ಇತ್ತ ಬ್ರಿಟನ್ ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ನೇಮಕವಾಗುತ್ತಿದ್ದಂತೆ ಒಂದೆಡೆ ಅವರಿಗೆ ಭಾರತೀಯರಿಂದ ಪ್ರಶಂಸೆಯ ಸುರುಮಳೆ ಹರಿದು ಬರಿತ್ತಿದ್ದರೆ ಇನ್ನೊಂದೆಡೆಗೆ ಈಗ ಅವರ ಮೂಲದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
NRI ಕೋಟಾದ ಸೀಟುಗಳಿಗೆ ವಾರ್ಷಿಕವಾಗಿ US ಡಾಲರ್ 50,000 ರಿಂದ 60,000 (41 ಲಕ್ಷದಿಂದ 49 ಲಕ್ಷ) ವೆಚ್ಚವಾಗುತ್ತದೆ. ಇದು ಸಾಮಾನ್ಯ ವರ್ಗದ ಸೀಟುಗಳ ಬೆಲೆಗೆ ಹೋಲಿಸಿದರೆ (ವರ್ಷಕ್ಕೆ Rs 18 ಲಕ್ಷದಿಂದ Rs 26 ಲಕ್ಷದ ನಡುವೆ) ಸಾಕಷ್ಟು ದುಬಾರಿಯಾಗಿದೆ.
ಕೋವಿಡ್ ವೀಸಾ ನಿರ್ಬಂಧಗಳಿಂದಾಗಿ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಾಗಿ ವೈದ್ಯಕೀಯ ಶಿಕ್ಷಣವನ್ನು ಓದುತ್ತಿದ್ದವರು, ಮನೆಯಲ್ಲಿಯೇ ಉಳಿಯುವಂತಾಗಿದೆ ಎಂದು ವರದಿಯಾಗಿದೆ. ಇದೀಗ ಚೀನಾ ತಮ್ಮ ಚೀನೀ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ ಅನುಮತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮರು ಪ್ರಾರಂಭಿಸಲು ವೀಸಾಗಳನ್ನು ನೀಡಲು ಪ್ರಾರಂಭಿಸಿದೆ.
ಮೃತರಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಮತ್ತೊಬ್ಬರು ಹಿಂದೂ. ಲೋಪವನ್ನು ಪತ್ತೆಹಚ್ಚುವ ಮೊದಲು, ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ದೇಹವನ್ನು ಈಗಾಗಲೇ ಅಂತ್ಯಸಂಸ್ಕಾರ ಮಾಡಲಾಗಿದೆ.
ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಆಕೆಯ ಪೋಷಕರಾದ 27 ವರ್ಷದ ಜಸ್ಲೀನ್ ಕೌರ್ ಮತ್ತು 36 ವರ್ಷದ ಜಸ್ದೀಪ್ ಸಿಂಗ್ ಸೋಮವಾರ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಕಿಡ್ನಾಪ್ ಆಗಿದ್ದರು. ಮರ್ಸಿಡ್ ಕೌಂಟಿ ಪೊಲೀಸರ ಪ್ರಕಾರ ಮಗುವಿನ ಚಿಕ್ಕಪ್ಪ 39 ವರ್ಷದ ಅಮನ್ದೀಪ್ ಸಿಂಗ್ ಅವರನ್ನು ಸಹ ಅಪಹರಿಸಿದ್ದಾರೆ.
'ಅಟ್ಲಾಸ್' ರಾಮಚಂದ್ರನ್ ಎಂದೂ ಕರೆಯಲ್ಪಡುವ ಉದ್ಯಮಿ ರಾಮಚಂದ್ರನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಉದ್ಯಮಿ ದುಬೈನಲ್ಲಿ ಸಾರ್ವಜನಿಕ ವೇದಿಕೆಗಳು ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಸಕ್ರಿಯರಾಗಿದ್ದರು. ಅನಿವಾಸಿ ಮಲಯಾಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿಜಯನ್ ತಿಳಿಸಿದ್ದಾರೆ.
NRI News: ಕೆನಡಾದಲ್ಲಿರುವ ಭಗವದ್ಗೀತಾ ಪಾರ್ಕ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಹೇಳಿಕೆ ನೀಡಿದೆ. ಕೆನಡಾ ಸರ್ಕಾರಿ ಅಧಿಕಾರಿಗಳ ಪ್ರಕಾರ ಉದ್ಯಾನವನವನ್ನು ಧ್ವಂಸಗೊಲಿಸಲಾಗಿಲ್ಲ ಎಂದಿದ್ದು, ದುರುಸ್ತಿ ಸಮಯದಲ್ಲಿ ಖಾಲಿ ಜಾಗ ಬಿಡಲಾಗಿದೆ ಎಂದು ಹೇಳಿದ್ದಾರೆ. ಈ ಘಟನೆಗೆ ಬಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕ್ದ್ರಮಕ್ಕೆ ಆಗ್ರಹಿಸಿತ್ತು.
NRI News: ಕೆನಡಾದ ಬ್ರಾಂಪ್ಟನ್ ನಲ್ಲಿರುವ 'ಶ್ರೀ ಭಗವದ್ಗೀತಾ ಪಾರ್ಕ್' ಅನ್ನು ಗುರಿಯಾಗಿಸಲಾಗಿದೆ. ಸ್ಥಳೀಯ ಮೇಯರ್ ಆಗಿರುವ ಪ್ಯಾಟ್ರಿಕ್ ಬ್ರೌನ್ ಟ್ವೀಟ್ ಮಾಡುವ ಮೂಲಕ ಈ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಈ ಘಟನೆಯ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಬುಧವಾರ ಮರುನಾಮಕರಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮುದಾಯದ ಉನ್ನತಿಗಾಗಿ ಸ್ಥಳೀಯ ಹಿಂದೂಗಳು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಉದ್ಯಾನವನಕ್ಕೆ ‘ಶ್ರೀ ಭಗವದ್ಗೀತೆ’ ಎಂದು ಹೆಸರಿಡಲಾಗಿದೆ ಎಂದು ವಿವರಿಸಿದರು.
Schengen Visa: ರಾಷ್ಟ್ರೀಯ ವೀಸಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜರ್ಮನಿಗೆ ಪ್ರವೇಶಿಸಲು ಅನುಮತಿಯನ್ನು ನೀಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು, ಮತ್ತು 90 ದಿನಗಳಿಗಿಂತ ಹೆಚ್ಚು ಕಾಲದ ಅವಧಿಗಾಗಿ ಇದನ್ನು ನೀಡಲಾಗುತ್ತದೆ.
NRI News: ಯುನೈಟೆಡ್ ಸ್ಟೇಟ್ಸ್ ಮುಂದಿನ ಕೆಲವು ವಾರಗಳಲ್ಲಿ H ಮತ್ತು L ವರ್ಕರ್ ವೀಸಾಗಳಿಗಾಗಿ ಅದರಲ್ಲಿಯೂ ವಿಶೇಷವಾಗಿ ಡ್ರಾಪ್ ಬಾಕ್ಸ್ ಪ್ರಕರಣಗಳಿಗಾಗಿ 100,000 ಸ್ಲಾಟ್ಗಳನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಇದು ವಿಶೇಷವಾಗಿರಲಿದೆ.
NRI News: H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.
Dollar Vs Rupees: ಸೆಪ್ಟೆಂಬರ್ 2013 ರಲ್ಲಿ, ಅಂದಿನ RBI ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಫಾರೆಕ್ಸ್ ರಿಸರ್ವ್ ಹೆಚ್ಚಿಸಲು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದರು. ಈ ಕ್ರಮಗಳ ಕಾರಣ ಭಾರತಕ್ಕೆ $34 ಬಿಲಿಯನ್ ಫಾರೆಕ್ಸ್ ರಿಸರ್ವ್ ಹರಿದುಬಂದಿತ್ತು.
Oversea Education: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ ಕುಸಿದಿದೆ. ಬುಧವಾರ ರೂಪಾಯಿ ಮೌಲ್ಯ ಅಮೇರಿಕಾ ವಿರುದ್ಧ ತನ್ನ ಕನಿಷ್ಠ ಮಟ್ಟವಾದ 81.90ಕ್ಕೆ ತಲುಪಿದೆ. ದಿನದ ಅವಧಿಯಲ್ಲಿ ಅದು ಮೊಟ್ಟಮೊದಲ ಬಾರಿಗೆ 82ಕ್ಕಿಂತ ಕೆಳಕ್ಕೆ ಜಾರಿತ್ತು.
Foreign Education: ಶೇ.83ರಷ್ಟು ಭಾರತೀಯ ವಿದ್ಯಾರ್ಥಿಗಳು ಸಾಗರೋತ್ತರ ಪದವಿಯು ಉದ್ಯೋಗ ಪಡೆಯುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ನಂಬುತ್ತಾರೆ ಎಂದು ವರದಿ ಹೇಳಿದೆ. ಇನ್ನೊಂದೆಡೆ ಶೇ.42 ರಷ್ಟು ಭಾರತೀಯ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನು ತಮ್ಮ ಮೊದಲ ಭಾಷೆಯಾಗಿ ಹೊಂದಿರದ ಆಂಗ್ಲೋಫೋನ್ ದೇಶಗಳನ್ನು ಮೀರಿದ ಸ್ಥಳಗಳಿಗೆ ಹೋಗಲು ಬಯಸುತ್ತಾರೆ ಎಂದು ವರದಿಯ ಹೇಳಿಕೆಯೊಂದು ತಿಳಿಸಿದೆ.
Labour Shortage In UK: ಕಾರ್ಮಿಕ ಕೊರತೆ ಎದುರಿಸುತ್ತಿರುವ ವಲಯಗಳಲ್ಲಿನ 'ಕೊರತೆ ಉದ್ಯೋಗ ಪಟ್ಟಿ'ಗೆ ಬದಲಾವಣೆಯನ್ನು ತರುವ ಮೂಲಕ ಬ್ರಿಟಿಷ್ ಪ್ರಧಾನಿ ನಮ್ಮ ಕೆಲ ವಲಸೆ ವಿರೋಧಿ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ತಕ್ಕ ಉತ್ತರ ನೀಡಲು ಲೀಜ್ ಸಜ್ಜಾಗಿದ್ದಾರೆ ಎನ್ನಲಾಗಿದೆ. ಲೀಜ್ ಅವರ ಈ ಕ್ರಮ ಕೆಲವು ಕೈಗಾರಿಗೆಗಳಿಗೆ ವಿದೇಶಗಳಿಂದ ಬ್ರಾಡ್ ಬ್ಯಾಂಡ್ ಗಳಂತಹ ಹೆಚ್ಚುವರಿ ಸಿಬ್ಬಂದಿಯನ್ನು ಕರೆತರಲು ಅನುವು ಮಾಡಿಕೊಡಲಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
Canada Travel: ಕೆನಡಾಗೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ ಅಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ವಿದೇಶಾಂಗ ಸಚಿವಾಲಯ ಅಲರ್ಟ್ ಜಾರಿಗೊಳಿಸಿದೆ. ವಿಶೇಷ ಅಡ್ವೈಸರಿ ಜಾರಿಗೊಳಿಸಿರುವ ವಿದೇಶಾಂಗ ಸಚಿವಾಲಯ ಜನರು ಎಚ್ಚರದಿಂದ ಇರಲು ಸೂಚಿಸಿದೆ.
Study Abroad: ಅರ್ಥಾತ್ ನವೆಂಬರ್ 1 ರಿಂದ ನಿಮ್ಮ ವಿಸಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ APS ಪ್ರಮಾಣ ಪತ್ರ ಪಡೆದುಕೊಳ್ಳುವುದು ಅನಿವಾರ್ಯದ ಭಾಗವಾಗಿರಲಿದೆ ಎಂದು ಭಾರತದಲ್ಲಿನ ಜರ್ಮನ್ ಮಿಷನ್ಸ್ ಹೇಳಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಜರ್ಮನಿಗೆ ತೆರಳ ಬಯಸುವ ಆಕಾಂಕ್ಷಿಗಳಿವೆ ವಿಸಾ ಅರ್ಜಿ ಭರ್ತಿ ಮಾಡುವ ಮುನ್ನ ಎಪಿಎಸ್ ಪ್ರಮಾಣಪತ್ರ ಹೊಂದಿರಬೇಕು. ಅಕ್ಟೋಬರ್ 1, 2022 ರಿಂದ ಅಪ್ಲಿಕೇಶನ್ ಗಳಿಗೆ APS ತೆರೆದುಕೊಳ್ಳಲಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.