Ramayana: ರಣಬೀರ್‌ನ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಮಾಡುತ್ತಿರುವ ಖ್ಯಾತ ನಟ ಯಾರು ಗೊತ್ತೇ?

Ramayana Update: ಬಾಲಿವುಡ್‌ನ ಹೆಸರಾಂತ ನಿರ್ದೇಶಕ ಆಕ್ಷನ್‌ ಕಟ್‌ ಹೇಳುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಾರು ರಾಮನ ಸಹೋದರ ಲಕ್ಷ್ಮಣನ ಪಾತ್ರವನ್ನು ಮಾಡಲಿದ್ದಾರೆಂಬ ಅಪ್‌ಡೇಟ್‌ ರಿವೀಲ್‌ ಆಗಿದೆ. ಹಾಗಾದ್ರೆ ಆ ಪಾತ್ರವನ್ನು ನಿರ್ವಹಿಸುತ್ತಿರುವರು ಯಾರು? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Mar 21, 2024, 10:40 AM IST
  • ರಾಮನ ಪಾತ್ರವನ್ನು ರಣಬೀರ್‌ ಕಪೂರ್‌ ಮಾಡುತ್ತಿದ್ದರೇ ಸಹೋದರ ಲಕ್ಷ್ಮಣನ ಪಾತ್ರವನ್ನು ಖ್ಯಾತ ಟಿವಿ ಸೀರಿಯಲ್‌ ನಟ ರವಿ ದುಬೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗ್ತಿದೆ.
  • ಸೀತೆಯ ಪಾತ್ರವನ್ನು ಮೊದಲು ಆಲಿಯಾ ಭಟ್​ ಮಾಡುತ್ತಾರೆಂಬ ಸುದ್ದಿ ಹರಡಿದ್ದು, ಆದರೆ ಡೇಟ್ಸ್‌ ಸಮಸ್ಯೆಯಿಂದ ಈ ನಟಿ ಒಪ್ಪಿಕೊಳ್ಳಲಿಲ್ಲ.
  • ಸದ್ಯ ನಿರ್ದೇಶಕ ನಿತೇಶ್ ತಿವಾರಿ ಬಹಳ ದಿನಗಳಿಂದ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ತೊಡಗಿಸಿಕೊಂಡಿದ್ದಾರೆ.
Ramayana: ರಣಬೀರ್‌ನ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಮಾಡುತ್ತಿರುವ ಖ್ಯಾತ ನಟ ಯಾರು ಗೊತ್ತೇ? title=

Lakshmana Role In Ramayana: ಬಾಲಿವುಡ್‌ನ ಖ್ಯಾತ ಡೈರೆಕ್ಟರ್‌ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’  ಸಿನಿಮಾದ ಹೊಸ ಅಪ್‌ಡೇಟ್‌ ಹೊರಬಂದಿದೆ. ಈ ಚಿತ್ರದಲ್ಲಿ ರಾಮನ ಪಾತ್ರವನ್ನು ರಣಬೀರ್‌ ಕಪೂರ್‌ ಮಾಡುತ್ತಿದ್ದರೇ ಸಹೋದರ ಲಕ್ಷ್ಮಣನ ಪಾತ್ರವನ್ನು ಖ್ಯಾತ ಟಿವಿ ಸೀರಿಯಲ್‌ ನಟ ರವಿ ದುಬೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಸದ್ಯ ಇದರ ಬಗ್ಗೆ ನಟ ರವಿ ದುಬೆಯಾಗಲಿ ಅಥವಾ ಚಿತ್ರತಂಡವಾಗಲಿ ಯಾವುದೇ ಮಾಹಿತಿ ನೀಡಿಲ್ಲ.

ಈಗಾಗಲೇ ನಟ ರವಿ ದುಬೆ 12/24 ಕರೋಲ್ ಬಾಗ್, ಸಾಸ್ ಬಿನಾ ಸಸುರಲ್, ಪರ್ವರಿಶ್  ಅಂತಹ ಅನೇಕ ಜನಪ್ರಿಯ ಟಿವಿ ಶೋಗಳ ಮುಖಾಂತರ ಪರಿಚಯವಾಗಿದ್ದಾರೆ. ಇದೀಗ ಈ ನಟ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಲಿದ್ದಾರೆಂಬುದು ಕುತೂಹಲವಾಗಿದೆ. ಸದ್ಯ ಈ ಚಿತ್ರದ ಮುಹೂರ್ತ ಇದೇ ಏಪ್ರಿಲ್ 17 ರಾಮನವಮಿ ದಿನ ಘೋಷಣೆಯಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: 'ಅಭಿಷೇಕ್ ಬಚ್ಚನ್ ನನ್ನ ಪತಿ, ಐಶ್ವರ್ಯ ರೈ ಬಲವಂತದಿಂದ ಮದುವೆಯಾಗಿದ್ದಾಳೆ.." ಖ್ಯಾತ ನಟಿ ಆರೋಪ!!

ಇನ್ನು ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನು ಮೊದಲು ಆಲಿಯಾ ಭಟ್​ ಮಾಡುತ್ತಾರೆಂಬ ಸುದ್ದಿ ಹರಡಿದ್ದು, ಆದರೆ ಡೇಟ್ಸ್‌ ಸಮಸ್ಯೆಯಿಂದ ಈ ನಟಿ ಒಪ್ಪಿಕೊಳ್ಳಲಿಲ್ಲ. ನಂತರ ಸೌತ್ ಬ್ಯೂಟಿ ಸಾಯಿ ಪಲ್ಲವಿ ಎಂಬ ಸುದ್ದಿ ಹೊರಬಂದಿತ್ತು. ಇನ್ನೊಮ್ಮೆ ಶ್ರೀದೇವಿ ಮಗಳಿಗೆ  ಸೀತೆಯಾಗುವ ಅವಕಾಶ ಸಿಕ್ಕಿದೆ ಎನ್ನಲಾಗ್ತಿತ್ತು. ಆದರೆ ಇಬ್ಬರಲ್ಲಿ ಯಾರು ಆಯ್ಕೆಯಾಗಲಿದ್ದಾರೆಂದು ಕಾದು ನೋಡಬೇಕು.

ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಟ ರಾಕಿಭಾಯ್ ಯಶ್‌ ಮಾಡಲಿದ್ದಾರೆಂಬ ವಿಷಯ ತುಂಬಾ ದಿನಗಳಿಂದೆ ಕೇಳಿ ಬಂದಿದ್ದು, ಈ ನಟ ಜುಲೈನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ ಇದರ ಬಗ್ಗೆ ಯಶ್‌ ಆಗಲಿ ಅಥವಾ ಸಿನಿತಂಡವಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಮತ್ತೆ ಈ ಸಿನಿಮಾದಲ್ಲಿ ಹನುಮಂತನ ಪಾತ್ರವನ್ನು ಸನ್ನಿ ಡಿಯೋಲ್ ಒಪ್ಪಿಕೊಂಡಿದ್ದಾರೆ  ಎಂದು ವರದಿಯಾಗಿದ್ದು, ಆದರೆ ಇದರ ಬಗ್ಗೆಯೂ ಕೂಡ ಈ ನಟನಾಗಲಿ ಅಥವಾ ಪ್ರೊಡಕ್ಷನ್ ಹೌಸ್ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ.

ಇದನ್ನೂ ಓದಿ: ನೀತಾ ಅಂಬಾನಿ ಪ್ರತಿನಿತ್ಯ ಕುಡಿಯುವ ಒಂದು ಕಪ್‌ ಟೀ ಬೆಲೆ ಎಷ್ಟು ಲಕ್ಷ ಗೊತ್ತೇ.. ವಿಶ್ವದ ಅತ್ಯಂತ ದುಬಾರಿ ಚಹಾ ಇದು.!

ಸದ್ಯ ನಿರ್ದೇಶಕ ನಿತೇಶ್ ತಿವಾರಿ ಬಹಳ ದಿನಗಳಿಂದ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ತೊಡಗಿಸಿಕೊಂಡಿದ್ದಾರೆ. ಈ ನಿರ್ದೇಶಕನ ಕಥೆ ಹೇಳುವ ರೀತಿ ಸಂಪೂರ್ಣ ವಿಭಿನ್ನವಾಗಿದ್ದು, ಅದೇ ರೀತಿ ಈ ಸಿನಿಮಾ ಕೂಡ ಅದ್ಬುತವಾಗಿ ಮೂಡಿ ಬರಲಿದೆ. ಇನ್ನೂ ಈ ಚಿತ್ರವನ್ನು ಮಧು ಮಂಟೆನಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೇನು ಚಿತ್ರತಂಡ  ರಾಮನವಮಿಯಂದು ರಾಮಾಯಣ ಸಿನಿಮಾ ಘೋಷಣೆ ಮಾಡಲಿದ್ದು, ಡೈರೆಕ್ಟರ್‌ ನಿತೀಶ್ ತಿವಾರಿ ಈ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News