ರಾಜ್ಯದಲ್ಲಿ JN.1 ವೈರಸ್‌ನ ಆತಂಕ : ಸೋಂಕು ತಡೆಗೆ T3 ಸೂತ್ರ ಪಾಲಿಸೋದಕ್ಕೆ ಮುಂದಾದ ಆರೋಗ್ಯ ಇಲಾಖೆ

 ರಾಜ್ಯದಲ್ಲಿ JN.1 ವೈರಸ್‌ನ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಆರೋಗ್ಯ ಇಲಾಖೆ  T3 ಸೂತ್ರ ಪಾಲಿಸುವುದಕ್ಕೆ ಮುಂದಾಗಿದೆ. T3 ಎಂದರೆ, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‌ಮೆಂಟ್. 

Written by - Ranjitha R K | Last Updated : Dec 27, 2023, 10:08 AM IST
  • ರಾಜ್ಯದಲ್ಲಿ JN.1 ವೈರಸ್‌ನ ಆತಂಕ ಹೆಚ್ಚಾಗಿದೆ.
  • 34 ಒಮಿಕ್ರಾನ್‌ನ ಉಪತಳಿಯ ಪ್ರಕರಣ ಪತ್ತೆ
  • ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ
ರಾಜ್ಯದಲ್ಲಿ JN.1 ವೈರಸ್‌ನ ಆತಂಕ : ಸೋಂಕು ತಡೆಗೆ T3 ಸೂತ್ರ ಪಾಲಿಸೋದಕ್ಕೆ ಮುಂದಾದ ಆರೋಗ್ಯ ಇಲಾಖೆ title=

ಬೆಂಗಳೂರು : ರಾಜ್ಯದಲ್ಲಿ JN.1 ವೈರಸ್‌ನ ಆತಂಕ ಹೆಚ್ಚಾಗಿದೆ. ಇದುವರೆಗೂ 34 ಒಮಿಕ್ರಾನ್‌ನ ಉಪತಳಿಯ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಅಲರ್ಟ್ ಜಾರಿ ಮಾಡಲಾಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕು ಆಗಿರುವ ಕಾರಣ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

T3 ಸೂತ್ರಕ್ಕೆ ಮುಂದಾದ ಇಲಾಖೆ : 
 ರಾಜ್ಯದಲ್ಲಿ JN.1 ವೈರಸ್‌ನ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ  ಆರೋಗ್ಯ ಇಲಾಖೆ  T3 ಸೂತ್ರ ಪಾಲಿಸುವುದಕ್ಕೆ ಮುಂದಾಗಿದೆ. T3 ಎಂದರೆ, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‌ಮೆಂಟ್. ಈ ಮೂರು ಅಂಶಗಳನ್ನಿಟ್ಟುಕೊಂಡು JN.1 ತಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. T3 ಸೂತ್ರದಿಂದ ಹೆಚ್ಚು ವೈರಸ್ ಹರಡದಂತೆ ತಡೆಯಬಹುದು ಎನ್ನುವ ಲೆಕ್ಕಾಚಾರದಲ್ಲಿ ರಾಜ್ಯ ಆರೋಗ್ಯ ಇಲಾಖೆ. 

ಇದನ್ನೂ ಓದಿ : ಬಿಜೆಪಿ 40% ಕಮಿಷನ್ ಸರ್ಕಾರವೆಂಬ ಆರೋಪಕ್ಕೆ ಯತ್ನಾಳ್ ಸಾಕ್ಷಿ ಒದಗಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ಮುಂಜಾಗೃತ ಕ್ರಮವಾಗಿ ಪ್ಲ್ಯಾನ್: 
ಈ ಹಿಂದೆ ಕೋವಿಡ್ ಸಮಯದಲ್ಲೂ ಇದೇ ಸೂತ್ರದ ಮೂಲಕ ಕೇಸ್‌ಗಳನ್ನು ಪತ್ತೆಹಚ್ಚಲಾಗಿತ್ತು. ಈ ಮೂಲಕ ಸೋಂಕು ಕಾಣಿಸಿಕೊಂಡರೆ ಅತಿವೇಗವಾಗಿ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಮಯದಲ್ಲೂ ಈ ಸೂತ್ರ ಜಾರಿಗೆ ತರಲಾಗಿತ್ತು. ಇದೀಗ ಮುಂಜಾಗೃತ ಕ್ರಮವಾಗಿ ಆರಂಭದಲ್ಲೇ ಈ ಸೂತ್ರಕ್ಕೆ ಪ್ಲ್ಯಾನ್ ಮಾಡಲಾಗಿದೆ. 

60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ : 
ಇನ್ನು ರಾಜ್ಯದಲ್ಲಿ ಜೆನ್1 ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ  ಆರೋಗ್ಯ ಇಲಾಖೆ ಮುಂಜಾಗೃತ ಕ್ರಮಕ್ಕೆ ಮುಂದಾಗಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮೂರನೇ ಲಸಿಕೆ ಹಾಕಿಸಿಕೊಳ್ಳದೇ ಇರುವ ವೃದ್ಧರು ಕೂಡಲೇ  ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಲಾಗಿದೆ. 

ಇದನ್ನೂ ಓದಿ : ಹೊಸ ವರ್ಷದ ಹೊಸ್ತಿಲಲ್ಲಿ ಕೊರೊನಾ ಕಾಟ: ಕರುನಾಡಿಗೂ ಕಾಲಿಟ್ಟ JN-1 ಪ್ರಕರಣ

ಬೂಸ್ಟರ್ ಡೋಸ್  ಅಭಿಯಾನ : 
ಅರವತ್ತು ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಸೂಚನೆ
ನೀಡಲಾಗಿದೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೂಸ್ಟರ್ ಡೋಸ್ ಸಂಬಂಧ ಇನ್ನೆರಡು ದಿನದಲ್ಲಿ ಅಭಿಯಾನ ಶುರುವಾಗಲಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News