ‌ಏರಿಕೆಯಿಂದ ಜನ ಮೊದಲೇ ತತ್ತರಿಸಿ ಹೋಗಿದ್ದಾರೆ. ಈ ನಡುವೆ, ತರಕಾರಿಗಳ‌ ಬೆಲೆ‌ ಏರಿಕೆ‌ಯಾಗಿರುವುದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .

Trending News