ಅಸಮಾಧಾನಿತ ನಾಯಕರೊಂದಿಗೆ ಇಬ್ರಾಹಿಂ ಮಹತ್ವದ ಸಭೆ ಜೆಡಿಎಸ್ ಚಿಂತನ ಮಂಥನ ಹೆಸರಿನಲ್ಲಿ ನಡೆಯುತ್ತಿರುವ ಚರ್ಚೆ ಸಭೆಯ ಸ್ಥಳದಲ್ಲಿರುವ ಫ್ಲೆಕ್ಸ್ನಲ್ಲಿ ಕುಮಾರಸ್ವಾಮಿ ಫೋಟೋ ಇಲ್ಲ ವೇದಿಕೆ ಮೇಲಿರುವ ಬ್ಯಾನರ್ನಲ್ಲೂ HDK ಪೋಟೋಗೆ ಜಾಗವಿಲ್ಲ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ JDS ಅಸಮಾಧಾನಿತರ ಸಭೆ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಸಿಎಂ ಇಬ್ರಾಹಿಂ ಅಸಮಾಧಾನ
ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ. ಮಾನ ಮಾರ್ಯಾದೆ ಇಲ್ಲದೆ, ಅದನ್ನ ಪಾಲಿಸಬೇಕಲ್ಲ. ಅವರಿಂದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾ ನಾನು.!? ಆ ಪಾಪದ ಹಣ ತಗೊಂಡು ವಿದೇಶಕ್ಕೆ ನಾನ್ ಹೋಗಬೇಕಾ.? ದೇವನಹಳ್ಳಿ ಏರ್ಪೋರ್ಟ್ನಲ್ಲಿ ಕುಮಾರಸ್ವಾಮಿ ಹೇಳಿಕೆ.
ರಾಜ್ಯದ ಜನತೆಗೆ ಜೆಡಿಎಸ್ ಭರವಸೆ ಪತ್ರ ಬಿಡುಗಡೆಮಾಡಿದ್ದು, ಇದರ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜೀ ಕನ್ನಡ ನ್ಯೂಸ್ ಜೊತೆ ಮಾತಾನಾಡಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಕುಮಾರಸ್ವಾಮಿಯೇ ಸಿಎಂ ಆಗೋದು. ಬೇರೆ ಯಾವ ಪಕ್ಷ ಕೂಡ ಬರಲ್ಲವೆಂದು ಹೇಳಿದ್ರು.
ಕುಮಾರಸ್ವಾಮಿ ಆರೋಪಕ್ಕೆ ಸಿಟಿ ರವಿ ತಿರುಗೇಟು. ಕುಮಾರಸ್ವಾಮಿ ಆರೋಗ್ಯದ ಕಡೆ ಗಮನ ಹರಿಸಲಿ. ಈಗ ಯಾರ್ ಬಗ್ಗೆ ಏನ್ ಹೇಳ್ತಾರೆ ಅಂತಾ ಗೊತ್ತಿಲ್ಲ. ಅವರಿಗೆ ಮನೆ ರಾಜಕಾರಣ ಟೆನ್ಷನ್ ಇರಬಹುದು ಎಂದು ಬೆಂಗಳೂರಿನಲ್ಲಿ HDK ವಿರುದ್ಧ ಸಿಟಿ ರವಿ ವ್ಯಂಗ್ಯ.
ಪೇಶ್ವೆಗಳ ಡಿಎನ್ ಎ ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಬಿಜೆಪಿಯವರು ಹುನ್ನಾರ ಮಾಡಿದ್ದಾರೆ ಅಂತ ಹೇಳಿದ್ದೇನೆ. ಇದಕ್ಕೆ ಗಾಬರಿ ಯಾಕೆ? ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಎಂದು ಎಂದು ಸ್ಪಷ್ಟ ಮಾತುಗಳಲ್ಲಿ ಕುಮಾರಸ್ವಾಮಿ ಹೇಳಿದರು.
ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗ್ತೀದಿನಿ. ಪಂಚ ರತ್ನ ಕ್ಕೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಜನೇವರಿ 3 ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗತ್ತೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.