Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್‌ ನೋಡಲು ಬಂದ ಡಿವೈನ್‌ ಸ್ಟಾರ್!!‌

Rishab Shetty With Gayle: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ವರ್ಸಸ್‌ ಸಿಎಸ್‌ಕೆ ಪಂದ್ಯವನ್ನು ವೀಕ್ಷಿಸಲು ಡಿವೈನ್‌ ಸ್ಟಾರ್  ರಿಷಬ್‌ ಶೆಟ್ಟಿ ಆಗಮಿಸಿದಾಗ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ಕಂಪ್ಲೀಟ್‌ ಮಾಹಿತಿ.  

Written by - Zee Kannada News Desk | Last Updated : May 19, 2024, 11:40 AM IST
  • ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಮ್ಯಾಚ್‌ ವೀಕ್ಷಿಸಲು ಹಲವಾರು ಗಣ್ಯರು ಕೂಡ ಆಗಮಿಸಿದ್ದರು.
  • ಡಿವೈನ್‌ ಸ್ಟಾರ್‌ ರಿಷಬ್​ ಶೆಟ್ಟಿ ಕೂಡ ಆರ್‌ಸಿಬಿಗೆ ಸಪೋರ್ಟ್ ಮಾಡಲೆಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.
  • ಮ್ಯಾಚ್​ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಾಗ ರಿಷಬ್​ ಶೆಟ್ಟಿ ಮತ್ತು ಕ್ರಿಸ್ ಗೇಲ್‌ ಇಬ್ಬರು ಒಬ್ಬರಿಗೊಬ್ಬರು ಕೈ ಕುಲುಕಿಕೊಂಡ ಮೇಲೆ ಒಟ್ಟಿಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್‌ ನೋಡಲು ಬಂದ ಡಿವೈನ್‌ ಸ್ಟಾರ್!!‌ title=

Rishab Shetty And Chris Gayle At IPL: ಬೆಂಗಳೂರಿನಲ್ಲಿ ನಿನ್ನೆ ನಡೆದ ಐಪಿಎಲ್‌ ಪಂದ್ಯದಲ್ಲಿ ರಿಷಬ್‌ ಶೆಟ್ಟಿ ಮತ್ತು ಕ್ರಿಸ್ ಗೇಲ್ ಬೇಟಿಯಾಗಿದ್ದಾರೆ. ಮೇ 18 2024 ಶನಿವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಮ್ಯಾಚ್‌ ನಡೆದಿತ್ತು. ಈ ಪಂದ್ಯವನ್ನು ವೀಕ್ಷಿಸಲು ಹಲವಾರು ಗಣ್ಯರು ಕೂಡ ಆಗಮಿಸಿದ್ದರು.

ನಟ ರಿಷಬ್‌ ಶೆಟ್ಟಿ ಯೂನಿವರ್ಸಲ್​ ಬಾಸ್​ ಕ್ರಿಸ್ ಗೇಲ್ ಹಿಂದೆಗಡೆ ಕುಳಿತುಕೊಂಡು ಪಂದ್ಯವನ್ನು ನೋಡುತ್ತಿದ್ದರು. ಡಿವೈನ್‌ ಸ್ಟಾರ್‌ ರಿಷಬ್​ ಶೆಟ್ಟಿ ಕೂಡ ಆರ್‌ಸಿಬಿಗೆ  ಸಪೋರ್ಟ್ ಮಾಡಲೆಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಇಲ್ಲಿಯ ವಿಶೇಷವೇನೆಂದರೆ ರಿಷಬ್​ ಶೆಟ್ಟಿ ಹಾಗೂ ಕ್ರಿಸ್ ಗೇಲ್  ಇಬ್ಬರು ಜೊತೆಯಾಗಿ ಆರ್‌ಸಿಬಿ ತಂಡಕ್ಕೆ ಚಿಯರ್ ಅಪ್ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Rishab Shetty (@rishabshettyofficial)

ಇದನ್ನೂ ಓದಿ: Halagali: ಐತಿಹಾಸಿಕ ʻಹಲಗಲಿʼ ಕಥೆಗೆ ನಾಯಕನಾದ ನಟರಾಕ್ಷಸ ಧನಂಜಯ್!!‌

ರಾಯಲ್‌ ಚಾಲೆಂಜರ್ಸ್ ಬೆಂಗಳೂರು  ವರ್ಸಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹೈವೋಲ್ಟೇಜ್​  ಮ್ಯಾಚ್​ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಾಗ ರಿಷಬ್​ ಶೆಟ್ಟಿ ಮತ್ತು ಕ್ರಿಸ್ ಗೇಲ್‌ ಇಬ್ಬರು ಒಬ್ಬರಿಗೊಬ್ಬರು ಕೈ ಕುಲುಕಿಕೊಂಡ ಮೇಲೆ ಒಟ್ಟಿಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನು ನಟ ರಿಷಬ್‌ ಶೆಟ್ಟಿ ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿನ್ನೆಯ ಐಪಿಲ್‌ ಮ್ಯಾಚ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರುತುರಾಜ್‌ ಗಾಯಕ್ವಾಡ ಟಾಸ್ ಗೆದ್ದ ಮೊದಲು ಬೌಲಿಂಗ್‌ ಆಯ್ಕೆಮಾಡಿಕೊಂಡಿದ್ದರು. ಆದರೆ ನಿನ್ನೆಯ ಮ್ಯಾಚ್‌ ಸ್ವಲ್ಪ ಹೊತ್ತು ಮಳೆ ಅಡ್ಡಿಪಡಿಸಿದ್ದು,  ಮಧ್ಯದಲ್ಲಿಯೇ ನಿಲ್ಲಿಸಲಾಗಿತ್ತು. ಮಳೆ ನಿಂತ ಬಳಿಕ ಮತ್ತೆ ಮ್ಯಾಚ್ ಮತ್ತೆ ಆರಂಭವಾಗಿತು.  ಮಳೆರಾಯನ ಆರ್ಶಿವಾದದ ನಂತರ ಆರ್‌ಸಿಬಿ ಗೆಲುವನ್ನು ಬೀರಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  
 

Trending News