Budh Gochar: ಅಕ್ಷಯ ತೃತೀಯದಂದು ಗೋಧೂಳಿ ಸಮಯದಲ್ಲಿ ತೆರೆಯಲಿದೆ ಈ ರಾಶಿಯವರ ಭಾಗ್ಯದ ಬಾಗಿಲು

Budh Gochar On Akshaya Trithiya: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಬುದ್ಧಿವಂತಿಕೆ, ತರ್ಕ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧ ರಾಶಿ ಬದಲಾವಣೆ ಮಾಡಲಿದ್ದಾನೆ. ಅಕ್ಷಯ ತೃತೀಯ ದಿನದಂದು ಬುಧ ರಾಶಿ ಪರಿವರ್ತನೆ ಹೊಂದಲಿದ್ದು, ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 10, 2024, 03:20 PM IST
  • ಅಕ್ಷಯ ತೃತೀಯದಂದು ಗೋಧೂಳಿ ಸಮಯದಲ್ಲಿ ಬುಧ ರಾಶಿ ಬದಲಾವಣೆ
  • ಬುಧ ಗೋಚಾರದಿಂದ ಕೆಲ ರಾಶಿಯವರ ಅದೃಷ್ಟವೂ ಬದಲು
  • ಅಕ್ಷಯ ತೃತೀಯದಂದು ಬುಧ ಸಂಚಾರ ಯಾವ ರಾಶಿಯವರಿಗೆ ಶುಭ ತಿಳಿಯಿರಿ
Budh Gochar: ಅಕ್ಷಯ ತೃತೀಯದಂದು ಗೋಧೂಳಿ ಸಮಯದಲ್ಲಿ ತೆರೆಯಲಿದೆ ಈ ರಾಶಿಯವರ ಭಾಗ್ಯದ ಬಾಗಿಲು  title=

Budh Rashi Parivartane: ಪ್ರಸ್ತುತ ಮೀನ ರಾಶಿಯಲ್ಲಿರುವ ಬುಧ ಇಂದು ಅಕ್ಷಯ ತೃತೀಯದ ದಿನ ಸಂಜೆ 06:39 ಕ್ಕೆ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಅಕ್ಷಯ ತೃತೀಯದಂದು ಗೋಧೂಳಿ ಸಮಯದಲ್ಲಿ ಬುದ್ಧಿವಂತಿಕೆ, ತರ್ಕ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧ ರಾಶಿ ಬದಲಾವಣೆಯು ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು, ಅವರ ಜೀವನದಲ್ಲಿ ಸುಖ-ಸೌಕರ್ಯಗಳನ್ನು ಹೆಚ್ಚಿಸಲಿದ್ದಾನೆ. ವೃತ್ತಿ ಬದುಕಿನಲ್ಲಿ ಅಪಾರ ಯಶಸ್ಸು, ಕೀರ್ತಿಯ ಜೊತೆಗೆ ಖಜಾನೆಯನ್ನೂ ತುಂಬಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಇಂದು ಸಂಜೆಯಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ, ತುಂಬಲಿದೆ ಖಜಾನೆ: 
ಮೇಷ ರಾಶಿ: 

ಸ್ವ ರಾಶಿಯಲ್ಲಿ ಬುಧನ ಸಂಚಾರವು (Budh Gochar) ಮೇಷ ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು ಕೀರ್ತಿಯನು ಕಾಣಬಹುದು. ಹಣಕಾಸಿನ ಹರಿವು ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. 

ಮಿಥುನ ರಾಶಿ: 
ಅಕ್ಷಯ ತೃತೀಯದಂದು ಬುಧ ರಾಶಿ ಬದಲಾವಣೆ (Budh Rashi Parivartane)ಯಿಂದ ತಾಯಿ ಲಕ್ಷ್ಮೀ ಈ ರಾಶಿಯವರ ಮೇಲೆ ವಿಶೇಷ ಕೃಪೆ ತೋರಲಿದ್ದಾಳೆ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳವಾಗಲಿದೆ. ವ್ಯಾಪಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. 

ಇದನ್ನೂ ಓದಿ- ಅಕ್ಷಯ ತೃತೀಯ ದಿನ ಈ ತಪ್ಪುಗಳಿಂದ ಶಾಶ್ವತವಾಗಿ ಕೋಪಗೊಳ್ಳುತ್ತಾಳೆ ಲಕ್ಷ್ಮಿದೇವಿ

ಸಿಂಹ ರಾಶಿ: 
ಬುಧ ರಾಶಿ ಪರಿವರ್ತನೆಯು ಸಿಂಹ ರಾಶಿಯ ಜನರಿಗೆ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀಡಲಿದೆ. ಈ ವೇಳೆ ಆದಾಯದ ಮೂಲಗಳು ಹೆಚ್ಚಾಗಿ ಹಣಕಾಸಿನ ಸಮಸ್ಯೆ ಕೊನೆಗೊಳ್ಳಲಿದೆ. ವ್ಯಾಪಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. 

ತುಲಾ ರಾಶಿ: 
ಬುಧ ರಾಶಿ ಬದಲಾವಣೆಯು ತುಲಾ ರಾಶಿಯ ಜನರಿಗೆ ವೃತಿಯಲ್ಲಿ  ವೇಗವನ್ನು ನೀಡಲಿದೆ. ಉದ್ಯೋಗ ರಂಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದೆ. ಅನಿರೀಕ್ಷಿತ ಹಣಕಾಸಿನ ಲಾಭವು ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಹೊರತರಲಿದೆ. 

ಇದನ್ನೂ ಓದಿ- Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ತುಂಬುತ್ತೆ ಖಜಾನೆ

ಮಕರ ರಾಶಿ: 
ಅಕ್ಷಯ ತೃತೀಯ ದಿನ ಬುಧ ರಾಶಿ ಬದಲಾವಣೆ ಮಕರ ರಾಶಿಯ ಜನರ ಜೀವನದಲ್ಲಿ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಉದ್ಯೋಗಸ್ಥರಿಗೆ ಬಡ್ತಿ, ವ್ಯಾಪಾರ-ವ್ಯವಹಾರದಲ್ಲಿ ಅನಿರೀಕ್ಷಿತ ಲಾಭಗಳು ನಿಮ್ಮ ಖಜಾನೆಯನ್ನು ತುಂಬಲಿವೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News